Friday, July 19, 2013
ನವರತ್ನ ಮಾಲಿಕೆ: ಕುಟುಂಬ ಶಾಂತಿಗೆ ಪಚ್ಚೆ
ಹಸಿರು ಶಾಂತಿಯ ಸಂಕೇತ. ಹಸಿರು ನಮ್ಮ ಜೀವನದ ಉಸಿರಾಗಬೇಕು. ಆ ಪ್ರಕೃತಿಯೊಡನೆ ನಾವು ಮೈಮರೆಯಬೇಕು. ನವರತ್ನಗಳಲ್ಲಿ ನಾಲ್ಕನೆಯದಾದ ಪಚ್ಚೆ ಯ ಬಣ್ಣ ಹಸಿರು. ಪಚ್ಚೆಯನ್ನು ಧರಿಸುವುದರಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಮನಸ್ಸಲ್ಲಿ ನೆಮ್ಮದಿ ಮನೆ ಮಾಡಿದಾಗ, ಕುಟುಂಬದಲ್ಲಿ ಶಾಂತಿ ತಾನಾಗೇ ಹರಡುತ್ತದೆ.
ಪಚ್ಚೆಯ ರೂಪ
ಪಚ್ಚೆ ಷಡ್ಬುಜಾಕಾರದಲ್ಲಿರುತ್ತದೆ. ಹಸಿರು ವರ್ಣದ್ದಾಗಿದೆ. ನವಗ್ರಹಗಳಲ್ಲಿ ಬುಧ ಗ್ರಹದ ಅಧಿಪತಿ. ಬೇರುಂಡ ಎಂಬ ಪಚ್ಚೆ ಹೆಚ್ಚು ಪ್ರಸಿದ್ಧವಾಗಿದೆ. ಆದರೆ ಇದರ ಬೆಲೆ ಅಧಿಕ. ಇನ್ನುಳಿದಂತೆ ಮಾರುಕಟ್ಟೆಯಲ್ಲಿ ಹಳದಿ ಮಿಶ್ರಿತ ಪಚ್ಚೆಗಳು ಹೆಚ್ಚಾಗಿ ಸಿಗುತ್ತವೆ. ಇವುಗಳ ಬೆಲೆ ಅಷ್ಟೇನು ದುಬಾರಿಯಲ್ಲ. ಪಚ್ಚೆಗೆ ಮರಕತ, ಪಾಚಿ, ಹರಿತಮಣಿ, ಗರಲಾರಿ ಎಂಬ ಹೆಸರುಗಳಿವೆ.
ಬಗೆ ಬಗೆ ಪಚ್ಚೆ
ಪಚ್ಚೆಗಳಲ್ಲಿ ನಾಲ್ಕು ವಿಧಗಳಿವೆ. ಅದೆಂದರೆ 1. ಬ್ರಾಹ್ಮಣ ಪಚ್ಚೆ - ಇದರ ಬಣ್ಣ ಶಿರೀಷ ಪುಷ್ಪದಂತಿರುತ್ತದೆ.
2. ಕ್ಷತ್ರಿಯ ಪಚ್ಚೆ - ಹಸಿರು ಬಣ್ಣ 3. ವೈಶ್ಯ ಪಚ್ಚೆ - ಹಳದಿ ಮತ್ತು ಹಸಿರು ಮಿಶ್ರಿತವಾಗಿರುತ್ತದೆ. 4. ಶೂದ್ರ ಪಚ್ಚೆ : ಕಡು ಹಸಿರು ಅಥವಾ ಶ್ಯಾಮಲ ವರ್ಣದಲ್ಲಿರುತ್ತದೆ. ಅಮೆರಿಕದಲ್ಲಿ ಪಚ್ಚೆಗೆ ಬಕ್ಸ ಎನ್ನುತ್ತಾರೆ. ಆಫ್ರಿಕಾದಲ್ಲಿ ಲಭ್ಯವಿರುವ ಪಚ್ಚೆಗಳು ಶ್ಯಾಮಲ ವರ್ಣದಲ್ಲಿರುತ್ತವೆ. ಆದರೆ ಬ್ರೆಜಿಲ್ನಲ್ಲಿ ಲಭ್ಯವಿರುವ ಪಚ್ಚೆ ಹರಳು ಹಳದಿ ಮಿಶ್ರಿತವಾಗಿರುತ್ತವೆ.
ಪತ್ತೆ ಹೇಗೆ?
ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಪಚ್ಚೆಗಳು ಲಭ್ಯವಿವೆ. ಶುದ್ಧ ಪಚ್ಚೆ ಎಂದು ನಿರ್ಣಯಿಸಲು ಪಚ್ಚೆಯ ಹರಳನ್ನು ಬಿಳಿಯ ಬಟ್ಟೆಯ ಮೇಲಿಡಬೇಕು. ಆಗ ಪಚ್ಚೆಯ ಬೆಳಕಿಗೆ ಬಟ್ಟೆಯೂ ಹಸಿರು ಬಣ್ಣದಂತೆ ಕಂಡರೆ ಅದು ಶುದ್ಧವಾದ ಹರಳು ಎಂದರ್ಥ. ನಕಲಿ ಪಚ್ಚೆಗಳು ಗಾಜಿನಂತೆ ಹೊಳೆಯುತ್ತವೆ.
ಯಾರಿಗೆ ಶುಭ?
ವೃಷಭ : ವೃಷಭ ರಾಶಿಯ ಅಧಿಪತಿ ಶುಕ್ರ. ಬುಧನಿಗೆ ಶುಕ್ರ ಮಿತ್ರನಾದ್ದರಿಂದ ವೃಷಭ ರಾಶಿಯವರು ಧರಿಸಬಹುದು.
ಮಿಥುನ : ಮಿಥುನ ರಾಶಿಯ ಅಧಿಪತಿ ಬುಧ. ಹಾಗಾಗಿ ಈ ರಾಶಿಯವರು ಪಚ್ಚೆಯನ್ನು ಧರಿಸುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ, ಮಾತೃವರ್ಗದಿಂದ ಲಾಭ, ವಾಹನ ಯೋಗ, ವಿಶೇಷ ಧನಲಾಭ ಉಂಟಾಗುತ್ತದೆ.
ಸಿಂಹ : ಸಿಂಹ ರಾಶಿಯ ಅಧಿಪತಿ ರವಿ. ಬುಧನಿಗೆ ರವಿ ಮಿತ್ರ. ಹಾಗಾಗಿ ಪಚ್ಚೆ ಧರಿಸುವುದರಿಂದ ಸಂತಾನ ಸುಖ, ಧನಲಾಭ, ಹೆಚ್ಚಿನ ಕೀರ್ತಿ ಉಂಟಾಗುತ್ತದೆ.
ಕನ್ಯಾ : ಬುಧನೇ ರಾಶ್ಯಾಧಿಪತಿ. ಹಾಗಾಗಿ ಬುಧ ದೆಸೆಯಲ್ಲಿ ಪಚ್ಚೆ ಧರಿಸಿದರೆ ಹೆಚ್ಚಿನ ಲಾಭ. ಆರೋಗ್ಯ ಭಾಗ್ಯ ಉಂಟಾಗುವುದು.
ತುಲಾ : ರಾಶ್ಯಾಧಿಪತಿ ಶುಕ್ರ. ಬುಧ, ಶುಕ್ರ ಸ್ನೇಹಿತರು. ಹಾಗಾಗಿ ಈ ರಾಶಿಯವರು ಪಚ್ಚೆಯನ್ನು ಧರಿಸಬಹುದು.
ಮಕರ : ರಾಶ್ಯಾಧಿಪತಿ ಶನಿ. ಬುಧ, ಶನಿ ಸ್ನೇಹಿತರು. ಹಾಗಾಗಿ ಈ ರಾಶಿಯವರು ಪಚ್ಚೆಯನ್ನು ಧರಿಸಬಹುದು.
ಕುಂಭ : ಅಧಿಪತಿ ಶನಿಯಾದ್ದರಿಂದ ಪಚ್ಚೆ ಧರಿಸಬಹುದು.
ಧಾರಣೆ ಹೇಗೆ?
ಪಚ್ಚೆಯನ್ನು ಬುಧವಾರ ಧರಿಸಬೇಕು. ಪಚ್ಚೆ ಉಂಗುರವನ್ನು ಹಸಿರು ವಸ್ತ್ರದ ಮೇಲಿರಿಸಿ, ಹಸಿರು ಗಂಧ, ಹಸಿರು ಅಕ್ಷತೆ, ಹಸಿರು ಬಣ್ಣದ ಧೂಪದಿಂದ ಪೂಜಿಸಬೇಕು. ಉಂಗುರ ಧಾರಣೆಗೆ ಮುನ್ನ 'ಓಂ ಬುಂ ಬುಧಾಯ ನಮಃ' ಎಂಬ ಮಂತ್ರವನ್ನು 1700 ಬಾರಿ ಜಪಿಸಬೇಕು. ಪಚ್ಚೆಯ ಉಂಗುರವನ್ನು ಬಲಗೈಯ ಕನಿಷ್ಠ ಬೆರಳಿಗೆ ಧರಿಸುವುದು ಉತ್ತಮ.
Subscribe to:
Post Comments (Atom)
No comments:
Post a Comment