Monday, July 23, 2012

ವೈದ್ಯಕೀಯ ಶಿಕ್ಷಣದಲ್ಲಿ ನವಗ್ರಹಗಳ ಪಾತ್ರ *

ರಾಶಿಗಳೂ ನಮಗೆ ಯಾವ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳು ಆಗುತ್ತವೆ ಮತ್ತು ಯಾವ್ಯಾವ ಸಾಧನೆಗಳನ್ನು ನಾವು ಮಾಡಲು ಸಾಧ್ಯ ಎಂದು ಹೇಳುತ್ತವೆ. ಅದೇನೆಂದು ನಿಮಗೆ ಗೊತ್ತಾ ? ಇತ್ತೀಚಿನ ದಿನಗಳಲ್ಲಿ ಪಿಯುಸಿ ಪರೀಕ್ಷೆಯ ನಂತರ ಮಕ್ಕಳಿಗೆ ಯಾವ ಶಿಕ್ಷಣ ಕೊಡಿಸಬೇಕೆಂದು ತಂದೆ ತಾಯಿಯರು ಚಿಂತಿಸತೊಡಗುತ್ತಾರೆ. ಕೆಲವು ಮಕ್ಕಳು ಇಂಜಿನಿಯರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವರು ಕಲೆ, ವಾಣಿಜ್ಯ, ಹೀಗೆ ಹತ್ತು ಹಲವಾರು ಬಗೆಯ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಮಾತ್ರ ವೈದ್ಯಕೀಯ ಶಿಕ್ಷಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರೂ ವೈದ್ಯರಾಗಲು ಸಾಧ್ಯವಿಲ್ಲ. ಎಲ್ಲರೂ ಎಂಜಿನಿಯರ್ ಆಗಲು ಸಾಧ್ಯವಿಲ್ಲ. ಆದರೆ ಜಾತಕದ ಅನುಸಾರವಾಗಿ ಕುಂಡಲಿಯಲ್ಲಿ ಯಾವ ಯಾವ ಗ್ರಹಗಳು ಯಾವ ಮನೆಯಲ್ಲಿದೆ ಎಂಬುದನ್ನು ನಿರ್ಧರಿಸಿ ಮುಂದೆ ಅವರ ಶಿಕ್ಷಣ ಯಾವ ವಿಚಾರದ ಬಗ್ಗೆ ಇರುವುದೆಂದು ತಿಳಿದುಕೊಳ್ಳಬಹುದು. ಅನಾದಿಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಹಾಗೂ ವೈದ್ಯಕೀಯ ಶಾಸ್ತ್ರಕ್ಕೆ ನಿಕಟ ಸಂಬಂಧವಿದೆ. ಈಶ್ವರನ ಮುಖದಿಂದ ಪ್ರಪಂಚದ ಸಕಲ ಜೀವಿಗಳ ಉದ್ಧಾರಕ್ಕಾಗಿ ವೇದಗಳು ಸೃಷ್ಟಿಯಾದವು. ವೇದಗಳಲ್ಲಿ ಕಲೆ, ವಿಜ್ಞಾನ, ಜ್ಞಾನ, ವಿದ್ಯೆಗಳು ಅಡಕವಾಗಿವೆ. ಅಥರ್ವಣ ವೇದದ ಮೂಲಕ ಆಯುರ್ವೇದದ ವಿಚಾರಗಳನ್ನು ಸಂಗ್ರಹಿಸಿ ಚರ್ತುಮುಖ ಬ್ರಹ್ಮದೇವನು ಮಾನವನ ಕಲ್ಯಾಣಕ್ಕಾಗಿ ಬ್ರಹ್ಮ ಸಂಹಿತೆ ಎಂಬ ವೈದ್ಯ ರಹಸ್ಯ ರಚಿಸಿದ್ದಾನೆ. ಈ ಆಯುರ್ವೇದವನ್ನು ಮಹಾ ಮುನಿಗಳಾದ ಶ್ರಿ ಶುಶ್ರುತ , ಶ್ರೀ ಚರಕ , ಮುನಿ ಶ್ರೀ ಮತ್ತು ವಾಗ್ಭಟ ಮುಂತಾದವರು ಅಭ್ಯಾಸ ಮಾಡಿ ಆಯುರ್ವೇದ ಶಾಸ್ತ್ರವನ್ನು ಬೆಳೆಸಿದರು. ಹಾಗೂ ಸುಪ್ರಸಿದ್ಧ ವೈದ್ಯರಾದರು. ಈಗ ವೈದ್ಯಕೀಯ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿ ಹೋಮಿಯೋಪಥಿ ಆಯುರ್ವೇದ, ಯುನಾನಿ, ಅಲೋಪತಿ, ವೈದ್ಯ ಪದ್ಧತಿ ಮುಂದುವರೆದು ಸಾಕಷ್ಟು ಬದಲಾವಣೆಗಳಾಗುತ್ತಿವೆ. ಒಬ್ಬ ವ್ಯಕ್ತಿ ವೈದ್ಯನಾಗಬೇಕಾದರೆ ಆತನ ಜಾತಕವನ್ನು ಪರಿಶೀಲಿಸಿ ಆತನ ಭವಿಷ್ಯ ಹೇಳಬೇಕಾಗುತ್ತದೆ. ಮೊದಲಿಗೆ ರಾಶಿಗಳಿಗೆ ಸಂಬಂಧಿಸಿದಂತೆ ಯಾವ ವಿಭಾಗದಲ್ಲಿ ಪರಿಣತಿ ಹೊಂದುತ್ತಾರೆಂದು ನೋಡೋಣ. ಮೇಷ ಹಾಗೂ ವೃಶ್ಚಿಕ: ಈ ರಾಶಿಗಳಿಗೆ ಸಂಬಂಧಿಸಿದಂತೆ ಮೇಷ ರಾಶಿ ತಲೆ ಹಾಗೂ ಮಸ್ತಕಕ್ಕೆ ಸಂಬಂಧಿಸಿದೆ. ಹಾಗೂ ವೃಶ್ಚಿಕ ರಾಶಿ ಗುಹೇಂದ್ರಿಯ ಹಾಗೂ ಮೂತ್ರಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಕುಜನಾಗಿದ್ದು , ಈ ಕುಜನು ಬಲಿಷ್ಠನಾಗಿದ್ದರೆ ಮೆದುಳಿಗೆ ಸಂಬಂಧಿಸಿದ ಪರಿಣಿತಿ ವೈದ್ಯರಾಗುತ್ತಾರೆ. ನುರಿತ ಶಸ್ತ್ರಚಿಕಿತ್ಸಕರಾಗುತ್ತಾರೆ ಹಾಗೂ ಒಳ್ಳೆಯ ದಂತ ವೈದ್ಯರಾಗುತ್ತಾರೆ ಮತ್ತು ನುರಿತ ದಾದಿಯರಾಗುತ್ತಾರೆ. ಗುಪ್ತರೋಗ ತಜ್ಞರಾಗುತ್ತಾರೆ. ವೃಷಭ ಹಾಗೂ ತುಲಾ ರಾಶಿ: ಈ ರಾಶಿಗಳಿಗೆ ಸಂಬಂಧಿಸಿದಂತೆ ವೃಷಭ ರಾಶಿ ಮುಖಕ್ಕೆ ಸಂಬಂಧಿಸಿದೆ. ತುಲಾ ರಾಶಿ ತೊಡೆ ಹಾಗೂ ವೀರ್ಯಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಶುಕ್ರನಾಗಿದ್ದು ಈ ಶುಕ್ರನು ಬಲಿಷ್ಠನಾಗಿದ್ದರೆ ದಂತ ವೈದ್ಯರು, ನುರಿತ ಶಸ್ತ್ರ ಚಿಕಿತ್ಸಕರೂ ಆಗುತ್ತಾರೆ. ಮಿಥುನ ಹಾಗೂ ಕನ್ಯಾ: ಈ ರಾಶಿಗಳಿಗೆ ಸಂಬಂಧಿಸಿದಂತೆ ಮಿಥುನ ರಾಶಿ ಕೈಗಳು ಹಾಗೂ ಕುತ್ತಿಗೆ ಸಂಬಂಧಿಸಿದೆ. ಕನ್ಯಾ ರಾಶಿ ಸೊಂಟ ಹೊಟ್ಟೆಯ ಕೆಳಭಾಗಕ್ಕೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಬುಧ. ಈ ಬುಧನು ಬಲಿಷ್ಠನಾಗಿದ್ದರೆ ವೈದ್ಯಶಾಸ್ತ್ರದಲ್ಲಿ ಪಾಂಡಿತ್ಯ ಹೊಂದುವರು ಹಾಗೂ ವೈದ್ಯಕೀಯ ವಿಚಾರ, ವಿಷಯಗಳಲ್ಲಿ ಅನೇಕ ಸಂಶೋಧನೆ ನಡೆಸುವರು. ಕಟಕ: ಈ ರಾಶಿಯು ಹೃದಯ, ಎದೆ, ಹೊಟ್ಟೆಗೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಚಂದ್ರ. ಈತ ಬಲಿಷ್ಠನಾಗಿದ್ದರೆ ಪ್ರತಿಭಾನ್ವಿತ ಅನುಭವಿ, ಹೃದಯ ತಜ್ಞ ಹಾಗೂ ನುರಿತ ಶಸ್ತ್ರಚಿಕಿತ್ಸಕ ಹಾಗೂ ನುರಿತ ದಾದಿಯರಾಗುವರು. ಸಿಂಹ: ಈ ರಾಶಿಯ ಉದರಕ್ಕೆ ಸಂಬಂಧಿಸಿದೆ. ಈ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಬಲಿಷ್ಠನಾಗಿದ್ದರೆ ಉಚ್ಛ ಕ್ಷೇತ್ರದಲ್ಲಿದ್ದರೆ, ನುರಿತ ಶಸ್ತ್ರಚಿಕಿತ್ಸಕ, ವೈದ್ಯ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಔಷಧ ಶಾಸ್ತ್ರದಲ್ಲಿ ಪರಿಣಿತಿ ಹೊಂದುವರು. ಧನಸ್ಸು ಹಾಗೂ ಮೀನ: ಧನಸ್ಸು ರಾಶಿಯು ತೊಡೆ, ಮೊಣಕಾಲುಗಳಿಗೆ ಸಂಬಂಧಿಸಿದೆ. ಮೀನ ರಾಶಿಯ ಕಾಲುಗಳು, ಪಾದಗಳಿಗೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಅಧಿಪತಿ ಗುರು. ಗುರು ಬಲಿಷ್ಠನಾಗಿದ್ದರೆ ನುರಿತ ದಾದಿಯರಾಗುತ್ತಾರೆ. ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಮುಖ್ಯಸ್ಥರಾಗುವರು. ಮೂಳೆ ವೈದ್ಯ ಹಾಗೂ ಶಸ್ತ್ರಚಿಕಿತ್ಸಕರಾಗುವರು. ಮಕರ ಹಾಗೂ ಕುಂಭ: ಮಕರ ರಾಶಿಯು ಮೊಣಕಾಲಿಗೆ ಸಂಬಂಧಿಸಿದೆ. ಕುಂಭ ಮಂಡಿಗೆ ಸಂಬಂಧಿಸಿದೆ. ಇವೆರಡು ರಾಶಿಗಳಿಗೆ ಶನೇಶ್ವರನು ಅಧಿಪತಿ. ಈತ ಬಲಿಷ್ಠನಾಗಿದ್ದರೆ ಮೂಳೆ ತಜ್ಞ , ನುರಿತ ಶಸ್ತ್ರಚಿಕಿತ್ಸಕರಾಗುವರು. ಸೂರ್ಯ ಹಾಗೂ ರಾಹು ಕಾರಕಾಂಶದಲ್ಲಿದ್ದು ಶುಭಗ್ರಹಗಳು ನೋಡುತ್ತಿದ್ದರೆ ಅರಿವಳಿಕೆ ತಜ್ಞರಾಗುತ್ತಾರೆ ಹಾಗೂ ಸುಪ್ರಸಿದ್ಧ ಔಷಧಿ ವ್ಯಾಪಾರಿಗಳಾಗುತ್ತಾರೆ. ಬುಧ ರಾಹು ಮನೆ ವೈದ್ಯ ವೃತ್ತಿಗೆ ಕಾರಕರು. ಸೂರ್ಯ ಕುಜರು ಅಗ್ನಿ ರಾಶಿಗಳಲ್ಲಿ ಅಥವಾ ಉಚ್ಛ ಸ್ವಮಿತ್ರ ಕ್ಷೇತ್ರಗಳಲ್ಲಿ ಇದ್ದರೆ ಯಶಸ್ವಿ ವೈದ್ಯರಾಗುತ್ತಾರೆ. ಯಾವ ವೈದ್ಯನೇ ಆಗಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಥವಾ ವೃತ್ತಿಯಲ್ಲಿ ಒಳ್ಳೆಯ ಪರಿಣಿತಿ ಹೊಂದಿ ಯಶಸ್ವಿ ವೈದ್ಯನಾಗಬೇಕಾದರೆ ಕಾರಕ ಗ್ರಹಗಳು ಹೆಚ್ಚಾಗಿ ಪುರುಷ ರಾಶಿಗಳಲ್ಲಿ ಇರಬೇಕು. ಪುರುಷ ರಾಶಿಗಳೆಂದರೆ ಸೂರ್ಯ, ಕುಜ ಹಾಗೂ ಗುರು ಪುರುಷ ಗ್ರಹಗಳಾಗಿವೆ. ಸಿಂಹ, ಮೇಷ, ಧನಸ್ಸು ಇವು ಪುರುಷ ರಾಶಿಗಳಾಗಿರುತ್ತವೆ. ಕುಂಡಲಿಯಲ್ಲಿ ಚಂದ್ರನು ಪುರುಷ ರಾಶಿಯಲ್ಲಿ ಇದ್ದರೆ ಅಂತಹ ವ್ಯಕ್ತಿಗಳು ಸುಪ್ರಸಿದ್ಧ ವೈದ್ಯರಾಗಿರುತ್ತಾರೆ. ಜತೆಗೆ ಕೀರ್ತಿ ಸನ್ಮಾನಕ್ಕೆ ಪಾತ್ರರಾಗಿರುತ್ತಾರೆ. ಡಾ.ಎಸ್ .ಎನ್. ಶೈಲೇಶ್, ಬಾಣಾವರ

ಆಷಾಢ ಮಾಸ: ಏನಿದರ ಮಹತ್ವ? *ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.

ಆಷಾಢ ಮಾಸ ಇನ್ನೇನು ನಮ್ಮ ಬದುಕಿಗೆ ಕಾಲಿಡಲಿದೆ. ಈ ಮಾಸ ಆರಂಭವಾದರೆ ಸಾಕು ಯಾರೂ ಒಳ್ಳೆಯ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ಯಾಕೆಂದರೆ ಇದು ಮಾಮೂಲಿ ಮಾಸವಲ್ಲ. ಅದು ಏನೆಂದು ಇಲ್ಲಿದೆ ಓದಿ. ಪ್ರತಿ ವರ್ಷ ಆಷಾಢ ಮಾಸ ಪ್ರಾರಂಭವಾದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇದವಾಗುವುದು. ಇದಕ್ಕೆ ಮುಖ್ಯವಾಗಿ ಕಾರಣ ನೂರಾರು. ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರವಾಗಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಟಿತವಾಗುತ್ತಿದ್ದವು. ಹಾಗೂ ರೈತರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು. ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಶಾಸ್ತ್ರದಲ್ಲಿ ಸಹ ಆಷಾಡ ಮಾಸ ಅಶುಭ ಮಾಸ ಎಂದು ಹೇಳಿಲ್ಲ. ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುವುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು. ಆಷಾಢ ಮಾಸದ ಮಹತ್ವ * ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ. * ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ. * ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು. * ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ. * ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ. * ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಈ ಆಚರಣೆ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು. ಈ ಮಾಸದಲ್ಲೇ ಇದೆಲ್ಲಾ ಆರಂಭವಾಗಿದ್ದು.. * ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ. * ಇಂದ್ರನು ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ. ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ. * ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. * ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ. ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂ ದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.

ಯಾವ ದಾನ ಮಾಡಿದರೆ ಯಾವ ಫಲ?

ದಾನದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ. ಅನೇಕ ಬಗೆಯ ದಾನಗಳನ್ನು ನಾವು ಗುರುತಿಸಬಹುದು. ಬನ್ನಿ, ಜೋತಿಷ್ಯದಂತೆ ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂದು ನೋಡೋಣ. 1,ಅನ್ನ ದಾನ ಮಾಡಿದರೆ: ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ. 2.ವಸ್ತು ದಾನ ಮಾಡಿದರೆ ಆಯುಷ್ಯ ಹೆಚ್ಚುತ್ತದೆ. 3.ಜೇನು ತುಪ್ಪ ದಾನಮಾಡಿದರೆ: ಪುತ್ರ ಭಾಗ್ಯ ಕಾಣಿಸುತ್ತದೆ. 4.ದೀಪ ದಾನಮಾಡಿದರೆ ಕಣ್ಣು ಚನ್ನಾಗಿ ಕಾಣಿಸುತ್ತದೆ. 5.ಅಕ್ಕಿ ದಾನಮಾಡಿದರೆ ಪಾಪ ಪರಿಹಾರವಾಗುತ್ತದೆ. 6.ತುಪ್ಪ ದಾನಮಾಡಿದರೆ ರೋಗ ನಿವಾರಣೆಯಾಗುತ್ತದೆ. 7. ಹಾಲು ದಾನಮಾಡಿದರೆ ದುಖಃ ತೀರುತ್ತದೆ. 8. ಮೊಸರು ದಾನಮಾಡಿದರೆ ಇಂದ್ರಿಯಗಳು ವೃದ್ಧಿಯಾಗುತ್ತವೆ. 9.ಹಣ್ಣು ಗಳನ್ನು ದಾನಮಾಡಿದರೆ ಬುದ್ಧಿ,ಸಿದ್ಧಿಯು ಲಭಿಸುತ್ತದೆ. 10.ಬಂಗಾರ ದಾನಮಾಡಿದರೆ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ. 11.ಬೆಳ್ಳಿ ದಾನಮಾಡಿದರೆ ಮನಸ್ಸಿನಚಿಂತೆ ನೀಗುತ್ತದೆ. 12.ಹಸು(ಗೋವು) ದಾನಮಾಡಿದರೆ ಖುಷಿ,ದೇವರುಗಳು,ಪಿತೃಗಳಿಂದ ವಿಮೋಚನೆ 13.ತೆಂಗಿನಕಾಯಿ ದಾನಮಾಡಿದರೆ ನೆನೆದ ಕಾರ್ಯ ಸಿದ್ಧಿಸುತ್ತದೆ. 14. ನೆಲ್ಲಿಕಾಯಿ ದಾನಮಾಡಿದರೆ ಜ್ಞಾನ ದಕ್ಕುತ್ತದೆ. 15. ಭೂಮಿ ದಾನಮಾಡಿದರೆ ಈಶ್ವರ ದರ್ಶನವಾಗುತ್ತದೆ.

Wednesday, July 4, 2012

ಕವನಗಳು

|ಹುಡುಗ ಕಲ್ಲು ಹೊಡೆದ ಮರದಿಂದ
ಹಣ್ಣುಬಿತ್ತು||
ವಾ ವಾ ವಾ
||ಹುಡುಗಿ ಕಣ್ಣು ಹೊಡೆದಳು ದೇಹದಿಂದ
ಆರ್ಟುಬಿತ್ತು||
ವಾ ವಾ ವಾ.
||ಹುಡುಗ ಪ್ರೀತಿಸುತ್ತಾನೆ
ಹುಡುಗಿಯನ್ನ (ಮನಸ್ಸನ್ನ)||
||ಹುಡುಗಿ ಪ್ರೀತಿಸುತ್ತಾಳೆ
ಹುಡುಗನ ಮನಿಯನ್ನ(ಪರ್ಸನ್ನ)||
ನೀರು,ಗೊಬ್ಬರ ಹಾಕಿದರೆ
ಗಿಡಬೆಳೆಯುತ್ತದೆ
ಪ್ರೀತಿ,ಆಸರೆ ತೋರಿದರೆ
ಗೆಳೆತನ ಬೆಳೆಯುತ್ತದೆ.
ಮರ ಬಳ್ಳಿಗೆ ಆಸರೆ
ಸರ ತರಳೆಗೆ ಆಸರೆ
(ಕರಿಮಣಿಸರ ಹೆಣ್ಣಿಗೆ ಆಸರೆ)
ಕರ (ಕಾಸು) ಕೂಸಿಗೆ ಆಸರೆ.
ಬಕ್ತ:-
ದೇವರೆ ನನಗೆ ಕಷ್ಟ ಕೊಡು,ನೋವು ಕೊಡು,
ಹಿಂಸೆಕೊಡು,ಹುಚ್ಚನನ್ನಾಗಿ ಮಾಡು.
ದೇವರು,
ಬಕ್ತ ಅವೆಲ್ಲ ಯಾಕೆ ಒಂದೇ ಒಂದು ವರ ಕೊಡುತ್ತೇನೆ
ನಿನಗೆ ಅವೆಲ್ಲಾ ಸಿಗುತ್ತವೆ
ಬಕ್ತ,
ಆಗಾದರೆ ನನಗೆ ಅದನ್ನೇ ಕೊಡು ದೇವರೆ?
ದೇವರು,
ಏನಿಲ್ಲ ಒಂದು ಹುಡುಗಿಯನ್ನು ಕೊಡುತ್ತೇನೆ
ಪ್ರೀತಿಸು ಸಾಕು,

Tuesday, July 3, 2012

ಗ್ರಾಮ ಸಾಲಾವಳಿ ಗ್ರಾಮ ನಕ್ಷತ್ರ ದಿಂದ ತನ್ನ ನಾಮ ನಕ್ಷತ್ರದ (ಆ ಗ್ರಾಮದಲ್ಲಿ ವಾಸಿಸುವವನ) ವರೆಗೆ ಎಣಿಸಿದಾಗ ೫ ನಕ್ಷತ್ರ ಶಿರಸ್ಸಿಗೆ ೨ ನಕ್ಷತ್ರ ಮುಖಕ್ಕೆ ೫ ನಕ್ಷತ್ರ ಉದರದಲ್ಲಿ ೬ ನಕ್ಷತ್ರ ಎರಡೂ ಪಾದದಲ್ಲಿ ೧ ನಕ್ಷತ್ರ ಪುಷ್ಟದಲ್ಲಿ ೪ ನಕ್ಷತ್ರ ನಾಭಿಯಲ್ಲಿ ೨ ನಕ್ಷತ್ರ ಗುಹ್ಯದಲ್ಲಿ ೨ ನಕ್ಷತ್ರ ಕೈಗಳಲ್ಲಿ ಅಂಗಗಳಲ್ಲಿನ ಫಲ ಶಿರಸ್ಸು ಲಾಭ ಮುಖ ಧನ ನಾಶ ಹಾನಿ ಕೇಡು ಉದರ ಧನ ದಾನ್ಯಲಾಭ ಪಾದ ದಾರಿದ್ರ್ಯವು ನಾಭಿ ಸಂಪದಭಿವೃದ್ದಿ ಪುಷ್ಟ ಪ್ರಾಣ ಹಾನಿ ಗುಹ್ಯ ರೋಗಪೀಡೆ ಕೈಗಳಲ್ಲಿ ನಷ್ಟವು ೨೭ ನಕ್ಷತ್ರಗಳು ೧.ಅಶ್ವಿನಿ ೨.ಭರಣಿ ೩.ಕೃತಿಕ ೪.ರೋಹಿಣಿ ೫.ಮೃಗಶಿರ ೬.ಆರಿದ್ರಾ ೭.ಪುನರ್ವಸು ೮.ಪುಷ್ಯ ೯.ಅಶ್ಲೇಷ ೧೦.ಮಾಘ(ಮುಖೆ) ೧೧.ಹುಬ್ಬ ೧೨.ಉತ್ತರ ೧೩.ಹಸ್ತ ೧೪.ಚಿತ್ತ ೧೫.ಸ್ವಾತಿ ೧೬.ವಿಶಾಖ ೧೭.ಅನುರಾಧ ೧೮.ಜ್ಯೇಷ್ಟ ೧೯.ಮೂಲ ೨೦.ಪೂರ್ವಾಷಾಡ ೨೧.ಉತ್ತರಾಷಾಡ ೨೨.ಶ್ರವಣ ೨೩.ಧನಿಷ್ಟ ೨೪.ಶತಭಿಷ ೨೫.ಪೂರ್ವಬಾದ್ರಪದ ೨೬.ಉತ್ತರಬಾದ್ರಪದ ೨೭.ರೇವತಿ

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು:

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು: ರಂಗೋಲಿ, ಮಣೆ / ಮಂಟಪ ದೇವರ ವಿಗ್ರಹ, ದೇವರ ಪಟ ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ. ಅರಿಶಿನ, ಕುಂಕುಮ, ಮಂತ್ರಾಕ್ಷತೆ ಶ್ರೀಗಂಧ, ಊದಿನ ಕಡ್ಡಿ ಹೂವು, ಪತ್ರೆ, ಗೆಜ್ಜೆ ವಸ್ತ್ರ ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ ಆರತಿ ತಟ್ಟೆ, ಸೊಡಲು, ಹೂಬತ್ತಿ, ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ : ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ ಮರದ ಜೊತೆ / ಬಾಗಿನ ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ ಸೋಬಲಕ್ಕಿ, ಉಪಾಯನ ದಾನ ನವಗ್ರಹ ಮಂಡಲ ......ಇತ್ಯಾದಿ ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ. 16 Steps of Pooja / ಪೂಜಾ ವಿಧಾನ ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ. ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು. ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ: 1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು. 2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು. 3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು. 5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು. 6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು. 7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು. 8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು. 9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು. 10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು. 11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು. 12.ದೀಪ - ದೀಪ ಸಮರ್ಪಣೆ ಮಾಡುವುದು. 13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು. 14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು. 15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು. 16. ನಮಸ್ಕಾರ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು. ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ :) ಪೂಜಾ ಸಂಕಲ್ಪ ಮಂತ್ರ ಪೂಜಾ ಸಂಕಲ್ಪ ಮಂತ್ರದ ಬಗ್ಗೆ ಓದುಗರೊಬ್ಬರು ಕೇಳಿದ್ದಾರೆ. ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ. (days of the week) ವಾಸರ Sunday: ಭಾನು ವಾಸರ; Monday: ಇಂದು/ಸೊಮ ವಾಸರ; Tuesday: ಭೌಮ ವಾಸರ; Wednesday: ಸೌಮ್ಯ ವಾಸರ; Thursday: ಗುರು ವಾಸರ; Friday: ಬೃಗು ವಾಸರ; Saturday: ಸ್ಥಿರ ವಾಸರ Ingredients:ಪಂಚಾಮೃತ 1/4 cup - milk / ಹಾಲು 1 tbsp - yogurt /curd / ಮೊಸರು 1 tsp - sugar / ಸಕ್ಕರೆ 1/2 tsp - honey / ಜೇನು ತುಪ್ಪ 1/2 tsp - ghee / ತುಪ್ಪ few pieces of banana, raisins, cashews /ಬಾಳೆ ಹಣ್ಣು, ದ್ರಾಕ್ಷಿ, ಗೋಡಂಬಿ (optional

ದುಷ್ಟಗ್ರಹ ದೋಷ,ನಷ್ಟ,ತೊಂದರೆ,ನವಗ್ರಹದೋಷ ಪರಿಹಾರಕ್ಕಾಗಿ

ದುಷ್ಟಗ್ರಹ ದೋಷ,ನಷ್ಟ,ತೊಂದರೆ,ನವಗ್ರಹದೋಷ,ಮಾಟ ಇತ್ಯಾದಿ ಸಕಲ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಈ ಕೆಳಗಿನ ಸಾಮಾನುಗಳನ್ನು ತಂದು ಒಂದು ಶನಿವಾರ ಸಾಯಂಕಾಲ ಗಡಿಗೆ ಅಥವ ಮಡಿಕೆಯಲ್ಲಿ ಹಾಕಿ "ಓಂ ನಮೋ ಭಾಸ್ಕರಾಯ ಮಮ ಸರ್ವ ಗ್ರಹಪೀಡಾ ನಿವಾರಣಂ ಕುರುಕುರು ಸ್ವಾಹಾ"ಈ ಸೂರ್ಯ ಮಂತ್ರವನ್ನು ೧೦೮ ಸಲ ಜಪಿಸಿ ನಂತರ ಮುಚ್ಚಳ ಹಾಕಿ ಅದನ್ನು ತಗೆದುಕೊಂಡು ಹೋಗಿ ಅರಳೀ ಮರದ ಬುಡದಲ್ಲಿ ಇಟ್ಟು ಬರುವುದು ಎಕ್ಕದಬೇರು ಉಮ್ಮತ್ತಿಬೇರು ದರ್ಬೆ ಬೇರು ಮತ್ತು ಕಡ್ಡಿ ಉತ್ತರಾಣಿಬೇರು ರಾಗಿ ಬೇರು ಜುಮ್ಮನೇರಳೆ ಬೇರು ಮತ್ತು ಎಲೆ ಅತ್ತಿ ಎಲೆ ಮಾವಿನ ಎಲೆ ಅಕ್ಕಿ ಕಡಲೆ ಗೋದಿ ಹೆಸರು ಎಳ್ಳು ಬಿಳಿ ಸಾಸಿವೆ ಚಂದನ ಗೋಮೂತ್ರ(ಗಂಜಲ) ಹಾಲು ತುಪ್ಪ ಜೇನು ಈ ರೀತಿ ಮಾಡಿದ ನಂತರ ಮನೆಯಲ್ಲಿ ೨೧ ದಿನಗಳವರೆಗೆ ಮಾಂಸಾಹಾರ ಮಾಡಬಾರದು ೨೧ನೇ ದಿವಸ ಪಾಯಸ ಮಾಡಿ ನಾಲ್ಕೈದು ಜನರಿಗೆ ಉಣಬಡಿಸ ಬೇಕು. ಈ ೨೧ ದಿನಗಳು ಮನೆಯಲ್ಲಿ ನಿತ್ಯವೂ ಈ ಕೆಳಗಿನ ವಸ್ತುಗಳಿಂದ ಧೂಪ ಹಾಬೇಕು ಮತ್ತು ಮನೆ ದೇವರುಗಳಿಗೆ ಈ ಸಮಯದಲ್ಲಿ ಪಂಚಾಮೃತಾಭಿಷೇಕ ಮಾಡಿಸುವುದು ಸೂಕ್ತ. ಗರಿಕೆ ದರ್ಭೆ ಬಿಳಿಸಾಸಿವೆ ಪಚ್ಚ ಕರ್ಪೂರ ದಶಾಂಗ ಧೂಪ ಹಿಪ್ಪೆಬೀಜ ಇವುಗಳನ್ನು ಒಂದು ತಾಮ್ರದ ಬಟ್ಟಲಲ್ಲಿ ಹಾಕಿಕೊಂಡು ಮನೆಯಲಿ ದಿನವೂ ಮುಸ್ಸಂಜೆಯಲ್ಲಿ ಹಾಕುವುದು. ೨೧ದಿನಗಳ ನಂತರ ಪ್ರತಿ ಅಮಾವಾಸೆ ಮತ್ತು ಹುಣ್ಣಿಮೆಯಂದು ಸಾಯಂಕಾಲ ಹಾಕಿದರೆ ಸಾಕು

ಜಯ ಜನಾರ್ಧನ ಕೃಷ್ಣ ರಾಧಿಕ ಪತೆ

ಜಯ ಜನಾರ್ಧನ ಕೃಷ್ಣ ರಾಧಿಕ ಪತೆ ಜನ ವಿಮೋಚನ ಕೃಷ್ಣ ಜನ್ಮ ಮೋಚನ ಗರುಡ ವಾಹನ ಕೃಷ್ಣ ಗೋಪಿಕಾ ಪತೆ ನಯನ ಮೋಹನ ಕೃಷ್ಣ ನೀರಜೀಕ್ಷಣ ಸುಜನ ಬಾಂಧವ ಕೃಷ್ಣ ಸುಂದರಾಕೃತೆ ಮದನ ಕೊಮಲ ಕೃಷ್ಣ ಮಾಧವ ಹರೆ ವಸುಮತಿ ಪತೆ ಕೃಷ್ಣ ವಾಸವಾನುಜ ವರಗುಣಾಕರ ಕೃಷ್ಣ ವೈಷ್ಣವಾಕೃತೆ ಸುರುಚಿರನನ ಕೃಷ್ಣ ಶೌರ್ಯವಾರಿಧೆ ಮುರಹರ ವಿಭೊ ಕೃಷ್ಣ ಮುಕ್ತಿದಾಯಕ ವಿಮಲ ಪಾಲಕ ಕೃಷ್ಣ ವಲ್ಲಭೀಪತೆ ಕಮಲಲೊಚನ ಕೃಷ್ಣ ಕಾಮ್ಯದಾಯಕ ವಿಮಲಗಾತ್ರನೆ ಕೃಷ್ಣ ಭಕ್ತವತ್ಸಲ ಚರಣ ಪಲ್ಲವಮ್ ಕೃಷ್ಣ ಕರುಣ ಕೊಮಲಮ್ ಕುವಲ ಈಕ್ಷಣ ಕೃಷ್ಣ ಕೊಮಲಾಕೃತೆ ತವ ಪದಂಬುಜಮ್ ಕೃಷ್ಣ ಶರಣಮಾಶ್ರಯಿ ಭುವನ ನಾಯಕ ಕೃಷ್ಣ ಪಾವಾನಕೃತೆ ಗುಣಗಣೊಜ್ವಲ ಕೃಷ್ಣ ನಳಿನಲೊಚನ ಪ್ರಣಯವಾರಿಧೆ ಕೃಷ್ಣ ಗುಣಗಣಾಕರ ದಾಮಸೊದರ ಕೃಷ್ಣ ದೀನ ವತ್ಸಲ ಕಾಮಸುಂದರ ಕೃಷ್ಣ ಪಾಹಿ ಸರ್ವದಾ ನರಕನಾಶನ ಕೃಷ್ಣ ನರಸಹಾಯಕ ದೇವಕಿ ಸುತ ಕೃಷ್ಣ ಕಾರುಣ್ಯಂಭುದೇ ಕಂಸನಾಶನ ಕೃಷ್ಣ ದ್ವಾರಕಾಸ್ಥಿತ ಪಾವನಾತ್ಮಕ ಕೃಷ್ಣ ದೇಹಿ ಮಂಗಳಮ್ ತವ ಪದಂಬುಜಮ್ ಕೃಷ್ಣ ಶ್ಯಾಮ ಕೊಮಲಮ್ ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ ಪಾಲಿಸೆನ್ನನು ಕೃಷ್ಣ ಶ್ರಿಹರಿ ನಮೋ ಭಕ್ತದಾಸನಾ ಕೃಷ್ಣ ಅರಸು ನೀ ಸದಾ ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ ಗರುಡ ವಾಹನ ಕೃಷ್ಣ ಗೋಪಿಕಾ ಪತೆ

Three and more than three Planets in one House at the time of Birth

Three and more than three Planets in one House at the time of Birth Aum Shri Gurave NamaH! I have already presented the effects from conjunction of two planets in one house in my previous post, and here are combinations of three and more than three planets conjoined in one house, at the time of birth and the effects from them. 1.SUN-MOON-MARS YOGA. Should the Sun, the Moon and Mars be together at birth, the native will be bereft of shame, be sinful, will have knowledge of machinery, will destroy enemies, be brave and will be expert in any kind of work. 2. SUN-MOON-MERCURY YOGA. If the Sun, Moon and Mercury are together, the native will be splendorous, very intelligent, will be fond of arts, assembly and drinks, be in royal service and bold. 3. SUN-MOON-JUPITER YOGA. Should the Sun, Moon and Jupiter be in one House; the native will be given to anger, be cunning, expert in service, intent on going to foreign places, be intelligent and fickle minded. 4. SUN-MOON-VENUS YOGA. Should the Sun, Moon and Venus be in one House at birth, the native will steal others' money, will be a debaucher and be expert in Shastra's. 5. SUN-MOON-SATURN YOGA. If the Sun, Moon and Saturn be together in one House, the native will be lustful, be expert in arguments, be a dunce, be at the disposal of others and be poor. 6. SUN-MARS-MERCURY YOGA. If the Sun, Mars and Mercury are in one House at birth, the native will be famous, hard-hearted, shameless and be devoid of wealth, sons and wife. 7. SUN-MARS-JUPITER YOGA. Should Mars, Jupiter and the Sun be together at birth, the native will be an expert speaker, very wealthy, either a kings minister, or even a king himself, be truthful and fierce. 8. SUN-MARS-VENUS YOGA. One, who has Venus, Mars and the Sun in one House, will be subjected to eye diseases, belongs to a good race, will be fortunate, harsh and wealthy. 9. SUN-MARS-SATURN YOGA. Should Mars, Saturn and the Sun be together, the native will have deformed limbs, be without wealth, always sick, without his people and be a big fool. 10.SUN-MERCURY- JUPITER YOGA. If Jupiter, Mercury and the Sun be together at birth, the native will be subjected to eye-diseases, be very wealthy, be interested in Shastra's, fables, poetry, meetings and stonework and will become a good writer. 11. SUN-MERCURY-VENUS YOGA. If Mercury, Sun and Venus be together, the native will be insatiable, talkative, intent on wandering and subjected to grief on account of women. 12. SUN-MERCURY-SATURN YOGA. One, who has Saturn, the Sun and Mercury in one House will be a neuter, will hate others and will be given up by his relatives. 13. SUN-JUPITER-VENUS YOGA. Should Venus, Jupiter and the Sun be together at birth, the native will be weak-sighted, bold, intelligent, indigent, be a minister and be devoted to others' jobs. 14. SUN-JUPITER-SATURN YOGA. If Jupiter, Saturn and the Sun be together at birth. the native will not have a prominent physique, will be worshiped, will hate his own men, will have good wife, children and friends, be dear to the king and be fearless. 15. SUN-VENUS-SATURN YOGA. One, who has Venus, Saturn and the Sun together at birth will be emotionally upset due to fear from enemies, will be devoid of honor and knowledge of arts and poetry, will have a mean history and will suffer from Leprosy. 16. MOON-MARS-MERCURY YOGA. Should the Moon Mercury and Mars be together at birth, the native will be sinful, mean in habits and conduct and devoid of friends and relatives throughout life. 17. MOON-MARS-JUPITER YOGA. A native, who has Mars, the Moon and Jupiter together at birth will have an even body, be addicted to women, be a thief, be splendorous, dear to women and given to anger. 18. MOON-MARS-VENUS YOGA. One, who has Mars, Venus and the Moon together at birth is the son of a bad woman and also will wed such a lady. He will be of wandering disposition and will have fear from cold. 19. MOON- MARS-SATURN YOGA. If Mars, Moon and Saturn join at birth, the person concerned will lose his mother in boyhood, be mean, wicked and inimical to people. 20. MOON-MERCURY-JUPITER YOGA. Should Mercury, Moon and Jupiter be together, the native will be wealthy, skillful, eloquent in speech, bright, famous and will have many sons and brothers. 21. MOON-MERCURY-VENUS YOGA. One, who has Mercury, Venus and Moon together at birth, will be mean in conduct in spite of his being learned and cultured. be Jealous and miserly. 22. MOON-MERCURY-SATURN YOGA. If Saturn, Moon and Mercury be together, the person concerned will be dependent, deformed, learned, be an able speaker and respected by the king. 23. MOON-JUPITER-VENUS YOGA. Should Venus, Jupiter and the Moon be in one House at birth, the native will be a chaste woman's son, be a scholar, will have knowledge of arts and many Shastras, be virtuous and beautiful. 24. MOON-JUPITER-SATURN YOGA. One, who has Moon, Jupiter and Saturn combination at birth will know the inner meaning of Shastra's, will seek union with aged women, be devoid of shame and be the head of a village and people. 25. MOON-VENUS-SATURN YOGA. If the Moon, Venus and Saturn are in combination at birth, one will be a writer, reader of books, Purohita (family guru), will have to his credit merits of past birth and be an astrologer. 26. MARS-MERCURY-JUPITER YOGA. One, who has Mercury, Jupiter and Mars together will be a good poet, Lord of a group, will marry a virtuous lady, be intent on helping others and an expert singer. 27. MARS-MERCURY-VENUS YOGA. Should Mars, Mercury and Venus be together at birth, the native will give up his caste, be deformed, fickle-minded, wicked and garrulous. 28. MARS-MERCURY-SATURN YOGA. Should Mercury, Saturn and Mars be together at birth, one will be a servant, will have dark eyes, be intent on living in foreign places, will have facial diseases and will be witty. 29. MARS-JUPITER-VENUS YOGA. One, who has Venus, Jupiter and Mars together at birth will be dear to king, will have good sons and enjoy pleasures through women. He will please all persons. 30. MARS-JUPITER-SATURN YOGA. If Jupiter, Mars and Saturn be together at birth, the native will be honored by the king, will have wounds on the body, be mean and blamed by friends. He will also be unkind. 31. MARS--VENUS-SATURN YOGA. If Saturn, Mars and Venus are in one House at birth, the native is born to an immoral lady, will marry such a lady, will be devoid of happiness and will be intent on wandering in distant places. 32. MERCURY-JUPITER-VENUS YOGA. Should Mercury, Jupiter and Venus be together, the native will have good physique, be successful over his enemies, be a king, fortunate, widely famous and truthfully disposed. 33. MERCURY-JUPITER-SATURN YOGA. When Mercury, Saturn and Jupiter are together at birth, it denotes, that the native will enjoy honor, wealth and sovereignty, be learned, will have abundant pleasures, be attached to his wife, be courageous and fortunate. 34. MERCURY-VENUS-SATURN YOGA. One, who has Mercury, Venus and Saturn together at birth will be scurrilous in speech, fraudulent, be a liar, addicted to other women, vehement, (“vishama” has several other meanings, viz., irregular, uneven, mysterious, inaccessible, rough, painful, troublesome etc.), will have knowledge of arts and be attached to his own country. 35. JUPITER-VENUS-SATURN YOGA. Should Jupiter, Venus and Saturn be in one House at birth one will become a king even though he might be of mean natal order, will be very famous and be a repository of virtues. 36. PARENTS. If the Moon is in the company of malefics, it is detrimental to the mother of the native. Predict similar results regarding the father of the native, if the Sun joins malefics at birth. Benefics in the place of malefics in the said Yogas will prove auspicious to the respective parent. If the planets joining be of mixed nature (i.e. one benefic and another malefic), the effects are medium. 37-38. BENEFICS IN CONJUNCTION AND MALEFICS IN CONJUNCTION. If benefics are in conjunction at birth, the native will enjoy wealth, sovereignty and fame. Such a combination produces an emperor capable of ruling the earth. Should three malefics join at birth, the native will be unlucky, indigent, grief-stricken, ugly and immodest. Thus ends the 16th Ch. entitled “3 planets in combination” in Kalyana Varma's Saravali. Four Planets in Conjunction 1. SUN-MOON-MARS-MERCURY YOGA. Should these four planets be together at birth. the native will be a writer, a thief and be scurrilous in speech. He will be sickly, cunning and be capable of deceiving others. 2. SUN-MOON-MARS-JUPITER YOGA. one, who has these four planets in one House at birth, will be wealthy, dear to women, splendorous, will maintain decorum, be free from grief and expert in work. 3. SUN-MOON-MARS-VENUS YOGA. If these four planets join at birth, one will speak and conduct himself, as a great person, be happy, expert, intent on gathering money and will have learning, sons and wife. 4. SUN-MOON-MARS-SATURN YOGA. One, who has these four planets together at birth, will have uneven physique, be short in stature, be unwealthy and will collect food by begging and be a proven dunce. 5. SUN-MOON-MERCURY-JUPITER YOGA. If these four planets are in one House, the native will be a goldsmith (or a gold dealer etc.), be long eyed, be a sculptor, be very wealthy, bold and beautiful bodied. 6. SUN-MOON-MERCURY-VENUS YOGA. The native, who has these four planets together at birth, will be deformed, lucky, short-statured and dear to king. 7. SUN-MOON-MERCURY-SATURN YOGA. If these four planets are together at birth, the native will lose his parents in childhood, be devoid of money and happiness, be wandering, will earn food by begging and will be a liar. 8. SUN-MOON-JUPITER-VENUS YOGA. Should these planets be in one House at birth, the subject concerned will be head of water, animals and forests (i.e. his livelihood may be through such sources), will be happy, honored by the king and be an expert. 9. SUN-MOON-JUPITER-SATURN YOGA. If the said planets join at birth, the native will be dark-eyed, fierce, will have many sons, be wealthy and fortunate through women. 10. SUN-MOON-VENUS-SATURN YOGA. Should one have a combination of these planets in one House at birth, the native will have habits, like a female, be very weak, desirous of coming up and timid at all times. 11. SUN-MARS-MERCURY-JUPITER YOGA. These four planets together at birth indicate, that the subject will be brave, be a composer of Shastras, or a ruler of province, will lose his wife and money, be undesirable and will wander. 12. SUN-MARS-MERCURY-VENUS YOGA. If these four planets be together at birth, the native will be addicted to other women, be a thief, will have uneven limbs, will be a bad person and will be bereft of energy. 13. SUN-MARS-MERCURY-SATURN YOGA. If these four planets are together at birth, the subject will be a warrior, scholar, be fierce, will be meanly disposed, be chief among poets and be a minister, or a king. 14. SUN-MARS-JUPITER-VENUS YOGA. with the conjunction of these four planets, one will be fortunate, worth worship by the people, be wealthy, dear to king and famous. 15. SUN-MARS-JUPITER-SATURN YOGA. Should these join at birth, one will be rash, prime among his group, will have cherished desires, will be endowed with relatives and friends and dear to king. 16. SUN-MARS-VENUS-SATURN YOGA. One, who has these four planets together at birth, will be deformed, mean in conduct, oblique-sighted, will hate his relatives and will always be insulted. 17. SUN-MERCURY-JUPITER-VENUS YOGA. With these planets in one House, one will be wealthy, happy, chief, will have cherished desires, will have relatives and be noble. 18.SUN-MERCURY-JUPITER-SATURN YOGA. One, who has these four planets together at birth, will have a neuter's habits, be prestigious, fond of quarrels, will have brothers, or sisters and be not enthusiastic. 19. SUN-MERCURY-VENUS-SATURN YOGA. Should these four planets be in conjunction at birth, one will be scurrilous in speech, fortunate, learned, soft spoken, happy, energetic, pure, wealthy, bold and helpful to friends. 20. SUN-JUPITER-VENUS-SATURN YOGA. These four planets in conjunction at birth will make the person a miser, a poet, chief, leader of sculptors and mean. 21. MOON-MARS-MERCURY-JUPITER YOGA. One, who has the conjunction of these four planets at birth, will be an expert in Shastras, be a king, or a great minister and be extremely intelligent. 22. MOON-MARS-MERCURY-VENUS YOGA. If these four planets are together at birth, one will be fond of quarrels, will sleep much, be mean, will marry an unchaste lady, be fortunate, will hate his relatives and be not happy. 23. MOON-MARS-MERCURY-SATURN YOGA. One, who has these four planets together will be bold, be without parents, is from an ignoble race, will have many wives, friends and sons and will have good conduct. 24. MOON-MARS-JUPITER-VENUS YOGA. If these four planets are together at birth, one will be deformed, will have a good wife, be highly tolerant, be self-respected, learned will have many friends and be happy. 25. MOON-MARS-JUPITER-SATURN YOGA. One, who has these four planets conjunct at birth will be deaf, wealthy, bold, rash in speech, firm in nature, wise and liberal. 26. MOON-MARS-VENUS-SATURN YOGA. If these four planets are together, one will marry an unchaste lady, will be proud, will have eyes resembling that of a snake and will be always emotional. This is certain. 27. MOON-MERCURY-JUPITER-VENUS YOGA. One, who has these four planets together will be learned, be devoid of parents, good looking, wealthy, very lucky and be without enemies. 28. MOON-MERCURY-JUPITER-SATURN YOGA. Should these be conjunct one will be virtuous, famous, noble and splendourous, fond of relatives, wise, be a kings minister and be a chief poet. 29. MOON-MERCURY-VENUS-SATURN YOGA. If these planets are together at birth, the native will be intent on seeking sexual pleasures with others' wives, will have an unchaste wife, be devoid of relatives, learned and will hate people. 30. MOON-JUPITER-VENUS-SATURN YOGA. The native with these four planets conjunct will be devoid of mother, be lucky, will suffer from skin diseases, will be subjected to grief, be intent on roaming, will know many languages and will be truthful. 31. MARS-MERCURY-JUPITER-VENUS YOGA. If these four planets are in one House, the subject will be fond of picking up quarrels with his wife, will be wealthy, worshipped by the people, will possess good qualities and be free from sickness. 32. MARS-MERCURY-JUPITER-SATURN YOGA. One, who has these four planets in one House at birth, will be brave, learned, be a good speaker, be without wealth, truthful and will have good habits. He will be able to argue and endure. He will be intelligent. 33. MARS-MERCURY-VENUS-SATURN YOGA. If these four planets are together at birth, the native will be an expert boxer, will depend on others, will have coarse body, will possess pride of war, be famous and will breed dogs. 34. MARS-JUPITER-VENUS-SATURN YOGA. If these four planets are together at birth, the native will be splendourous, wealthy, addicted to other women, fond of bravery, fickle-minded and ill-disposed. 35. MERCURY-JUPITER-VENUS-SATURN YOGA. Should these be together at birth, the native will be intelligent, interested in Shastras, be a debaucher and an obedient servant. Thus ends the 17th Ch. entitled “Effects of four planets in conjunction “ in Kalyana Varma's Saravali. Effects of Conjunction of Five Planets 1. SUN-MOON-MARS-MERCURY-JUPITER YOGA. If these five planets are together at birth, the native will be subjected to grief, will be cunning, be bereaved of wife and will experience physical distresses. 2. SUN-MOON-MARS-MERCURY-VENUS YOGA. If these five planets join at birth, the native will be intent on doing others' jobs, will lose his strength, or courage through his relatives and friends and will befriend a neuter. 3. SUN-MOON-MARS-MERCURY-SATURN YOGA. Should these be conjunct at birth, the native will be short lived, imprisoned and be devoid of every kind of happiness, wife, sons and money. 4. SUN-MOON-MARS-JUPITER-VENUS YOGA. Should these five planets join at birth, the native will be blind by birth, subjected to much grief, be devoid of parents, always dejected in mood and fond of singing. 5. SUN-MOON-MARS-JUPITER-SATURN YOGA. If there be a combination of these planets in one House, the native will be all expert warrior, will steal others' money, give trouble to others, be a tale-bearer and fickle-minded. 6. SUN-MOON-MARS-VENUS-SATURN YOGA. Should the said five planets join in one House, the native will be devoid of respect, money and prosperity, will have dirty conduct and be addicted to women. 7. SUN-MOON-MERCURY-JUPITER-VENUS YOGA. One with the conjunction of these planets will be a machinist, will enjoy great prosperity, be a king's minister, be a judge and be famous. 8. SUN-MOON-MERCURY-JUPITER-SATURN YOGA. With these five planets in one House, the native will be timid, be deprived of people dear to him, expert in cheating, given to anger and will depend on others for food. 9. SUN-MOON-MERCURY-VENUS-SATURN YOGA. One, who has the said five planets together at birth will be tall in stature, will have a hairy body and be not endowed with happiness, money and sons. 10. SUN-MOON-JUPITER-VENUS-SATURN YOGA. One with these five planets together at birth, will indulge in jugglery, be fickle-minded, be liked by women, be learned, will have many enemies and be fearless. 11. SUN-MARS-MERCURY-JUPITER-VENUS YOGA. If these planets join at birth, the native will be sensuous, will have a fleet of horses, will do good acts, be an Army chief, be dear to king, very fortunate and free from grief. 12. SUN-MARS-MERCURY-JUPITER-SATURN YOGA. Should a native have these planets conjunct, he will be emotional, sick, will earn food by begging going from House to House and will live in dilapidated Houses. 13. SUN-MARS-MERCURY-VENUS-SATURN YOGA. One with these five planets together at birth will be troubled by wounds, imprisonment and diseases, be learned, honored by the people, be poor and deformed. 14. SUN-MARS-MERCURY-VENUS-SATURN YOGA. One with the said five planets together will be troubled by diseases and enemies, be deprived of position, subjected to much grief and will roam out of agony. 15. SUN-MARS-JUPITER-VENUS-SATURN YOGA. If these five planets are together, one will be a messenger, a dunce, a neuter, will possess dirty habits, be very unfortunate, deformed and bereft of money. 16. SUN-MERCURY-JUPITER-VENUS-SATURN YOGA. Should there be a conjunction of these five planets, at birth, one will be expert in dealing with equipment and machinery related to water, minerals, mercury and such other chemicals and will achieve some fame in these lines. 17. SUN-VENUS-SATURN-MERCURY-JUPITER YOGA. One with these planets in conjunction will be learned in many Shastras, will help friends, be dear to elders, virtuous and merciful. 18. MOON-MARS-MERCURY-JUPITER-VENUS YOGA. Should these planets be in conjunction at birth, one will be humble, free from sickness, endowed with learning, wealth, truth and happiness, be helpful to relatives and will have many friends. 19. MOON-MARS-MERCURY-JUPITER-SATURN YOGA. One with the conjunction of these five planets will be night blind, penniless, dependent on others for food, miserable and will bring discredit to his relatives. 20. MOON-MARS-MERCURY-VENUS-SATURN YOGA. with these planets in conjunction, one will have a number of enemies and friends as well, be helpful to others, wicked and highly regarded. 21. MOON-MERCURY-JUPITER-VENUS-SATURN YOGA. If these planets are together at birth in a nativity, the subject will be a kings minister, be equal to a king, chief of the people and be worshiped by all people. 22. MARS-MERCURY-JUPITER-VENUS-SATURN YOGA. If these five planets be conjunct, the native will be good-hearted, rash (considered to be one of the 33 subordinate feelings), dear to king, free from grief, addicted to excessive sleep and be indigent. Thus ends the 18th Ch., entitled “Effects of five planets in conjunction”, In Kalyana Varma's Saravali. Effects of 6 Planets in Conjunction 1. SUN-MOON-MARS-MERCURY-JUPITER-VENUS YOGA. If these six planets join together, the native will be learned, virtuous, will have an emaciated body, be acquainted with many languages and will have distinguished knowledge. 2. SUN-MOON-MARS-MERCURY-JUPITER-SATURN YOGA. Should these planets be together, the native will be liberal, helpful to others, fickle minded, of Sattvik disposition and will gratify his sexual desires in lonely places. 3. SUN-MOON-MARS-MERCURY-VENUS-SATURN YOGA. Should these six planets join in one House, the native will be a thief, be addicted to others' women, subjected to leprosy, discarded by his own men, be a dunce, deprived of position and be issue less. 4. SUN-MOON-MARS-JUPITER-VENUS-SATURN YOGA. If these six planets are together, the native will be mean, will do others' jobs, suffer from tuberculosis, breathing and sneezing troubles (i.e. sneezing etc.) and will be blamed by his relatives. 5. SUN-MOON-MERCURY-JUPITER-VENUS-SATURN YOGA. One with this six-planetary conjunction will be a king's minister, fortunate, patient and will suffer from grief. He will have no wife and wealth. 6. SUN-MARS-MERCURY-JUPITER-VENUS-SATURN YOGA. If the said six planets are together the subject will always wander in shrines, be deprived of issues and wealth and will live in forests and hills. 7. MOON-MARS-MERCURY-JUPITER-VENUS-SATURN YOGA. One with these six planets will be pure at all times, valorous, will seek sexual union with many women, be dear to king, be a minister and be endowed with wealth, issues and happiness. 8. PLANETARY CONJUNCTIONS. If 5, or 6 planets join at birth, normally such natives will be penniless, subjected to grief and be dull-witted. Even aspects among such planets will yield similar results according to Kandalas. Sun-Moon-Mars-Mercury-Jupiter-Venus-Saturn: If Seven Grah/Planets conjoined in one house at the time of birth.....Let me find if there is any text available, then I will add this here. Rahu and Ketu might also join these combinations and make them more serious or less effective, depending on Rahu and Ketu respectively.

ನಕ್ಷತ್ರದ ಅಧಿದೇವತೆ

ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ. ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು. ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ. ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ. ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ. ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ (ಕಾಷ್ಯಪ ಮಹರ್ಷಿಯ ಪತ್ನಿ - ದೇವತೆ ತಾಯಿ) ಯಾಗಿದ್ದು, ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ವಿಶಾಖ ನಕ್ಷತ್ರದ ಅಧಿದೇವತೆ ಇಂದ್ರಾಗ್ನಿಯಾಗಿದ್ದು, ವಿಶಾಖನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದಪೂಜಿಸಿದರೆ ಧನ ಮತ್ತು ಇಷ್ಟಾರ್ಥಗಳು ಈಡೇರುತ್ತವೆ. ಅನುರಾಧ ನಕ್ಷತ್ರ ಅಧಿದೇವತೆ ಮಿತ್ರದೇವನಾಗಿದ್ದು, ಅನುರಾಧ ನಕ್ಷತ್ರ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ಧೀರ್ಘಾಯುವಾಗುತ್ತಾರೆ. ಜೇಷ್ಟ ನಕ್ಷತ್ರದ ಅಧಿದೇವತೆ ಇಂದ್ರನಾಗಿದ್ದು, ಜೇಷ್ಟ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ. ಮೂಲ ನಕ್ಷತ್ರದ ಅಧಿದೇವತೆ ಶಿನಿರುತಿಷಿ ದೇವತೆಯಾಗಿದ್ದು, ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ. ಪೂರ್ವಾಷಾಡ ನಕ್ಷತ್ರದ ಅಧಿದೇವತೆ ಜಲದೇವತೆಯಾಗಿದ್ದು, ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ. ಉತ್ತರಾಷಾಡ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು, ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ. ಶ್ರವಣ ನಕ್ಷತ್ರದ ಅಧಿದೇವತೆ ವಿಷ್ಣುವಾಗಿದ್ದು, ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ದಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ. ಧನಿಷ್ಟ ನಕ್ಷತ್ರದ ಅಧಿದೇವತೆ ವಸುದೇವತೆಯಾಗಿದ್ದು, ಧನಿಷ್ಟ ನಕ್ಷತ್ರದ ದಿವಸ ವಸುದೇವತೆಯನ್ನು ಗಂಧ, ಪುಪ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ. ಶತಭೀಷ ನಕ್ಷತ್ರದ ಅಧಿದೇವತೆ ವರುಣ ದೇವತೆಯಾಗಿದ್ದು, ಶತಬೀಷ್ ನಕ್ಷತ್ರದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ದಿಯಾಗುತ್ತದೆ. ಪೂರ್ವಾಬಾದ್ರ ನಕ್ಷತ್ರದ ಅಧಿದೇವತೆ ಅಜನ್ಮ (ರುದ್ರನ ಇನ್ನೊಂದು ಹೆಸರು) ನಾಗಿದ್ದು, ಪೂರ್ವಾಬಾದ್ರ ನಕ್ಷತ್ರದ ದಿವಸ ಅಜನ್ಮನನ್ನು ಪೂಜಿಸಿದರೆ, ಶ್ರದ್ದಾವಂತ, ಧರ್ಮನಿಷ್ಟನಾಗುತ್ತಾನೆ. ಉತ್ತರಾಬಾದ್ರ ನಕ್ಷತ್ರದ ಅಧಿದೇವತೆ ಅಹಿರ್ಬುದ್ನ (ರುದ್ರ ನ ಮತ್ತೊಂದು ಹೆಸರು) ನಾಗಿದ್ದು, ಉತ್ತರಾಬಾದ್ರ ನಕ್ಷತ್ರದಿವಸ ಅಹಿರ್ಬುದ್ನ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ತ್ರ ನಿಪುಣನಾಗುತ್ತಾನೆ. ರೇವತಿ ನಕ್ಷತ್ರದ ಅಧಿದೇವತೆ ಪೂಷ ದೇವತೆ (ಸೂರ್ಯನ ಇನ್ನೊಂದು ಹೆಸರು) ಯಾಗಿದ್ದು, ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು, ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಮಿಥುನ ರಾಶಿಯಲ್ಲಿ ಜನಿಸಿದವರ ಮೂಲ ಸ್ವಭಾವ ಹೆಚ್ಚು ಕಡಿಮೆ ರಾಶಿಯ ಗುಣಸ್ವಭಾವಕ್ಕೆ ಹೊಂದಿಕೊಂಡಿರುತ್ತದೆ. ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಈ ರಾಶಿಯವರು ಬದಲಾದರೂ, ಮೂಲಸ್ವಭಾವ ಎಲ್ಲೋ ಹುದುಗಿಕೊಂಡ ಸ್ಥಿತಿಯಲ್ಲಿ ಇದ್ದೇ ಇರುತ್ತದೆ. ಪುರುಷ- ಯಾವಾಗಲೂ ಪ್ರೀತಿಯ ಮಳೆ ಸುರಿಸುತ್ತಲೇ ತನ್ನ ಜತೆಗೇ ಇರಬೇಕೆಂದು ಹಪಹಪಿಸುವ ಹುಡುಗಿಯರು ಮಿಥುನ ರಾಶಿಯ ಹುಡುಗರ ಕಡೆಗೆ ವಾಲದಿರುವುದೇ ಉತ್ತಮ. ಕಾರಣ ಮಿಥುನ ರಾಶಿಯ ಪುರುಷರು ಸ್ವಲ್ಪ ಕಾಲ ಪ್ರೀತಿಯ ಮಳೆ ಸುರಿಸಿದರೂ ಕೆಲವು ಕಾಲ ಮಳೆಯೇ ಇಲ್ಲದೆ ಬೆಂಗಾಡಾಗಬಲ್ಲರು. ಇವರಿಗೆ ಸ್ವಲ್ಪ ಸಹನೆ ಕಡಿಮೆಯೇ. ಅತಿ ಬೇಗನೆ ಕೋಪ ನೆತ್ತಿಗೇರುವ, ಉದ್ರಿಕ್ತರಾಗುವ ಸ್ವಭಾವ ಇವರದ್ದು. ಸ್ವಲ್ಪ ಸಂದೇಹವೂ ಹೆಚ್ಚು. ಮಿಥುನ ರಾಶಿಯ ಒಬ್ಬ ಪುರುಷನೊಂದಿಗೆ ಇರುವುದೆಂದರೆ ಮೂರು ನಾಲ್ಕು ಪುರುಷರೊಂದಿಗೆ ಇದ್ದಂತೆ. ಅರ್ಥಾತ್ ಇವರದು ಬದಲಾಗುತ್ತಿರುವ ಸ್ವಭಾವ. ಇಂಥಹ ಪುರುಷರು ಮೂರು ನಾಲ್ಕು ವ್ಯಕ್ತಿತ್ವಗಳ್ನನು ಹೊಂದಿರುವವರು. ತುಂಬ ಗೆಳೆತನದ ಸ್ವಭಾವ, ಬೇಗ ಹಚ್ಚಿಕೊಂಡುಬಿಡುವ, ಜನರನ್ನು ಬಹುಬೇಗನೆ ನಂಬುವ, ಪ್ರೀತಿಸುವ, ಯಾರ ಜತೆಗಾದರೂ ಏಗಿಬಿಡುವ ಜಾಯಮಾನ ಇವರದ್ದು. ಮಿಥುನ ರಾಶಿಯವರಿಂಗೆ ಇಂಥವರೇ ಗೆಳೆಯರಾಗಬೇಕೆಂದಿಲ್ಲ. ಯಾರಾದರೂ ಆಗುತ್ತದೆ. ಜತೆಗೆ ಮಿಥುನ ರಾಶಿಯ ಪುರುಷರು ಯಾವ ವಿಚಾರವಾದರೂ ಮಾತನಾಡಬಲ್ಲ ವಾಚಾಳಿ. ಜತೆಗೆ ಸ್ವಲ್ಪ ತಮಾಷೆಯ ಸ್ವಭಾವ ಕೂಡಾ ಇವರಿಗಿರುತ್ತದೆ. ಇವರಿಗೆ ಜಾಲಿಯಾಗಿ ಪಾರ್ಟಿ ಮಾಡೋದೂ ಇಷ್ಟ. ಪಾರ್ಟಿಯಲ್ಲೇ ಹುಡುಗಿಯೊಬ್ಬಳಿಗೆ ಮಿಥುನ ರಾಶಿಯ ಪುರುಷ ಇಷ್ಟವಾದರೆ ಧಾರಳವಾಗಿ ಸಂಗಾತಿಯಾಗಿಸಿಕೊಳ್ಳಬಹುದು. ಯಾಕೆಂದರೆ ಅವರ ನಿಜ ಸ್ವಭಾವ ಪಾರ್ಟಿಯಲ್ಲಿ ಕಾಣಬಹುದು. ಮಹಿಳೆ- ಒಬ್ಬ ಮಿಥುನ ರಾಶಿಯ ಹುಡುಗಿಯನ್ನು ಮದುವೆಯಾಗೋದೆಂದರೆ ಇಬ್ಬರು ಹೆಂಡಿರ ಜತೆಗೆ ಜೀವಿಸಿದಂತೆ. ಅರ್ಥಾತ್ ಎರಡೆರಡು ವ್ಯಕ್ತಿತ್ವವನ್ನು ಮಿಥುನ ರಾಶಿಯ ಮಹಿಳೆಯರೂ ಹೊಂದಿರುತ್ತಾರೆ. ಒಬ್ಬರೊಂದಿಗೆ ತುಂಬ ಹಚ್ಚಿಕೊಂಡು ಕಚ್ಚಿಕೊಂಡು ಇರೋದಕ್ಕೆ ಮಿಥುನ ರಾಶಿಯ ಸ್ತ್ರೀಯರಿಗೆ ಸಾಧ್ಯವಾಗೋದಿಲ್ಲ. ಹಾಗೆಯೇ ಒಂದು ಸ್ಥಳಕ್ಕೂ ಅಂಟಿಕೊಂಡು ಬಿಡುವ ಜಾಯಮಾನ ಇವರದಲ್ಲ. ಬದಲಾವಣೆಯೇ ಜಗದ ನಿಯಮ ಅಂದುಕೊಂಡು ತಿರುಗಾಡುವ ವ್ಯಕ್ತಿತ್ವ ಇವರದು. ಮಿಥುನ ರಾಶಿಯ ಸ್ತ್ರೀಯರನ್ನು ಯೌವನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಅವರಿಗೆ ತುಂಬ ಪ್ರೀತಿ, ನಂಬಿಕೆ, ಕಕ್ಕುಲತೆಯನ್ನು ತೋರಿದಲ್ಲಿ ಮಾತ್ರ ಅವರು ಅಂಥವರಿಗೆ ಅಂಟಿಕೊಂಡು ಬಿಡಬಹುದು. ಇಲ್ಲವಾದರೆ ಪ್ರೀತಿಯನ್ನು ಬೇರೆಲ್ಲಿಯೋ ಅರಸುತ್ತಾರೆ. ಅಷ್ಟೇ ಅಲ್ಲ, ತನ್ನ ಸಂಗಾತಿಯ ತುಂಬ ಕೆಟ್ಟ ಅಭ್ಯಾಸವನ್ನೂ ಈಗ ಸಹಿಸಿಕೊಂಡ ಮಿಥುನ ರಾಶಿಯ ಸ್ತ್ರೀ, ಇನ್ನೊಂದೆರಡೇ ಗಂಟೆಗಳಲ್ಲಿ ಸಂಗಾತಿಯ ಬದಲಾದ ಹೇರ್‌ಸ್ಟೈಲ್‌ಗೂ ತಗಾದೆ, ಚಿರಿಪಿರಿ ತೆಗೆಯುವ ವ್ಯಕ್ತಿತ್ವ ಹೊಂದಿರುತ್ತಾಳೆ! ಮಿಥುನ ರಾಶಿಯ ಸ್ತ್ರೀಯರು ರೊಮ್ಯಾಂಟಿಕ್ ಅಲ್ಲ. ಆದರೆ ರೊಮ್ಯಾನ್ಸ್ ಮಾಡಲು ಬರೋದಿಲ್ಲ ಅಂತೇನೂ ಇಲ್ಲ. ಅವರಿಗೆ ರೊಮ್ಯಾನ್ಸ್ ಅನ್ನೋದು ಕೇವಲ ಸಂವಹನ ಅಷ್ಟೆ. ಜತೆಗೆ ಇಂತಹ ಸ್ತ್ರೀ ತನ್ನ ಪುರುಷನ ಎಲ್ಲ ಗುಣಗಳನ್ನೂ ಎದೆಗವಚಿಕೊಂಡು ಪ್ರೀತಿಸುವ ಜಾಯಮಾನದವಳಲ್ಲ. ತನ್ನ ಪುರುಷನ ಬುದ್ಧಿಮತ್ತೆಯನ್ನು ಪ್ರೀತಿಸುವ ಆಕೆ, ಅದೇ ಪುರುಷ ಕ್ರಿಯೇಟಿವ್ ಅಲ್ಲ ಎಂದು ತೆಗಳಲೂ ರೆಡಿ. ಹಾಗಿದ್ದರೂ ಮಿಥುನ ಸ್ತ್ರೀ ತನ್ನ ಪುರುಷನಿಗೆ ಆಗಾಗಾ ತನ್ನ ಪ್ರೀತಿಯ ಪ್ರದರ್ಶನ ಬೇರೆ ಬೇರೆ ರೀತಿಯಲ್ಲೇ ಮಾಡುತ್ತಿರುತ್ತಾಳೆ. ಜೀವನದಲ್ಲಿ ಬೊಗಸೆ ತುಂಬ ಪ್ರೀತಿ ಸುರಿಸುವ ಅದ್ಭುತ ಕಲೆಯೂ ಆಕೆಗೆ ಗೊತ್ತು. ಕೆಲವೊಮ್ಮೆ ನಾರಿಯ ಸಹಜ ಮನೋಸ್ಥಿತಿಯಲ್ಲಿ ಆಕೆಯಿದ್ದರೆ ಮತ್ತೊಮ್ಮೆ ಬೇರೆಯೇ ಆಗಬಹುದು. ಹಾಗಾಗಿ ಮಿಥುನ ರಾಶಿಯ ಸ್ತ್ರೀಯರು ಎಂದಿಗೂ ತಮ್ಮ ಪತಿಯನ್ನು ಬೋರ್ ಹೊಡೆಸುವುದಿಲ್ಲ. ಏನಾದರೊಂದು ಹೊಸತನ ಅವರಲ್ಲಿರುತ್ತದೆ. ಪುರುಷನಲ್ಲೂ ಏನಾದರೊಂದು ಅದ್ಭುತ ಗುಣಗಳನ್ನು ಕಂಡುಹಿಡಿಯುತ್ತಾರೆ. ಆದರೆ, ಅವರಲ್ಲೇ ಕೆಟ್ಟದನ್ನೂ ಅಷ್ಟೇ ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಹಾಗಾಗಿ ಮಿಥುನ ರಾಶಿಯ ಸ್ತ್ರೀಯರು ತಮ್ಮ ಸಂಗಾತಿಯ ಆಯ್ಕೆಯಲ್ಲಿ ತುಂಬ ಚ್ಯೂಸಿ. ಸಂಗಾತಿಯನ್ನು ತುಂಬ ಪ್ರೀತಿಸುತ್ತಿದ್ದರೂ, ಬೇಗನೆ ಇತರರಿಂದ ಆಕರ್ಷಿತರಾಗುವ ಸಂಭವವೂ ಇವರಲ್ಲಿ ಹೆಚ್ಚು. ಮಿಥುನ ಸ್ತ್ರೀ ಯಾವತ್ತೂ ತಮ್ಮ ಸಂಗಾತಿಯನ್ನು ಸಂದೇಹದಿಂದ ನೋಡೋದಿಲ್ಲ. ಮಧ್ಯರಾತ್ರಿ ತಡವಾಗಿ ಬಂದರೂ ಪೊರಕೆಯೋ, ಲಟ್ಟಣಿಗೆಯನ್ನೋ ಕೈಯಲ್ಲಿ ಹಿಡಿದು ಕೆಂಪನೆ ಕಣ್ಣುಗಳಿಂದ ಸಂಗಾತಿಯನ್ನು ಬರಮಾಡಿಕೊಳ್ಳುವ ಅಭ್ಯಾಸ ಇವರದಲ್ಲ. ಸಂಗಾತಿ ಬೇಗ ಮನೆಗೆ ಬಂದಾಗಿನ ಪ್ರೀತಿಯೇ ತಡವಾಗಿ ಬಂದಾಗಲೂ ಇವರು ತೋರಿಸುತ್ತಾರೆ. ತುಂಬ ಚೆನ್ನಾಗಿ ಅಡುಗೆ ಮಾಡೋದು ಕೂಡಾ ಇವರಿಗೆ ಕರಗತ. ಮಿಥುನ ರಾಶಿಯ ಪತ್ನಿ ಹೊಂದಿರುವ ಪುರುಷರಿಗೆ ಖಂಡಿತ ತನ್ನ ಪತ್ನಿ ಡಿಫರೆಂಟ್ ಅನಿಸದಿರದು. ಮಿಥುನ ರಾಶಿಯ ಸ್ತ್ರೀಯರಿಗೆ ಹಾರೋದು ಹೇಗೆಂದು ತಿಳಿಯದಿದ್ದರೂ ಹಾರುವ ಕನಸು ಕಾಣುತ್ತಾರೆ. ಬದುಕಿನ ತುಂಬ ಆಶಾವಾದವನ್ನೂ ಇವರು ಹೊಂದಿರುತ್ತಾರೆ. ಮಕ್ಕಳು- ಮಿಥುನ ರಾಶಿಯ ಮಕ್ಕಳು ತಂಟೆಕೋರರು. ಇವರು ನಡೆಯುತ್ತಾರೆ ಅಂದುಕೊಂಡರೆ ಓಡುತ್ತಿರುತ್ತಾರೆ, ಹಾಗಿರುವ ಸ್ವಭಾವ ಮಿಥುನ ರಾಶಿಯ ಮಕ್ಕಳದ್ದು! ಒಂದೇ ಜಾಗದಲ್ಲಿ ಇಂಥ ಮಕ್ಕಳು ಆಟವಾಡುತ್ತಾ ಕೂರೋದಿಲ್ಲ. ಏನಾದರೊಂದು ಹೊಸತು ಪೋಕರಿತನ ಮಾಡುತ್ತಾ, ಅನ್ವೇಷಣೆಯ ಗುಂಗಿನಲ್ಲಿರುತ್ತಾರೆ. ಇಂಥ ಮಕ್ಕಳನ್ನು ಹೊಡೆದು ಬಡಿದು ಹೆದರಿಸಿ ಸುಮ್ಮನೆ ಕೂರಲು ಹೇಳೋದು ಸರಿಯಲ್ಲ. ಇದರಿಂದ ಅವರ ಉದ್ವೇಗ ಇನ್ನಷ್ಟು ಹೆಚ್ಚುತ್ತದೆ. ಅಳುವಾಗ ಪೆಟ್ಟು ನೀಡಿ ಅಳು ನಿಲ್ಲಿಸಿ ಎಂದರೆ ಇವರು ಅಳು ನಿಲ್ಲಿಸಲ್ಲ. ಬದಲಾಗಿ ಇನ್ನೂ ಅಳು ಹೆಚ್ಚಿಸುತ್ತಾರೆ. ಈ ಮಕ್ಕಳಿಗೆ ಸಹನೆ ಎಂಬುದೇ ಇಲ್ಲ. ಒಂದೇ ಜಾಗದಲ್ಲಿ ತುಂಬ ಹೊತ್ತು ಕೂರುವುದೇ ಇಲ್ಲ. ಎಲ್ಲರೊಂದಿಗೆ ಬೆರೆಯುವ ಗೆಳೆತನ, ಸುಲುಗೆ ಮಾಡಿಕೊಳ್ಳುವ ಈ ಮಕ್ಕಳು ತುಂಬ ಆಕ್ಟಿವ್ ಆಗಿ ಬುದ್ಧಿವಂತರಾಗಿರುತ್ತಾರೆ. ತಮಾಷೆಯಲ್ಲೂ ಈ ಮಕ್ಕಳು ಎತ್ತಿದ ಕೈ. ಸತ್ಯವನ್ನು ಸ್ವಲ್ಪ ಮಸಾಲೆ ಸೇರಿಸಿ ಹೇಳುವ ಜಾಯಮಾನವೂ ಇವರಲ್ಲಿದೆ. ಬಣ್ಣಹಚ್ಚಿ, ಕಥೆಕಟ್ಟಿ ನಂಬಿಸಿಬಿಡುತ್ತಾರೆ ಈ ಮಕ್ಕಳು. ಆದರೆ, ಯಾವುದೇ ಅಪಾಯವನ್ನು ಯಾರಿಗೂ ಮಾಡೋದಿಲ್ಲ. ಇಂಥ ಮಕ್ಕಳು ಇನ್ನೊಬ್ಬರ ಜತೆ ಮಾತನಾಡುವಾಗ, ಹರಟೆ ಹೊಡೆಯುವಾಗ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಬುದ್ಧಿ ಮಾತನ್ನು ಕೇಳೋದು ಸ್ವಲ್ಪ ಕಡಿಮ ಮಕ್ಕಳು: ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ. ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ. ಸ್ವಲ್ಪ ತೋರಿಕೆಯ ಸ್ವಭಾವ ಇವರಲ್ಲಿ ಜಾಸ್ತಿ. ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನ ಇವರದ್ದು. ಇನ್ನೊಬ್ಬರ ಗಮನ ಸೆಳೆಯುವುದು ಇವರಿಗಿಷ್ಟ. ಅಷ್ಟೇ ಅಲ್ಲ, ಮನೆಯಲ್ಲಿ ಶುದ್ಧ ಸೋಮಾರಿಗಳಿವರು. ಒಂದು ವಸ್ತುವನ್ನು ಕೂಡಾ ಆಚೀಚೆ ಇಡಲಾರರು. ಇಂಥ ಸಂದರ್ಭ ಅವರಿಗೆ, ಅವರವರ ಕೆಲಸ ಅವರವರೇ ಮಾಡಬೇಕೆಂಬುದನ್ನು ಸೂಚ್ಯವಾಗಿ ಹೇಳುತ್ತಾ ಬನ್ನಿ. ಗಿಡವಿರುವಾಗಲೇ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸೋದು ಕಷ್ಟ. ಇನ್ನು ಸಿಂಹ ರಾಶಿಯ ಮಕ್ಕಳ ಹೆತ್ತವರು ಮೊದಲು ಮಾಡಬೇಕಾದ ಕೆಲಸ ತಮ್ಮ ಮಗುವಿಗೆ ಇನ್ನೊಬ್ಬರ ಮನೋಭಾವಕ್ಕೂ ಗೌರವ ನೀಡಬೇಕೆಂಬುದನ್ನು. ಇನ್ನೊಬ್ಬರನ್ನು ಹಗುರವಾಗಿ ಕಾಣದಂತೆ ಅವರಿಗೆ ತಿಳಿ ಹೇಳಬೇಕು. ಸಿಂಹ ರಾಶಿಯ ಮಕ್ಕಳು ತುಂಬ ನಾಚಿಕೆಯ ಸ್ವಭಾವವಿರೋದು ಕಡಿಮೆ. ಹಾಗಿದ್ದರೂ, ಅವರಿಗೆ ತುಂಬ ಪ್ರೇತ್ಸಾಹ ನೀಡಿ ಮಕ್ಕಳಾಗಿದ್ದಾಗಲೇ ಅವರನ್ನು ತೆರೆದುಕೊಳ್ಳಲು ಹೇಳಿಕೊಡಿ. ಸಿಂಹ ರಾಶಿಯ ಮಕ್ಕಳಲ್ಲಿ ಹುಡುಗರು ತುಂಬ ಗಟ್ಟಿಮುಟ್ಟಾದ ಶರೀರ ಹೊಂದಿರುತ್ತಾರೆ. ಹುಡುಗಿಯರು ಚೆಂದದ ಶರೀರ, ಮುಖ ಹೊಂದಿರುತ್ತಾರೆ. ತುಂಬ ಬೇಗ ಯಾವುದನ್ನೂ ಕಲಿತುಕೊಳ್ಳಬಲ್ಲ ಬುದ್ಧಿಮತ್ತೆ ಇವರಿಗಿರುತ್ತದೆ. ಆದರೆ ತಮಗಿಷ್ಟವಾದರೆ ಮಾತ್ರ ಕಲಿಯುತ್ತಾರೆ. ಇಲ್ಲವಾದರೆ ಒತ್ತಾಯಿಸಿದರೂ ಇವರು ಕಲಿಯುವುದಿಲ್ಲ. ಆದರೆ ಇವರು ಕಲಿತಾಗ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಆಗ ಅವರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ತಮ್ಮ ಗೆಳೆಯರಿಗೆ, ಗೆಳತಿಯರಿಗೆ ಹಣವನ್ನು ಸಾಲವಾಗಿಯೂ ಇವರು ಕೆಲವೊಮ್ಮೆ ನೀಡುತ್ತಾರೆ. ಆದರೆ, ಅದನ್ನು ವಾಪಸ್ ಪಡೆಯಲು ಮರೆತೇ ಹೋಗುತ್ತದೆ. ಪಾರ್ಟಿಗೆ ಹೋಗುವುದು, ಮಜಾ ಮಾಡೋದು ಎಲ್ಲ ಇವರಿಗಿಷ್ಟ. ಇಂಥ ಮಕ್ಕಳನ್ನು ತುಂಬ ಪ್ರೀತಿಯಿಂದ, ಸ್ವಲ್ಪ ಸ್ಟ್ರಿಕ್ಟ್ ಆಗಿ ಬೆಳೆಸಬೇಕು. ಹಾಗಾದರೆ ಇವರು ಸರಿಯಾಗಿ ಮುಂದೆ ಸಾಗಬಲ್ಲರು. ಪುರುಷ: ಸಿಂಹ ರಾಶಿಯ ಪುರುಷ ಯಾವತ್ತೂ ಏಕಾಂಗಿಯಾಗಿ ಕೂತಿರುವುದು ಕಾಣಸಿಗುವುದಿಲ್ಲ. ಹೆಚ್ಚಿನ ಸಮಯವನ್ನೆಲ್ಲ ಗುಂಪಿನ ಜತೆಗೇ ಇರುತ್ತಾನೆ. ಅಷ್ಟೇ ಅಲ್ಲ, ಆ ಗುಂಪಿನಲ್ಲಿ ಆತ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುತ್ತಾನೆ. ಸಿಂಹ ರಾಶಿಯ ಪುರುಷ ಗುಂಪಿಗೆ ನಾಯಕನಂತಿರುತ್ತಾನಲ್ಲದೆ, ಆತನ ಮಾತನ್ನು ಕೇಳುವವರ ಇರುತ್ತಾರೆ. ಯಾರೇ ಆದರೂ ಸಿಂಹ ರಾಶಿಯ ಪುರುಷನನ್ನು ಗೆಳೆಯನಾಗಿ ಪಡೆದರೆ, ಆತನ ಪ್ರೇಕ್ಷಕನಾಗಿ ಬಿಡಬೇಕಾಗುತ್ತದೆ. ಅಂದರೆ ಸಿಂಹ ರಾಶಿಯ ಪುರುಷ ಹೆಚ್ಚು ಹೇಳುತ್ತಾನೆ. ಗೆಳೆಯ ಕೇಳುತ್ತಾನೆ. ಆತನನ್ನು ಸ್ವಲ್ಪ ಡಾಮಿನೇಟ್ ಮಾಡಲು ನೋಡಿದರೂ ತೊಂದರೆಗೆ ಒಳಗಾಗುವುದು ಗೆಳೆಯನೇ. ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮನ್ನು ಇನ್ನೊಬ್ಬರು ಡಾಮಿನೇಟ್ ಮಾಡುವುದನ್ನು (ನಿಯಂತ್ರಿಸುವುದನ್ನು) ಸಹಿಸುವುದಿಲ್ಲ. ಸಿಂಹ ರಾಶಿಯ ಹುಡುಗರು ಪ್ರೀತಿಯಲ್ಲಿ ಬೀಳಲು ಅವರಿಗೆ ಕಾರಣ ಬೇಕಿಲ್ಲ. ಅವರನ್ನು ತಮ್ಮ ಪ್ರೀತಿಯಲ್ಲಿ ಕೆಡವಿಕೊಳ್ಳಲು ಹುಡುಗಿಯರು ಏನೆಲ್ಲಾ ಕಸರತ್ತು ನಡೆಸಬೇಕಿಲ್ಲ. ಕೆಲವೊಂದು ಆತ್ಮೀಯ ಮಾತುಕತೆ, ಭಾವುಕ ಘಳಿಗೆ, ಜತೆಗೇ ಕೂತಾಗ ಒಂದು ಇಂಪಾದ ಸಂಗೀತ, ಹಿಡಿಯಷ್ಟು ಪ್ರೀತಿ ಇವಿಷ್ಟಿದ್ದರೆ ಸಿಂಹರಾಶಿಯ ಪುರುಷರಿಗೆ ಸ್ವರ್ಗವೇ ತೆರೆದಂತೆ. ಆದರೆ ರೊಮ್ಯಾನ್ಸ್ ವಿಷಯದಲ್ಲಿ ಸಿಂಹ ರಾಶಿಯ ಪುರುಷರು ಎತ್ತಿದ ಕೈ. ರೊಮ್ಯಾನ್ಸ್ ಇಲ್ಲದೆ ತುಂಬ ಸಮಯ ಖಾಲಿಯಾಗಿ ಕೂರಲು ಅವರಿಗೆ ಆಗುವುದೇ ಇಲ್ಲ. ಅಲ್ಲದೆ ತಮ್ಮ ಪ್ರೇಮಿಯಿಂದ ಯಾವಾಗಲೂ ಬೊಗಸೆ ತುಂಬ ಪ್ರೀತಿ ಹಾಗೂ ಕಾಳಜಿ ಬಯಸುವವರು ಇವರು. ತಮ್ಮ ಸಂಗಾತಿಗೂ ಅಷ್ಟೆ. ಧಾರಾಳವಾಗಿ ಪ್ರೀತಿಯ ಮಳೆ ಸುರಿಸುತ್ತಾರೆ ಇವರು. ಆಗಾಗ ಹೂವು, ಗಿಫ್ಟ್‌ಗಳನ್ನು ಸರ್‌ಪ್ರೈಸ್ ಆಗಿ ಕೊಟ್ಟು ತಾವೂ ಕೂಡಾ ಖುಷಿಪಟ್ಟು ಸಂಗಾತಿಯನ್ನೂ ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಆಗಾಗ ಪ್ರೇಮ ಪತ್ರ ನೀಡುವುದರಲ್ಲೂ ಇವರು ಸಿದ್ಧ ಹಸ್ತರು. ಇವರು ಯಾವಾಗಲೂ ಉತ್ತಮ ಹೊಟೇಲಿನ ಊಟವನ್ನೇ ಬಯಸುತ್ತಾರೆ. ಸಾದಾ ಕ್ಯಾಂಟೀನ್‌ಗಳು ಇವರಿಗೆ ಇಷ್ಟವಾಗುವುದಿಲ್ಲ. ಇಷ್ಟೆಲ್ಲಾ ಸರ್ವ ಗುಣ ಸಂಪನ್ನರಾಗಿರುವ ಸಿಂಹ ರಾಶಿಯ ಪುರುಷ ತನಗೆ ಸಂಗಾತಿಯಾಗಿ ಸಿಕ್ಕನಲ್ಲ ಎಂದು ಹುಡುಗಿಯರು ಖುಲ್ಲಂಖುಲ್ಲಾ ಆಗಿ ಖುಷಿಯ ಹವಾದಲ್ಲಿ ಮೀಯಬೇಡಿ. ಒಮ್ಮೆ ಇಂಥ ಪುರುಷರ ಹೃದಯಕ್ಕೆ ನೀವು ಲಗ್ಗೆಯಿಟ್ಟಿರೆಂದರೆ ಮತ್ತೆ ಎಂದೆಂದಿಗೂ ನೀವು ಅವರ ಹೃದಯೊಳಗಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅರ್ಥಾತ್ ಸಿಕ್ಕಾಪಟ್ಟೆ ಪೊಸೆಸಿವ್ ಆಗಿರುತ್ತಾರೆ ಸಿಂಹ ರಾಶಿಯ ಪುರುಷರು. ನೀವೇ ಹೊರಹೋಗುತ್ತೇವೆಂದು ಹೊರಟರೂ, ಅವರು ಅಷ್ಟು ಸುಲಭವಾಗಿ ನಿಮ್ಮನ್ನು ಹೊರ ಹೋಗಲು ಬಿಡೋದಿಲ್ಲ. ಸಿಂಹ ರಾಶಿಯ ಪುರುಷರಿಗೆ ಸ್ವಲ್ಪ ಅಸೂಯೆ ಜಾಸ್ತಿ. ತಮ್ಮ ಹೆಂಡತಿ ಇನ್ನೊಬ್ಬನನ್ನು ತಮಾಷೆಯಾಗಿ ನೋಡಿದರೂ ಇವರಿಗೆ ಅಸೂಯೆಯಾಗುತ್ತದೆ. ಎರಡು ಗಂಟೆಯೊಳಗೆ ಗೆಳತಿಯ ಮನೆಗೆ ಹೋಗಿ ವಾಪಸ್ ಬರುತ್ತೇನೆ ಎಂದು ಹೊರಹೋದರೆ ಒಂದು ಗಂಟೆ 59 ನಿಮಿಷದೊಳಗೆ ನೀವು ಮನೆಯೊಳಗೆ ಬಂದಿರಬೇಕು. ಇಲ್ಲವಾದರೆ ಸಿಂಹ ರಾಶಿಯ ಪುರುಷ ಗಂಡನಿಗೆ ಚಡಪಡಿಕೆ ಶುರುವಾಗುತ್ತದೆ. ಬಹಳಷ್ಟು ಸಿಂಹ ರಾಶಿಯ ಪುರುಷರು ಮದುವೆಯ ನಂತರ ತಮ್ಮ ಹೆಂಡತಿಯರು ಕೆಲಸಕ್ಕೆ ಹೋಗೋದನ್ನು ಸಹಿಸುವುದಿಲ್ಲ. ಇದು ಯಾಕೆಂದರೆ, ಅವರಿಗೆ ಯಾವತ್ತೂ ತಮ್ಮ ಹೆಂಡತಿ ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಜತೆಗೇ ಇರಬೇಕೆಂಬ ಆಸೆ. ಹೆಂಡತಿ ಕೆಲಸಕ್ಕೆ ಹೋದರೆ ಆಕೆಯ ಗಮನ ಆಕೆಯ ಕೆಲಸದ ಮೇಲೂ ಹೋಗುವುದರಿಂದ ತಮಗೆ ಆಕೆಯ ಜತೆಗಿರಲು ಸಮಯ ಸಿಗೋದಿಲ್ಲ ಎಂಬ ಹಪಹಪಿತನವೂ ಇದು. ತಮ್ಮ ಹೆಂಡತಿ ಹೊರಜಗತ್ತಿಗೆ ಸುಂದರವಾಗಿ, ಆಕರ್ಷಿತಳಾಗಿ ಕಾಣಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ ಸಿಂಹ ರಾಶಿಯ ಪುರುಷನ ಕೆಲವೇ ಕೆಲವು ದೌರ್ಬಲ್ಯಗಳನ್ನು ಬಿಟ್ಟುಹಾಕಿ ನೋಡಿದರೆ ಆತನೊಬ್ಬ ಅತ್ಯಂತ ಪ್ರೀತಿಸುವ ಗಂಡನಾಗಿರುತ್ತಾನೆ ಎಂಬುದಂತೂ ಸತ್ಯ. ಹೆಂಡತಿ ತನಗೆ ಗೌರವ ಕೊಡಬೇಕೆಂದು ಬಯಸುವ ಸಿಂಹ ರಾಶಿಯ ಪುರುಷರು, ಹೆಂಡತಿಗೆ ಪ್ರೀತಿ, ಕಾಳಜಿ, ಹಣ, ಸಂಪತ್ತು ಅಥವಾ ಕೇಳಿದ್ದೆಲ್ಲವನ್ನೂ ಕೊಡುತ್ತಾರೆ. ಮದುವೆಯಾಗಿ ಒಂದು ವರ್ಷದವರೆಗೆ ಮಾತ್ರ ಪ್ರೀತಿ ತೋರಿ ಆಮೇಲೆ ನಿರ್ಲಕ್ಷ್ಯ ತಾಳುವ ಸಾಲಿನ ಗಂಡಸರಂತಲ್ಲ ಇವರು. ಪ್ರತಿ ವರ್ಷದ ಮದುವೆಯಾಗುವ ದಿನ ಬಂದರೂ ರೊಮ್ಯಾಂಟಿಕ್ ಆಗಿ ಐ ಲವ್ ಯೂ ಎಂದು ಹೇಳುವ ಉತ್ಸಾಹ ಹೊಂದಿರುತ್ತಾರೆ. ಜತೆಗೆ ಎಂದೆಂದಿಗೂ ಪ್ರೀತಿ, ಕಾಳಜಿಯ ಮಳೆ ಸುರಿಸುತ್ತಾರೆ. ಹಾದಿಯಲ್ಲಿ ಚಂದದ ಹುಡುಗಿಯರನ್ನು ಕಂಡರೆ ಸುಮ್ಮನೆ ಕಣ್ಣು ಹಾಯಿಸುವ ತುಂಟರು ಇವರಾದರೂ ತಮ್ಮ ಹುಡುಗಿಗೆ/ ಹೆಂಡತಿಗೆ ನಿಷ್ಟರಾಗಿರುತ್ತಾರೆ. ಸಿಂಹ ರಾಶಿಯ ಪುರುಷರನ್ನು ಪ್ರೀತಿಸಿ ಕೈಕೊಡುವುದು ಸುಲಭವಲ್ಲ. ಇದರಿಂದ ಅವರು ತುಂಬ ವೇದನೆಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಮತ್ತೆ ತಮ್ಮ ಹುಡುಗಿಯನ್ನು ಪಡೆಯಲು ಏನು ಮಾಡಲೂ ಸಿದ್ಧರಾಗುತ್ತಾರೆ. ಸಿಂಹ ರಾಶಿಯ ಪುರುಷರಲ್ಲಿ ಕೆಟ್ಟ ಸಿಟ್ಟೂ ಇದೆ. ತಮ್ಮನ್ನು ತಮ್ಮ ಹೆಂಡತಿ ಗೌರವಿಸಲ್ಲ ಎಂದು ತಿಳಿದರೆ ಇವರಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ. ಇಲ್ಲವಾದರೆ ಕೂಲ್ ಆಗಿರುವ ಇವರು, ತಮ್ಮ ಮಕ್ಕಳಿಗೆ ಉತ್ತಮ ಅಪ್ಪನೂ ಆಗಿರುತ್ತಾರೆ. ಇಲ್ಲಿಯೂ ಸಹ ಮಕ್ಕಳಿಂದ ಗೌರವವನ್ನು ಬಯಸುತ್ತಾರೆ. ಅಷ್ಟೇ ಅಲ್ಲ, ಮನಸ್ಸಿನೊಳಗೆ ಸಿಂಹ ರಾಶಿಯ ಪುರುಷರು ಯಾವತ್ತೂ ತಮ್ಮ ಘನತೆಗೆ, ಗೌರವಕ್ಕೆ ಎಲ್ಲಿ ಕುಂದು ಬರುತ್ತೋ ಎಂಬ ಭಯವನ್ನು ಹೊಂದಿರುತ್ತಾರೆ. ಹಾಗಾಗ ಸಂಗಾತಿ ಸಿಂಹ ರಾಶಿಯ ಪುರುಷರಿಗೆ ಸಾಕಷ್ಟು ಪ್ರೀತಿ, ಕಾಳಜಿ ಗೌರವ ನೀಡುತ್ತಾ ಬಂದರೆ ಸಂತಸದಿಂದಿರುತ್ತಾರೆ. ಮಹಿಳೆ: ಸಿಂಹ ರಾಶಿಯ ಮಹಿಳೆ/ ಹುಡುಗಿಯರನ್ನು ಬುಟ್ಟಿಗೆ ಹಾಕುವುದು ಸುಲಭದ ವಿಚಾರವಲ್ಲ. ಅದೊಂದು ಸಾಹಸವೇ ಸರಿ. ಪುರುಷನೊಬ್ಬ ತಮ್ಮ ಮೇಲೆ ದೃಷ್ಟಿ ನೆಟ್ಟಿದ್ದಾನೆಂದು ತಿಳಿದರೆ, ಸಿಂಹ ರಾಶಿಯ ಮಹಿಳೆ ಸ್ಪರ್ಧೆಗೆ ಬೀಳುತ್ತಾಳೆ. ಯಾವಾಗಲೂ ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಹೊಂದಿರುವ ಇವರು ಗುಂಪಿನಲ್ಲಿ ನಾಯಕತ್ವವನ್ನೂ ಹೊಂದಿರುವವರಾಗಿರುತ್ತಾರೆ. ಪ್ರೀತಿ, ಕಾಳಜಿಯನ್ನೇ ತಮ್ಮ ಸಂಗಾತಿಗಳಿಗೆ ನೀಡಿದರೂ, ಗಂಡನನ್ನು ದೇವರೆಂದು ಇವರು ಪೂಜಿಸಲಾರರು. ಇವರು ತಮ್ಮ ಸಂಗಾತಿಯನ್ನು ಡಾಮಿನೇಟ್ ಮಾಡುವುದಿಲ್ಲ. ಸಂಪೂರ್ಣ ಸ್ತ್ರೀತ್ವ ತುಂಬಿದವಳಾಗಿರುವ ಸಿಂಹ ರಾಶಿಯ ಮಹಿಳೆ ನಿರುಪದ್ರವಿ. ಆದರೆ ಇನ್ನೊಬ್ಬರಿಂದ ಬೇಗನೆ ಮೂರ್ಖಳೂ ಆಗಲಾರಳು. ಸರಿಯಾಗಿ ಡ್ರೆಸ್ ಮಾಡದೆ ಇರೋದನ್ನು ಸಹಿಸಲಾರರು ಇವರು. ಇವರನ್ನು ನಿಜವಾಗಿಯೂ ಇಂಪ್ರೆಸ್ ಮಾಡಬೇಕೆಂದರೆ ತುಂಬ ಡೀಸೆಂಟ್ ಆದ, ಪ್ರೀತಿಪೂರ್ವಕವಾದ ಪ್ರಾಮಾಣಿಕವಾದ ಉಡುಗೊರೆ ನೀಡಿ. ಸಿಂಹ ರಾಶಿಯ ಮಹಿಳೆ ಯಾವಾಗಲೂ ಸ್ಟೈಲ್‌ಗೆ ಬೆಲೆ ನೀಡುತ್ತಾಳೆ. ರಸ್ತೆ ಬದಿಯಲ್ಲಿ ತಿನ್ನೋದು, ರಸ್ತೆ ಬದಿಯ ವಸ್ತುಗಳನ್ನು ಕೊಳ್ಳೋದು ಇವರಿಗೆ ಇಷ್ಟವಾಗಲ್ಲ. ಆಕೆಯ ಬಳಿ ಹಣವಿಲ್ಲದಿದ್ದರೂ, ಇಂಥ ರಸ್ತೆ ಬದಿಯ ವಾತಾವರಣ ಆಕೆಗೆ ಇಷ್ಟವಾಗಲ್ಲ. ದುಬಾರಿ ಗಿಫ್ಟ್‌ಗಳೆಂದರೆ ಈಕೆಗೆ ಇಷ್ಟ. ಕೆಲವೊಮ್ಮೆ ಹಠಮಾರಿಯೂ ಆಗುವ ಇವರು ಗರ್ವಿಷ್ಟರಾಗಿಯೂ ಕಾಣುತ್ತಾರೆ. ತುಂಬ ದಯಾಳುವಾಗಿರುವ ಇವರು ತಮ್ಮ ಮಕ್ಕಳನ್ನು ತುಂಬ ಕಾಳಜಿಯಿಂದ ಬೆಳೆಸುತ್ತಾರೆ. ಬುದ್ಧಿವಂತಿಕೆ, ಪ್ರತಿಭೆ ಹಾಗೂ ಗಟ್ಟಿತನ ಇವೆಲ್ಲವೂ ಇವರಲ್ಲಿರುತ್ತದೆ. ಇವೆಲ್ಲವುಗಳ ಜತೆಗೇ ಇರುವ ಸ್ತ್ರೀತ್ವ ಕೂಡಾ ಈಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಮದುವೆಯಾದ ಮೇಲೆ ಕೆಲಸಕ್ಕೆ ಹೋಗೋದು ಬೇಡ ಎಂದೆಲ್ಲ ಹೇಳಿದರೆ ಆಕೆ ಸಹಿಸುವುದಿಲ್ಲ. ಕೆಲಸವೆಂಬುದು ಆಕೆಯನ್ನು ಸದಾ ಜೀವಂತಿಕೆಯಲ್ಲಿರುವಂತೆ ಮಾಡುತ್ತದೆ. ಅತ್ಯುತ್ತಮ ಹೆಂಡತಿಯಾಗುವ ಅವರು, ಅತಿಥಿ ಸತ್ಕಾರದಲ್ಲೂ ಎತ್ತಿದ ಕೈ. ಆದರೆ ಹಣದ ಬಗ್ಗೆ ಅಂತಹ ಹಿಡಿತ ಇವರಲ್ಲಿರುವುದಿಲ್ಲ. ಇವರ ಅಭಿರುಚಿಗಳೆಲ್ಲ ದುಬಾರಿಯಾಗಿರುತ್ತದೆ. ಆದರೆ ಅವುಗಳು ನಿಜಕ್ಕೂ ಅದ್ಭುತವಾಗಿರುತ್ತದೆ. ಮಕ್ಕಳನ್ನು ಮುದ್ದು ಮಾಡುತ್ತಾ ಅವರಿಗೆ ತುಂಬ ಪ್ರೋತ್ಸಾಹ ನೀಡುತ್ತಾಳೆ. ಆದರೆ ಅವರಿಂದ ಗೌರವವನ್ನೂ ಬಯಸುತ್ತಾಳಲ್ಲದೆ ಶಿಸ್ತನ್ನೂ ಕೂಡಾ. ಅವಳು ತನ್ನ ಸ್ವಾತಂತ್ರ್ಯ ಬಯಸುವ ಜತೆಗೆ ಮಕ್ಕಳಿಗೂ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾಳೆ. ಕೆಲವೊಮ್ಮೆ ಸ್ವಲ್ಪ ಅಸೂಯೆ ಪಡುವ ುಣವೂ ಇವರಲ್ಲಿದೆ. ಅಷ್ಟೇ ಅಲ್ಲ. ತುಂಬ ಪೊಸೆಸಿವ್ ಕೂಡಾ. ಆದರೆ ಆಕೆಯನ್ನು ಕಂಟ್ರೋಲ್ ಮಾಡಲು, ಅಥವಾ ಡಾಮಿನೇಟ್ ಮಾಡಲು ನೋಡಿದರೆ ಆಕೆ ಸಹಿಸುವುದಿಲ್ಲ. ಇವುಗಳಲ್ಲಿ ಬ್ಯಾಲೆನ್, ಆಗಿ ಸಂಬಂಧ ತೆಗೆದುಕೊಂಡು ಹೋಗಲು ಗಂಡ ತಯಾರಿದ್ದರೆ, ಸಿಂಹ ರಾಶಿಯ ಹೆಂಡತಿ ಖಂಡಿತವಾಗಿಯೂ ಪ್ರೀತಿಯ ಮಳೆಯೇ ಆಗುತ್ತಾಳೆ. ಮೆಯೇ. ಏನಾದರೊಂದು ತರಲೆ ಮಾಡುತ್ತಲೇ ಇರುವ ಈ ಮಕ್ಕಳಿಗೆ ಬದ್ಧತೆ ಕಡಿಮೆ.

ವಾಸ್ತು : ವಕ್ಷ ಸಂಪತ್ತು

ವಾಸ್ತು : ವಕ್ಷ ಸಂಪತ್ತು * ಜೆ.ಕೆ.ಜೈನ್ ಸಸ್ಯ ಶ್ಯಾಮಲೆ ಈ ವಸುಂಧರೆ. ಆಕೆಗೆ ಹಸಿರೇ ಉಸಿರು. ಹಸಿರಿಲ್ಲದಿದ್ದರೆ ಈ ಜಗತ್ತಿನ ಹೆಸರೇ ಇಲ್ಲ. ಭೂತಾಯಿ ಹಸಿರನ್ನೆ ಹೊದ್ದು ಮಲಗಿದವಳು. ಪ್ರಪಂಚದ ಎಲ್ಲ ಮತ ಧರ್ಮಗಳು ಜಾತಿ ಪಂಗಡಗಳು ಮರಗಿಡಗಳನ್ನು ಸಮದ್ಧಿಯ ಸಂಕೇತವಾಗಿ ಬಿಂಬಿಸಿಕೊಂಡಿವೆ. ನವಗ್ರಹಗಳು ಕೂಡಾ ವಿವಿಧ ವಕ್ಷಗಳಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡಿವೆ. ಈ ಮರಗಿಡ ಬಳ್ಳಿಗಳಿಂದ ದೊರಕುವ ಆಮ್ಲಜನಕವೇ ಎಲ್ಲಾ ಜೀವಜಂತುಗಳ ಪ್ರಾಣವಾಯು. ಇದು ಇಲ್ಲವಾದರೆ ಮಾನವ ಸಮೇತನಾಗಿ ಯಾವ ಪ್ರಾಣಿಪಕ್ಷಿಗಳೂ ಉಳಿಯಲಾರವು. ಇದನ್ನೆ ಹಸಿರುಮನೆ ಪ್ರಭಾವ ಎಂದು ಕರೆಯುವುದು. ಇಂತಹ ವಕ್ಷಸಂಕುಲ ವಾಸ್ತು ಶಾಸ್ತ್ರದಲ್ಲಿ ತನ್ನದೇ ಆದ ಅಸ್ತಿತ್ವ ಪಡೆದುಕೊಂಡಿದೆ. ಎಲೆ ಇಲ್ಲದ ಮರ ಅಸ್ಥಿಪಂಜರಕ್ಕೆ ಸಮ. ಇಂತಹ ಯಾವುದೇ ಒಣಗಿದ ಮರಗಿಡಗಳನ್ನು ಅಲಂಕಾರಕ್ಕಾಗಿ ಮನೆಯಲ್ಲಿ ಇಟ್ಟುಕೊಳ್ಳಬಾರದು. ಅದು ಸೂತಕದ ಛಾಯೆಯನ್ನು ಬೀರುವುದು. ದಾರಿದ್ರ್ಯವನ್ನು ಆಹ್ವಾನಿಸುವುದು. ಕೆಲವೊಮ್ಮೆ ಮನೆಯವರ ಚಿತ್ತಭ್ರಮಣೆಗೂ ಕಾರಣವಾದೀತು. ಆದ್ದರಿಂದ ಒಣಗಿದ, ಸುಟ್ಟ, ಸಿಡಿಲು ಬಡಿದ ಬೇರುಮಾತ್ರ ಇರುವ, ಸ್ಮಶಾನದಲ್ಲಿ ಬೆಳೆದ, ರೋಗಿಯಿಂದ ಕೊಡಲ್ಪಟ್ಟ ಮಾರ್ಗದ ಬದಿಯಲ್ಲಿ ಬೆಳೆದ ಗಿಡಮರಗಳನ್ನು ಮನೆಯಲ್ಲಾಗಲಿ, ಮನೆಯ ಆವರಣದಲ್ಲಾಗಲಿ ಇಟ್ಟು ಕೊಳ್ಳಬಾರದು. ಬೆಳೆಸಲೂ ಬಾರದು. ಇದ್ದಲ್ಲಿ ಕೂಡಲೆ ತೆಗೆದು ಬಿಡಬೇಕು. ತರಕಾರಿ ಕೆತೋಟವನ್ನು ನಿವೇಶನದ ವಾಯುವ್ಯದಲ್ಲಿ ಬೆಳೆಸಬೇಕು. ದೊಡ್ಡ ಗಾತ್ರದ ಮರಗಳನ್ನು ಆವರಣದ ದಕ್ಷಿಣ ಪಶ್ಚಿಮದಲ್ಲಿ ಬೆಳೆಸಬಹುದು. ಸಣ್ಣಗಾತ್ರಕ್ಕೆ ಬೆಳೆಯುವ ಗಿಡಬಳ್ಳಿಗಳನ್ನು ಉತ್ತರ ಪೂರ್ವದಲ್ಲಿ ನೆಟ್ಟು ಸಾಕುವುದು ಶುಭದಾಯಕ. ಸುತ್ತು ಮನೆಯ ಒಳಭಾಗದ ಅಂಗಳದಲ್ಲಿ ಯಾವುದೇ ಗಿಡಮರಗಳನ್ನು ನೆಟ್ಟು ಬೆಳೆಸಬಾರದು. ಆದರೆ ಹೂವಿನ ಕುಂಡ(ಚಟ್ಟಿ )ಗಳನ್ನು ಇಟ್ಟುಕೊಳ್ಳಬಹುದು. ದಿನಪೂರ್ತಿ ಮನೆಯ ನಾಲ್ಕು ಸುತ್ತಲೂ ಯಾವುದೇ ಮರಗಿಡಗಳ ನೆರಳು ಬೀಳಬಾರದು. ಒಂದು ವೇಳೆ ಬಿದ್ದಲ್ಲಿ ಇಂತಹ ಮನೆಯನ್ನು ತ್ಯಾಗಿ ನಿವಾಸಕ್ಕೆ ಬಳಸಬಹುದು. ಆದರೆ ಸಂಸಾರಿಗಳು ಖಂಡಿತ ವಾಸಮಾಡಬಾರದು. ಮರಗಿಡಗಳು ಮನೆ ನಿವೇಶನದಲ್ಲಿ ಸಮ ಸಂಖ್ಯೆಯಲ್ಲಿ ಇರಬೇಕು. ಆಲ, ಅತ್ತಿ, ಅಶ್ವತ್ಥ ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು. ತಾಳೇಮರ ಹುಣಸೇಹುಳಿ ಮರ ಮನೆ ಹತ್ತಿರ ಇರಬಾರದು. ಅವು ದುಷ್ಟ ಶಕ್ತಿಗಳ ಆವಾಸ ಸ್ಥಾನ ಎಂಬ ನಂಬಿಕೆ ಇದೆ. ವೀಳ್ಯ , ಪುನ್ನಾಹ , ಜಾಜಿ ಮಲ್ಲಿಗೆ , ಗಂಧ ಚಂದನ ಕರ್ಪೂರ ಹಾಗೂ ಅಣಿಲೆ ಗಿಡಮರಗಳು ಅಭಿವದ್ಧಿ ಸೂಚಕವಾದವುಗಳು. ಕೆಂಪು ದಾಸವಾಳದ ಹೂವಿನ ಗಿಡವನ್ನು ಆಗ್ನೇಯದಲ್ಲಿ ಬೆಳೆಸಬಾರದು. ತುಂಬ ಗೆಲ್ಲುಗಳು, ಸದಾ ಹಸಿರೆಲೆ ಇರುವ ಮರ ಅಭಿವದ್ಧಿ ಸೂಚಕ . ಮನೆಯ ಒಳಗೆ ಇಟ್ಟುಕೊಳ್ಳುವ ಚಟ್ಟಿಯ ಗಿಡಬಳ್ಳಿಗಳಲ್ಲಿ ಉರುಟು ಆಕಾರದ ಎಲೆಗಳಿರಬೇಕು. ಇದರಿಂದ ಸಂಸಾರದಲ್ಲಿ ಉಂಟಾಗಬಹುದಾದ ತಾಕಲಾಟ ಕಿತ್ತಾಟಗಳು ತಪ್ಪಿ ಹೋಗುವುದು. ಚೂಪಾದ ಎಲೆಗಳಿದ್ದರೆ ನಿವಾಸಿಗಳ ಸಾಮರಸ್ಯ ಕೆಡಿಸುವುದು. ಇಷ್ಟೊಂದು ಶುಭ ಪರಿಣಾಮ ಬೀರುವ ಸಸ್ಯ ಸಂಕುಲಕ್ಕೆ ಮತ್ತು ವಕ್ಷ ಸಂಪತ್ತಿಗೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಕ್ಷಮಯಾಧರಿತ್ರಿ ಎಂಬ ಖ್ಯಾತಿ ಪಡೆದಿರುವ ಭೂಮಿತಾಯಿ ಪಚ್ಚೆ ಪಟ್ಟೆಯನ್ನುಟ್ಟು ಸುರ ಸುಂದರಿಯೂ ಸಕಲ ಜೀವಕೋಟಿಯ ಮಮತೆಯ ಮಾತೆಯೂ ಆಗಿದ್ದಾಳೆ. ಆಕೆಯನ್ನು ಭಕ್ತಿಗೌರವಗಳಿಂದ ಪೂಜಿಸುವ ಭಾಗ್ಯ ನಮ್ಮದಾಗಬೇಕು. ನಿವೇಶನ ಖಾಲಿ ಇದ್ದರೆ ..! ನಿವೇಶನ ಬಹಳ ಸಮಯ ಖಾಲಿ ಇದ್ದು ಮನೆ ಕಟ್ಟಲು ಎಡರುತೊಡರುಗಳು ಒದಗಿಬರುತ್ತಿದ್ದರೆ ಈ ರೀತಿಯಾಗಿ ಪರಿಹರಿಸಿಕೊಳ್ಳಬಹುದು. ಆವರಣದ ಪಶ್ಚಿಮ ಭಾಗದಲ್ಲಿ ಪೂರ್ವಾಮುಖವಾಗಿ ಒಂದು ಚಿಕ್ಕ ಕಟ್ಟೆ ಕಟ್ಟಿ. ಅದರಲ್ಲಿ ಒಂದು ದಾಳಿಂಬೆ ಗಿಡ ನೆಟ್ಟು ನಿತ್ಯ ಪೂಜಿಸಿ. ಹೀಗೆ ಮಾಡುತ್ತಿದ್ದರೆ ಮನೆಕಟ್ಟುವ ಯೋಗ ಆದಷ್ಟು ಬೇಗ ಕೂಡಿಬರುವುದು. ಶೀಘ್ರ ಲಕ್ಷ್ಮೀ ಪ್ರಾಪ್ತಿ ಆಗುವುದು. ವಕ್ಷ ಪೂಜೆಯಿಂದ ವಂಶ ವದ್ಧಿಸುವುದು. ನೆನಪಿರಲಿ *ಕಳ್ಳಿ, ನುಗ್ಗೆ, ಮುಳ್ಳಿರುವ, ಹಾಲುಸುರಿಸುವ ಅಥವಾ ಹಸಿರು ಬಣ್ಣವೇ ಇಲ್ಲದ, ಬಹಳ ಕಡಿಮೆ ಎಲೆ ಇರುವ ಸಸ್ಯ ಸಂತತಿ ಮನೆಯ ಹತ್ತಿರ ಬೆಳೆಸಬಾರದು. *ಬಹಳ ಉತ್ಕೃಷ್ಟ ಜಾತಿಗೆ ಸೇರಿದ ಹಲಸು, ನಿಂಬೆ ಜಾತಿಯ ಗಿಡಮರ ಇರಬಹುದು. *ಮನೆಯ ಪೂರ್ವಕ್ಕೆ ಹಲಸಿನ ಗಿಡ, ಪಶ್ಚಿಮಕ್ಕೆ ತೆಂಗಿನಗಿಡ, ಉತ್ತರಕ್ಕೆ ಮಾವಿನ ಗಿಡ, ದಕ್ಷಿಣಕ್ಕೆ ಅಡಿಕೆ ಗಿಡ ಎರಡರಂತೆ ನೆಟ್ಟು ಬೆಳೆಸಿದರೆ ಆ ಮನೆಗೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಮಾಟಮಂತ್ರ ಪ್ರಯೋಗ ನಡಿಯೋದಿಲ್ಲ. * ಈಶಾನ್ಯದಲ್ಲಿ ದರ್ಬೆಹುಲ್ಲು ಬೆಳೆಸಬೇಕು. ಬಿಲ್ವವಕ್ಷ ಪೂರ್ವದಲ್ಲಿದ್ದರೆ ಸಂಪತ್ತು ವದ್ಧಿಸುವುದು. *ನೆಲ್ಲಿಕಾಯಿ ಮರವನ್ನು ವಿಷ್ಣುವಿನ ಸನ್ನಿ ಎಂದು ನಂಬಲಾಗಿದೆ. ಇದನ್ನು ಉತ್ತರದಲ್ಲಿ ಬೆಳೆಸಬೇಕು. *ತುಂಬೆಹೂವು ಮನೆ ಆವರಣದಲ್ಲಿ ಬೆಳೆಸಿದರೆ ಶಿವಾನುಗ್ರಹ ಪ್ರಾಪ್ತಿ ಆಗುವುದು. *ತುಳಸಿಗಿಡ, ಕಾಮಕಸ್ತೂರಿಗಿಡ ಮಾನಸಿಕ ನೆಮ್ಮದಿಯನ್ನು ದಯಪಾಲಿಸುವುದು. ಅವುಗಳನ್ನು ಹಾದು ಬರುವ ಗಾಳಿ ಸೇವಿಸುವುದರಿಂದ ಮನೋರೋಗಿಗಳು ಗುಣಮುಖರಾಗುವರೆಂದು ಹೇಳಲಾಗಿದೆ. ಕಡಿಮೆ ಖರ್ಚಿನಲ್ಲಿ ಗಿಡಗಳ ಅಲಂಕಾರ * ಪಾವನಾ ಡಿ.ಆಚಾರ್ಯ, ಕೋಟೆಕಾರ್ ನಮಗೆ ಸುಲಭವಾಗಿ ಸಿಗುವ ಅಂದರೆ ಮಲ್ಲಿಗೆ, ಗುಲಾಬಿ, ದಾಸವಾಳ, ಸೇವಂತಿಗೆ ಮತ್ತಿತರ ಸಣ್ಣಪುಟ್ಟ ಹೂಗಳ ಅಥವಾ ಇತರ ಕ್ರೋಟನ್ ಗಿಡಗಳನ್ನು ಓರಣವಾಗಿ ಜೋಡಿಸಿ ನೆಡಬೇಕು. ಮನೆಯೆಂದರೆ ಹೀಗೇ ಇರಬೇಕು, ವಿಭಿನ್ನವಾಗಿರಬೇಕು ಎಂದು ಅನಿಸುವುದು ಸಹಜ. ಅದ್ಭುತ ದೀಪಗಳು, ಉತ್ತಮವಾದ ಕೆತ್ತನೆ, ಶಿಲ್ಪಗಳಿಂದಲೋ ಮನೆ ಗಮನ ಸೆಳೆಯುವಂತಿದ್ದರೆ ಅದಕ್ಕೆಲ್ಲಾ ತುಂಬಾ ಖರ್ಚಾಗುತ್ತದೆ ಎಂದು ಅನಿಸುವುದು ಸಹಜ. ಆದರೆ ಸಣ್ಣ ಮನೆಯಾದರೂ ಸರಿ ಅದನ್ನು ನಾವು ಅಲ್ಪ ಖರ್ಚಿನಲ್ಲಿ ಅದ್ಭುತವಾಗಿ ಅಲಂಕರಿಸಬಹುದು. ವಿದ್ಯತ್ ದೀಪ ಕುಸುರಿ ಕೆತ್ತನೆಗಳಿಂದ ಮಾತ್ರವಲ್ಲದೆ ಸಣ್ಣ ಪುಟ್ಟ ಹೂವಿನ ಗಿಡಗಳಿಂದಲೂ ಕೂಡ ಮನೆಯ ಸೌಂದರ್ಯ ಹೆಚ್ಚಿಸಬಹುದು. ಈ ಮಳೆಗಾಲದಲ್ಲಿ ಕಡಿಮೆ ಖರ್ಚಿನಲ್ಲೇ ಮನೆಯನ್ನು ಉತ್ತಮವಾಗಿ ಸಜ್ಜುಗೊಳಿಸಬಹುದು. ಮನೆಯಂಗಳದಲ್ಲಿ ಹುಲ್ಲು ಅಥವಾ ಲಾನ್ಗಳನ್ನು ಬೆಳೆಸಿ, ಮನೆ ಸುತ್ತಲೂ ಹೂವಿನ ಗಿಡಗಳನ್ನು ಬೆಳೆಸಿ ಕೈತೋಟ ಮಾಡಬಹುದು. ಮನೆಯ ಮುಂದೆ ಬೆಳೆಸಲು ದುಬಾರಿ ಗಿಡಗಳೇ ಆಗಬೇಕೆಂದಿಲ್ಲ. ನಮಗೆ ಸುಲಭವಾಗಿ ಸಿಗುವ ಅಂದರೆ ಮಲ್ಲಿಗೆ, ಗುಲಾಬಿ, ದಾಸವಾಳ, ಸೇವಂತಿಗೆ ಮತ್ತಿತರ ಸಣ್ಣಪುಟ್ಟ ಹೂಗಳ ಅಥವಾ ಇತರ ಕ್ರೋಟನ್ ಗಿಡಗಳನ್ನು ಓರಣವಾಗಿ ಜೋಡಿಸಿ ನೆಡಬೇಕು. ಮಳೆಗಾಲದಲ್ಲಿ ಸರಿಯಾಗಿ ನೀರು ದೊರಕುವುದರಿಂದ ಮಳೆಗಾಲ ಮುಗಿಯುವ ವೇಳೆಗೆ ಹೂವು ಅರಳಿ ನಿಂತು ನಯನ ಮನೋಹರವಾಗಿ ಕಾಣುತ್ತದೆ. ಹಾಗೂ ಮನೆಯ ಆಕರ್ಷಣೆಯೂ ಕೂಡ ಹೆಚ್ಚಾಗುತ್ತದೆ. ಆದರೆ ಗಿಡಗಳನ್ನು ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡದೆ ಆಗಾಗ ಕತ್ತರಿಸುತ್ತಿರಬೇಕು. ಹಾಗೆಯೇ ಹುಲ್ಲು ಗಿಡಗಳನ್ನು ವಿವಿಧ ಆಕಾರದಲ್ಲಿ ಕತ್ತರಿಸಿದರೆ ಹೂದೋಟದ ಸೌಂದರ್ಯ ವರ್ಧನೆಗೂ ಸಹಕಾರಿ. ಈ ರೀತಿ ಮನೆಯನ್ನು ಗಿಡಗಳಿಂದ ಸಿಂಗರಿಸಿದರೆ ಮನೆಯ ಒಳಗೂ ಹೊರಗೂ ನಮಗೆ ಉತ್ತಮವಾದ ಆಮ್ಲಜನಕ ದೊರೆಯುತ್ತದೆ. ಆದರೆ ಗಿಡಗಳ ಸಂರಕ್ಷಣೆಯನ್ನೂ ಕೂಡ ಅದೇ ರೀತಿಯಾಗಿ ಮಾಡಬೇಕು. ಗಿಡಗಳಿಗೆ ಸರಿಯಾದ ಗಾಳಿ-ಬೆಳಕು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಅದಕ್ಕೆ ಸರಿಯಾಗಿ ನೀರು, ಫಲವತ್ತಾದ ಮಣ್ಣು ಹಾಕಿ ಪೋಷಿಸಿದರೆ ಮನೆಯ ಸೌಂದರ್ಯದ ಜೊತೆಗೆ ದೇಹದ ಆರೋಗ್ಯವೂ ಕೂಡ ಹೆಚ್ಚುತ್ತದೆ. ಇದಕ್ಕೆಲ್ಲಾ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಸುತ್ತಮುತ್ತಲೂ ಸಾಮಾನ್ಯವಾಗಿ ಕಾಣಸಿಗುವ ಹೂವಿನ ಗಿಡಗಳಿಂದ, ಕ್ರೋಟನ್ ಗಿಡಗಳಿಂದ ಹಾಗೂ ಅಲಂಕಾರಿಕ ಗಿಡಗಳಿಂದ ಇದೆಲ್ಲಾ ಸಾಧ್ಯವಾಗಿದೆ. ಶ್ರೀಮಂತರಿಗೆ ಮಾತ್ರ ಮನೆಯನ್ನು ಆಧುನಿಕವಾಗಿರಿಸಲಿ ಸಾಧ್ಯ ಎಂಬುದರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಮಗೆ ಸ್ವಾಭಾವಿಕವಾಗಿ ಸಿಗುವ ವಸ್ತು ಗಳಿಂದಲೇ ಕಡಿಮೆ ಖರ್ಚಿನಲ್ಲಿ ಮನೆಯ ಸೌಂದರ್ಯವನ್ನು ದ್ವಿಗುಣಗೊಳಿಸಲು ಸಾಧ್ಯವೆಂಬುದನ್ನು ಅರಿತುಕೊಳ್ಳಬೇಕು. ಗಿಡಗಳ ಶೃಂಗಾರ ವಿಧಾನಗಳು * ಮನೆಯ ವೆರಾಂಡದಲ್ಲಿ ಸಣ್ಣಗಿಡಗಳ ಕುಂಡಗಳನ್ನು ಓರಣವಾಗಿ ಜೋಡಿಸಿದರೆ ವೆರಾಂಡದ ಕಳೆ ಹೆಚ್ಚುತ್ತದೆ. * ಮನೆಯ ಎದುರಿನ ಸೂರಿನ ಮೇಲೆ ಸಣ್ಣ ತೂಗುವ ಕುಂಡಗಳಲ್ಲಿ ಸಣ್ಣ ಸಣ್ಣ ಹೂವಿನ ಗಿಡಗಳನ್ನು ನೆಟ್ಟು ನೇತು ಹಾಕಿದರೆ ಸೌಂದರ್ಯ ಹೆಚ್ಚುತ್ತದೆ. * ಮನಿಪ್ಲಾಂಟ್ ಬಳ್ಳಿಯನ್ನು ಮನೆಯೆದುರಿನ ಮಾಡಿನ ಮೇಲೆ ಒಂದು ಬದಿಯಿಂದ ಇನ್ನೊಂದು ಬದಿಗೆ ಬಿಟ್ಟರೆ ಅದು ಕಮಾನಿನಂತೆ ತೋರುತ್ತದೆ. * ಮನೆಯೆದುರಿನ ಮೆಟ್ಟಿಲುಗಳಲ್ಲಿ ಅಲಂಕಾರಿಕ ಗಿಡಗಳ ಕುಂಡಗಳನ್ನು ಜೋಡಿಸಿಟ್ಟರೆ ಮನೆಯ ಮುಂಭಾಗವೂ ಸುಂದರವಾಗಿ ಕಾಣುತ್ತದೆ. * ಮನೆಯ ಒಳಗೆ ಮೂಲೆಗಳಲ್ಲಿ ಸಾಧಾರಣ ಎತ್ತರದ ಅಲಂಕಾರಿಕ ಗಿಡದ ಕುಂಡವನ್ನು ಬೆಳೆಸಬಹುದು. * ಪ್ರತಿ ಕಿಟಕಿಗಳ ಮೂಲೆಯಲ್ಲಿ ಒಂದೊಂದು ಹೂದಾನಿಗಳನ್ನು ಇಡಿ. ಆ ಹೂದಾನಿಗಳು ಅಥವಾ ಗಿಡಗಳು ದುಬಾರಿಯಾಗಿರಬೇಕೆಂದೇನಿಲ್ಲ. * ಪ್ರತಿ ಕೋಣೆಯ ಬಾಗಿಲಿನ ಸಮೀಪ ಯಾವುದಾದರು ಕುಂಡಗಳನ್ನು ಜೋಡಿಸಿದರೆ ಒಳಾಂಗಣ ಆಕರ್ಷಕ ಹಾಗೂ ಆಧುನಿಕವಾಗಿಯೂ ಕಾಣುತ್ತದೆ.

ಮನಸ್ಸಿನ ಹತೋಟಿ:

ಮನಸ್ಸಿನ ಹತೋಟಿ: ಇದೇ ಆಂಜನೇಯ ಸಂದೇಶ ನಾವೆಲ್ಲರೂ ನಮ್ಮ ಚೈತನ್ಯಮಯವಾದ ದೇಹ, ಮನಸ್ಸು, ವಾಕ್ ಇತ್ಯಾದಿ ಶಕ್ತಿಗಳನ್ನು ದೇವರಿಂದ ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದೇವೆ. ಆದರೆ ಇವುಗಳನ್ನು ಬೇಡದಿರುವ ವಿಚಾರಗಳಲ್ಲಿ ತೊಡಗಿಸುತ್ತ ನಮ್ಮ ಶಕ್ತಿಗಳನ್ನು ಕ್ಷೀಣಗೊಳಿಸುತ್ತಿದ್ದೇವೆ. ತೀವ್ರವಾಗಿ ಇದರ ಬಗ್ಗೆ ವಿಚಾರ ಮಾಡಿದಾಗ ನಮಗೆ ಅರಿವಾಗುತ್ತದೆ, ನನ್ನಲ್ಲಿ ಆ ದೈವೀಕ ಅಂಶ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು. ಆಗಿದ್ದು ಹೇಗೆ ಅಂದರೆ ದಿನ ನಿತ್ಯವೂ ನಾನಾ ಕಾರಣಗಳಿಂದ ನಾವು ಮನಸ್ಸಿಗೆ ಧ್ಯಾನದ ಆಹಾರ ಕೊಡುವುದಿಲ್ಲ. ದಿನಕ್ಕೆ ಐದು ನಿಮಿಷ ಶ್ಲೋಕವನ್ನು, ಸ್ತೋತ್ರವನ್ನು ಹೇಳಿಕೊಳ್ಳುತ್ತೇವೆ, ಐದು ನಿಮಿಷ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ಆದರೆ ಹೊಟೇಲ್ ಕಂಡಾಗ ಮಾತ್ರ, ಹೋಗಿ ಸ್ನೇಹಿತರೊಂದಿಗೆ ಬೈ-ಟೂ ಟೀ ಅಥವಾ ಕಾಫೀ ಕುಡಿಯಲು ನಮಗೆ ಸಮಯದ ಅಭಾವವೇ ಇಲ್ಲ! ಇದೇ ರೀತಿ ನಾವು ದೇವಸ್ಥಾನಗಳನ್ನು ಕಂಡಾಗ ಎಷ್ಟು ಸಲ ಹೋಗಿದ್ದೇವೆ? ಶೇಕಡ 99 ಬಾರಿ ನಾವು ಹೊರಗಡೆಯಿಂದಲೇ ಕೈ ಮುಗಿಯುತ್ತೇವೆ. ಒಂದು ಬಾರಿ ಒಳಗಡೆ ಹೋಗೋದು ಯಾವಾಗ ಅಂದರೆ, ಯಾರಿಗೋ ಸಾಲ ತೀರಿಸಬೇಕಾಗಿದ್ದಾಗ, ನಮಗೆ ಹಣ ಬೇಕಾಗಿದ್ದಾಗ, ಅನಾರೋಗ್ಯ ಬಂದಾಗ ಮಾತ್ರ. ನನಗೇನೋ ಒಂದು ಕೆಲಸ ಆಗಬೇಕು ಅದಕ್ಕೆ ಬಂದಿದ್ದೇನೆ ನಿನ್ನ ಹತ್ತಿರ ಎನ್ನುವ ಒಂದು ರಾಜಸಿಕ ಮನೋಭಾವದಿಂದ ಹೋಗುತ್ತೇವೆ. ನಮ್ಮ ಕೋರಿಕೆಗಳು ಈಡೇರಿದಾಗ 'ಯಲಹಂಕದಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ನಮ್ಮ ಕೋರಿಕೆಗಳೆಲ್ಲ ಈಡೇರುತ್ತವೆ. ಬಹಳ ಪವರ್ಫುಲ್ ಆಂಜನೇಯ!' ಎಂದು ಆ ಭಗವಂತನ ಹತ್ತಿರ ಮತ್ತೆ ಮತ್ತೆ ಹೋಗುತ್ತೇವೆ. ಇದು ಒಂದು ಸಾಧಾರಣ ಮನಸ್ಸಿನ ರೀತಿ ನೀತಿಗಳು. ದೇವಸ್ಥಾನವೆಂದರೆ ಬರೀ ನಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುವಂತಹ ಸ್ಥಳವೊಂದೇ ಅಲ್ಲ, ಮನಸ್ಸಿಗೆ ಆಹಾರ ಕೊಡತಕ್ಕಂಥ, ಆ ದಿವ್ಯ ಚೈತನ್ಯದಿಂದ ಮತ್ತೆ ಪುನಶ್ಚೇತನಗೊಳಿಸುವಂತಹ ಸ್ಥಳ ಎಂದು ಅರಿತುಕೊಳ್ಳಬೇಕು. ಮನಸ್ಸು ಅಂದರೆ ಹೇಗೆ ಇಟ್ಟುಕೊಳ್ಳಬೇಕು, ಅದನ್ನು ಹತೋಟಿಗೆ ಹೇಗೆ ತರಬೇಕೆಂದು ನಮಗೆ ತಿಳಿಸಿಕೊಟ್ಟವನು ಆಂಜನೇಯ. ಶ್ರೀರಾಮನಿಗೆ ಆಂಜನೇಯ ತನ್ನ ದೇಹ ಮಾತ್ರ ಅಲ್ಲ, ನಿರಂತರವಾಗಿ ಕೊಟ್ಟದ್ದು ತನ್ನ ಮನಸ್ಸನ್ನು. ಅವನ ಎದೆಯಲ್ಲಿ, ಮನಸ್ಸಿನಲ್ಲಿ, ಹೃದಯ ಕಮಲದಲ್ಲಿ ನಿರಂತರವಾಗಿ ಇದ್ದದ್ದು ರಾಮ, ಲಕ್ಷ್ಮಣ, ಸೀತೆಯರು ಮಾತ್ರ. ಶ್ರೀರಾಮ ಅವನ ಭಕ್ತಿಗೆ ಮೆಚ್ಚಿ ವರವನ್ನು ಕರುಣಿಸಿದಾಗ, ಆಂಜನೇಯ ಮುಕ್ತಿಯನ್ನು ಬಯಸಲಿಲ್ಲ- ಸದಾ ನನ್ನ ಮನಸ್ಸಿನಲ್ಲಿ ನೀನೇ ನೆಲೆಸಬೇಕು, ಏಳೇಳು ಲೋಕಗಳಲ್ಲಿ ಸಂಚರಿಸುತ್ತ ನಿನ್ನ ಗುಣಗಾನವನ್ನು ನಾನು ಮಾಡಬೇಕು' ಎಂದನು. ಆದ್ದರಿಂದ ಶ್ರೀರಾಮನು ಆಂಜನೇಯನಿಗೆ ಚಿರಂಜೀವತ್ವವನ್ನು ಕರುಣಿಸಿದನು. ಕಲಿಯುಗದಲ್ಲಿ ಜನರು ಭಕ್ತಿ ಎಂದರೇನು , ಮನಸ್ಸನ್ನು ಹೇಗೆ ತಿಳಿಯಾಗಿ ಇಟ್ಟುಕೊಳ್ಳಬಹುದು ಎನ್ನುವ ವಿಚಾರ ಆಂಜನೇಯನಿಂದ ತಿಳಿದುಕೊಳ್ಳಲಿ ಎನ್ನುವುದೇ ಇದರ ಉದ್ದೇಶ . ತನ್ನ ಮನಸ್ಸನ್ನೇ ಅಲ್ಲದೆ ಆಂಜನೇಯ ತನ್ನ ದೇಹದ ಕಣಕಣವನ್ನು, ನರನಾಡಿಗಳೆಲ್ಲವನ್ನೂ ಶ್ರೀರಾಮನಿಗಾಗಿ ಅರ್ಪಿಸಿಬಿಟ್ಟ . ಆಗ ಅವನ ದೇಹಕ್ಕೆ ಪುಷ್ಟಿ , ಮನಸ್ಸಿಗೆ ಧೈರ್ಯ ಬಂತು . ತಾನೇ ಒಂದು ಶಕ್ತಿಯಾಗಿ ನಿಂತ. ಆದರೆ ಮನುಷ್ಯರು ನಾವು ಮಾಡುವುದೇನು ? ಭಗವಂತ ಕೊಟ್ಟಿರುವ ಆ ನಮ್ಮ ಮನಸ್ಸನ್ನು ಇಲ್ಲದ ವಿಚಾರಗಳಲ್ಲಿ ತೊಡಗಿಸಿ , ದೇಹಕ್ಕೂ ತುಷ್ಟಿ-ಪುಷ್ಟಿ ಸಿಗದಂತೆ ಮಾಡುತ್ತೇವೆ. ಆದ್ದರಿಂದ ಆ ಆಂಜನೇಯನನ್ನೇ ಉದಾಹರಣೆಯಾಗಿ ತೆಗೆದುಕೊಂಡು ನಮ್ಮ ದೇಹ, ಮನಸ್ಸು, ಬುದ್ಧಿ, ಪ್ರೇರಣಾ ಶಕ್ತಿ, ಚಿಂತನೆ ಮಾಡುವ ಶಕ್ತಿ, ಮಾತನಾಡುವ ಶಕ್ತಿ, ಆಲೋಚನೆ ಮಾಡುವ ಶಕ್ತಿ - ಎಲ್ಲವೂ ಅತ್ಯಂತ ಅಮೂಲ್ಯ ಎಂದು ಪರಿಗಣಿಸಿ ಅವುಗಳನ್ನು ದುರುಪಯೋಗ ಮಾಡದಿರುವಂತೆ ಜೋಪಾನವಾಗಿ ಕಾಪಾಡಬೇಕು. ಮನಸನ್ನು ಧ್ಯಾನ, ಜಪಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತ ಅಧ್ಯಾತ್ಮಿಕ ಸಂಸ್ಕಾರವನ್ನು ಬೆಳೆಸಿ ಅದನ್ನು ಸ್ಥಿರವಾಗಿ ನಿಲ್ಲಿಸಬೇಕು. ಇದೇ ಸಾಧಾರಣ ಮನಸ್ಸನ್ನು ದೈವೀಕವಾಗಿ ಪರಿವರ್ತಿಸುವ ವಿಧಾನ. - ಶ್ರೀ ನಿಮಿಷಾನಂದ ಗುರೂಜಿ

ಜಾತಕದಲ್ಲಿ ಪಾಪಗ್ರಹದ ಫಲ

ಜಾತಕದಲ್ಲಿ ಪಾಪಗ್ರಹದ ಫಲ * ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಗ್ರಹದೋಷದಿಂದ ಜನ ತೊಂದರೆ ಅನುಭವಿಸುತ್ತಾರೆ. ಉದ್ಯೋಗದಲ್ಲಿ ಸಮಸ್ಯೆ, ಅಪಮಾನ, ವೈರಿಕಾಟ ಆಗುತ್ತದೆ. ಸುತ್ತಲಿರುವ ಜನರಿಂದ ತೊಂದರೆ, ವಿನಾಕಾರಣ ಅಪವಾದಗಳು ಬರುತ್ತವೆ. ಗ್ರಹದೋಷ ಅಪಕೀರ್ತಿ ಹಾಗೂ ಕೆಲ ವೇಳೆ ಆಯುಷ್ಯಕ್ಕೂ ಕಂಟಕವಾಗುತ್ತದೆ. ವ್ಯಯ ಸ್ಥಾನದಲ್ಲಿ ಶನಿ, ರಾಹು ಯಾವುದಾದರೂ ಒಂದು ಗ್ರಹ ಇದ್ದರೂ, ಇವರಿಗೆ ದಾರಿದ್ರ್ಯ ಯೋಗವಾಗುತ್ತದೆ. ಇಂತಹವರಿಗೆ ಜೀವನ ಪೂರ್ತಿ ಬಡತನ ಬರುತ್ತದೆ. ವ್ಯಯ ಸ್ಥಾನದಲ್ಲಿ ಶನಿಯು ಬಹಳ ಕೆಟ್ಟ ಫಲವನ್ನು ಕೊಡುತ್ತದೆ. ಇಂತಹವರಿಗೆ ಅಧಿಕಾರದಲ್ಲಿ ತೊಂದರೆಯಾಗುತ್ತದೆ. ಇತರ ಕೆಲಸಗಳಲ್ಲಿ ಅಡೆತಡೆಯಾಗಿ ಕೆಲಸವನ್ನೇ ಕಳಕೊಳ್ಳುವ ಪ್ರಸಂಗವೂ ಬರಬಹುದು. ಶನಿ ಮಂಗಳದಿಂದ ಪಾಪಗ್ರಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪ್ರಬಲರಾಗಿದ್ದರೆ ಇವರು ಯಾವುದಾದರೂ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೆ ಒಳಗಾಗುತ್ತಾರೆ. ವ್ಯಯ ಸ್ಥಾನದಲ್ಲಿ ರವಿಯು ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಬಿಡದೆ ಅರ್ಧಕ್ಕೆ ನಿಂತು ಹೋಗುವಂತೆ ಮಾಡುತ್ತದೆ. ವ್ಯಯ ಸ್ಥಾನದಲ್ಲಿ ಮಂಗಳನಿದ್ದರೆ ಇಂತಹವರ ಹೆಂಡತಿ ಮರಣ ಹೊಂದುತ್ತಾರೆ. ಗ್ರಹಗಳಿಗೆ ಸ್ಥಾನ ರಾಶಿ ಮತ್ತು ಯೋಗ ಹೀಗೆ ನಾಲ್ಕು ಬಗೆಯ ಫಲಗಳು ಇರುವವು. ಮೇಲಿನ ವರದಿಂದ ಸ್ಥಾನ ಬಲದ ಫಲ, ಪಾಪಗ್ರಹಗಳ ರಾಶಿಯಲ್ಲಿ ಪಾಪಗ್ರಹಗಳ ಫಲವು ಬಹಳ ತೀಕ್ಷ್ಣ ರೀತಿಯಿಂದ ಇರುತ್ತದೆ. ಕುಂಡಲಿಯಲ್ಲಿ ಕೇಂದ್ರದಲ್ಲಿರುವ ಗ್ರಹಗಳ ಫಲವು ಹೆಚ್ಚಾಗಿ ದೊರೆಯುವುದು. ತ್ರಿಕೋಣದಲ್ಲಿಯ ಗ್ರಹಗಳ ಫಲವು ಮೇಲಿನ ಫಲಕ್ಕಿಂತ ಕಡಿಮೆ. ಅಷ್ಟಮ ಮತ್ತು ವ್ಯಯ ಸ್ಥಾನದಲ್ಲಿಯ ಫಲವು ಸಾಮಾನ್ಯ ಕುಂಡಲಿಯಲ್ಲಿ ಗ್ರಹವು ಸ್ವಾತಂತ್ರ್ಯ ಇದ್ದಷ್ಟು ಫಲ ಜಾಸ್ತಿ ಕೊಡುವುದು. ಇಂತಹ ಗ್ರಹಗಳು ಇನ್ನೊಂದು ಗ್ರಹದೊಂದಿಗೆ ಇಲ್ಲದಿರುವುದು ಮತ್ತು ಇತರ ಗ್ರಹಗಳ ದಷ್ಟಿ ಇಲ್ಲದೆ ಇರುವುದು. ಇದು ಸ್ವತಂತ್ರ ಗ್ರಹವಾಗುತ್ತದೆ. ವಕ್ರ ಗ್ರಹದ ಫಲವು ವಕ್ರವಾಗಿರುತ್ತದೆ. ಅಸ್ತಂಗತ ಗ್ರಹಗಳ ಫಲವು ಸಿಗುವುದಿಲ್ಲ. ಕುಂಡಲಿಯಲ್ಲಿ ಬಲಿಷ್ಠ ಗ್ರಹ ಯಾವುದು ಇರುತ್ತದೆಯೋ ಅದಕ್ಕೆ ಅನುಗುಣವಾಗಿ ಫಲ ಕೊಡುತ್ತದೆ. ಕುಂಡಲಿಯಲ್ಲಿ ದ್ವಾದಶ ಸ್ಥಾನಗಳಲ್ಲಿ ಮತ್ತು ಆಯಾ ಭಾಗಗಳಲ್ಲಿ ಯಾವ ಅಂಶವು ವಿಧಿತವಿರುವುದೋ ಮತ್ತು ಆ ಅಂಶದ ಸಮೀಪದಲ್ಲಿ ಯಾವ ಗ್ರಹ ಇರುವುದೋ, ಆ ಗ್ರಹದ ಫಲವು ಇಡೀ ಆಯುಷ್ಯದಲ್ಲಿ ದೊರೆಯುವುದು. ಒಂದೇ ಮನೆಯಲ್ಲಿ ಅನೇಕ ಗ್ರಹಗಳಿದ್ದರೆ ಪ್ರತಿಯೊಂದು ಗ್ರಹದ ಫಲವು ಆ ಗ್ರಹಗಳ ಯೋಗ ಕಾಲವು ಬರುವವರೆಗೆ ಅದರ ಫಲವು ಸಿಗುವುದಿಲ್ಲ.

ಜ್ಯೋತಿಷ್ಯ ಮತ್ತು ವೈವಾಹಿಕ ಬಾಂಧವ್ಯ

ಜ್ಯೋತಿಷ್ಯ ಮತ್ತು ವೈವಾಹಿಕ ಬಾಂಧವ್ಯ ಮದುವೆ ಜೀವನದ ಅತಿ ಮುಖ್ಯ ಘಟ್ಟ. ಒಂದು ಹೊಸ ಕುಟುಂಬ ಪ್ರಾರಂಭವಾಗುವ ಈ ಪದ್ಧತಿ ದಂಪತಿ ಮತ್ತು ಅವರ ಪೋಷಕರಿಗೂ ಒಂದು ಹೊಸ ಅನುಭವ. ಬನ್ನಿ ಮದುವೆಗಳ ಕುರಿತು ಜ್ಯೋತಿಷ್ಯ ಏನು ಹೇಳುತ್ತದೆ ನೊಡೋಣ. ವ್ಯಕ್ತಿಯ ಜೀವನದಲ್ಲಿ ಸುಖ, ಕೀರ್ತೀ ಸುಲಭವಾಗಿ ಸಿಗದು. ಜೀವನದ ಯಶಸ್ಸಿನಲ್ಲಿ ಗಂಡು-ಹೆಣ್ಣಿನ ಜಾತಕ ಕುಂಡಲಿಗಳ ಪಾತ್ರ ಮಹತ್ವದ್ದು. ಜಾತಕಗಳನ್ನು ಕೆಲವರು ತಿರಸ್ಕರಿಸುತ್ತಾರೆ, ಕೆಲವರು ಪುರಸ್ಕರಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆಯಾಗುವುದು ಮುಖ್ಯ. ಕೆಲವರು ಕೇವಲ ಗಣಗಳನ್ನು ಮಾತ್ರ ನೋಡಿ ಹೊಂದಾಣಿಕೆ ಮಾಡುತ್ತಾರೆ. ಆದರೆ, ಮುಖ್ಯವಾಗಿ ಪರಸ್ಪರ ಜಾತಕ ಕುಂಡಲಿಗಳು ಹೊಂದಾಣಿಕೆಯಾಗದೇ ಇದ್ದರೆ, ಮದುವೆಗಳು ಯಶಸ್ಸು ಸಾಧಿಸಲಾರವು. ಇಬ್ಬರ ಜಾತಕಗಳಲ್ಲಿ ಗುರು-ಶುಕ್ರ ಕುಜ ಮದುವೆ ಸಮಯದಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ. ಕುಂಡಲಿಗಳಲ್ಲಿ ಗುರು-ಶುಕ್ರ-ಕುಜ ಸಮಾನ ಬಲಿಷ್ಠರಾಗಿದ್ದಾಗ ಮಾತ್ರ ಮದುವೆ ಯಶಸ್ವಿಯಾಗುತ್ತವೆ. ಕನ್ಯಾ-ಮಿಥುನ ಲಗ್ನಕ್ಕೆ ಬಿಟ್ಟು ಬೇರೆ ಲಗ್ನಗಳಿಗೆ ಗುರು ಸಪ್ತಮದಲ್ಲಿ ವಕ್ರನು, ಅಸ್ತಮ ಪೀಡಿತನಾರದೆ ಬಲಿಷ್ಠನಾಗಿದ್ದರೆ ಸಾಮಾನ್ಯವಾಗಿ ಮದುವೆಗಳು ಮುರಿಯುವುದಿಲ್ಲ. ಗುರುವಿನ ಸಮಸಪ್ತಕ ದೃಷ್ಟಿ ಶುಕ್ರನ ಮೇಲಿದ್ದರೂ ಒಂದೇ ಮದುವೆಯಾಗುತ್ತದೆ. ಸಪ್ತಮದಲ್ಲಿ ಪಾಪಗ್ರಹಗಳಿದ್ದು ಅದಕ್ಕೆ ಶುಭ ದೃಷ್ಟಿಗಳಿಲ್ಲವಾದರೆ ಸಂಸಾರದಲ್ಲಿ ತೊಂದರೆಯಾಗುತ್ತದೆ. ಲಗ್ನ ಸಪ್ತಮ ಭಾವದಲ್ಲಿ ರವಿ-ಶನಿ ಇದ್ದರೂ ಅಥವಾ ಲಗ್ನದಲ್ಲಾಗಲಿ ಸಪ್ತಮದಲ್ಲಾಗಲಿ ರವಿ, ಶನಿ ಯುತಿ ಇದ್ದರೂ ಮತ್ತು ರವಿ-ಶನಿ 1-2-5-7-9ರಲ್ಲಿ ಯುತಿ ಇದ್ದರೂ ಮದುವೆಯಲ್ಲಿ ಸೋಲು ಖಚಿತ. ಹುಡುಗನ ಕುಂಡಲಿಯಲ್ಲಿ ಲಗ್ನದಲ್ಲಿ ರವಿ-ಬುಧ-ಕುಜ ಇದ್ದು ಇವರಿಗೆ ಯಾವ ಶುಭ ದೃಷ್ಟಿ ಸಂಬಂಧಗಳಿಲ್ಲವಾದರೆ ಇವರು ನೋಡುವುದಕ್ಕೆ ಸುಂದರವಾಗಿ ಇದ್ದು ಎಲ್ಲರೂ ಇವರನ್ನು ಗೌರವಿಸುವ ಹಾಗೆ ಕಾಣುತ್ತಾರೆ. ಆದರೆ, ಇವರಿಗೆ ಕೆಟ್ಟ ಹೃದಯ, ಸ್ವಾರ್ಥ, ಶಯನಾಗ್ರಹದಲ್ಲಿ ಹೆಂಡತಿಯನ್ನು ಪೀಡಿಸುವ ಹಾಗೂ ಅನುಮಾನಿಸುವ ಸ್ವಭಾವ ಇರುತ್ತದೆ. ಹೆಣ್ಣಿಗೆ ಸಪ್ತಮಾದಿ ಪತಿಯ ಆರರಲ್ಲಿ ಇದ್ದು ಪಾಪ ನಕ್ಷತ್ರದಲ್ಲಿರುವ ಶುಕ್ರನ ಜೊತೆಯಲ್ಲಿ ಇದ್ದರೆ ಈ ಹೆಣ್ಣು ನೋಡಲು ಸುಂದರಳು, ಆಕರ್ಷಿತಳೂ ಆಗಿದ್ದರೂ ಈಕೆಗೆ ಲೈಂಗಿಕಾಸಕ್ತಿ ಕಡಿಮೆ ಇರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಗಂಡನಿಗೆ ಸಹಕರಿಸದೆ ದೂರೀಕರಿಸುತ್ತಾಳೆ. ಕುಜನ ನಕ್ಷತ್ರದಲ್ಲಿ ಚಂದ್ರನಿದ್ದು ಅಲ್ಲಿಂದ ವ್ಯಯದಲ್ಲಿ ರವಿ-ಶನಿಗಳಿದ್ದರೆ ಇಂತಹವರ ಮದುವೆ ಜೀವನ ದುರಂತಮಯವಾಗಿರುತ್ತದೆ. ಕುಜ ದೋಷವಿರುವ ಹೆಣ್ಣಿಗೆ-ಕುಜ ದೋಷವಿರುವ ಗಂಡಿಗೆ ಕೊಟ್ಟು ಮದುವೆ ಮಾಡಿ ವರನ್ನು ಪ್ರತ್ಯೇಕವಾಗಿ ಸಂಸಾರ ಮಾಡಲು ಬಿಟ್ಟರೆ ಸಾಧಾರಣ ಸುಖ ಸಂಸಾರ ನಡೆಸುತ್ತಾರೆ. ಸಾಮಾನ್ಯವಾಗಿ ಕುಜಗ್ರಹ 1-2-4-7-8-12ರಲ್ಲಿ ಇದ್ದರೆ ಕುಜ ದೋಷವೆನ್ನುತ್ತಾರೆ. ಆದರೆ, ಕುಜನ ಜತೆ ಚಂದ್ರ ಬುಧ, ಯುತಿ ಮತ್ತು ದೃಷ್ಟಿಗಳು ಇದ್ದರೆ. ನಕ್ಷತ್ರಗಳು ಶುಭವಾಗಿದ್ದರೆ ಮತ್ತು ಶನಿ ಒಳ್ಳೆಯ ಸ್ಥಾನದಲ್ಲಿ ಇದ್ದರೆ ಕುಜ ದೋಷವಿರುವುದಿಲ್ಲ. ಕುಜ ದೋಷವಿರುವ ಹೆಣ್ಣು ತನ್ನ ಅತ್ತೆಯ ಜತೆ ಹೊಂದಾಣಿಕೆಯಾಗುವುದು ಕಷ್ಟ. ಯಾವ ಜಾತಕದಲ್ಲಿ ಗಂಡಿನ ಸಪ್ತಮಾದಿ ಪತಿ ಇರುವ ರಾಶಿ ಹೆಣ್ಣಿನ ರಾಶಿಯಾಗಿರುತ್ತದೊ ಅಥವಾ ಗಂಡಿನ ಜಾತಕದ ಶುಕ್ರನು ಇರುವ ರಾಶಿಯೇ ಹೆಣ್ಣಿನದಾದರೆ ಮಧುರ ಬಾಂಧವ್ಯವಿರುತ್ತದೆ. ಇದನ್ನೆಲ್ಲ ಕುಲಂಕಶವಾಗಿ ಪರಿಶೀಲಿಸಿ ಹೊಂದಾಣಿಕೆಯಾದರೆ ಸುಖ ಜೀವನಕ್ಕೆ ನಾಂದಿಯಾಗುತ್ತದೆ. ಇನ್ನು ಪ್ರೇಮ ವಿವಾಹಗಳು ಹೆಚ್ಚಿವೆ. ಪ್ರೀತಿಸಿ ಮದುವೆಯಾದರೂ ಇವರು ಸುಖವಾಗಿರುವುದಿಲ್ಲ ಏಕೆ? ಜ್ಯೋತಿಷ್ಯದ ಪ್ರಕಾರ ಚಂದ್ರ-ಶುಕ್ರರಿಗೆ ರಾಹು ಕೇತು ಪೀಡೆ ಅನಿವಾರ್ಯತೆ ಉಂಟಾದರೆ ಪಂಚಮದಲ್ಲಿ ಪಾಪಗ್ರಹಳಿದ್ದರೆ ಅಷ್ಟುಮಸ್ಥಾನ ಸಂಪೂರ್ಣವಾಗಿ ಕೆಟ್ಟು ಹೋದರೆ ಪ್ರೀತಿ ಮಾಡುವ ಕೆಟ್ಟ ಉತ್ಸಾಹ ಉಂಟಾಗುತ್ತದೆ. ಆದರೆ, ಪ್ರೀತಿಯಲ್ಲಿ ಯಶಸ್ಸು ಸಿಗುವುದಿಲ್ಲ. ಇಂಥ ಜಾತಕದವರು ಪ್ರೇಮ ವಿವಾಹವಾದರೆ ಹೆಚ್ಚು ದಿನ ಸುಖವಾಗಿ ಇರುವುದಿಲ್ಲ. ಯಾವಾಗಲೂ ಕುಂಡಲಿಯಲ್ಲಿ 2ನೇ ಮನೆಯಿಂದ ಕುಟುಂಬ ಜೀವನ 4ನೇ ಮನೆಯಿಂದ ಸಂತಾನ ಪೂರ್ವ, ಗಂಡಿಗೆ 7ನೇ ಮನೆ ಹೆಣ್ಣಿಗೆ 7-8ನೇ ಮನೆಗಳನ್ನು ಇವರ ದಾಂಪತ್ಯ ಹೇಗಿರುತ್ತದೆ ಎಂದು ತಿಳಿಯಬೇಕು. 9ನೇ ಮನೆಯಿಂದ ಭಾಗ್ಯವನ್ನು ತಿಳಿದು ಜಾತಕಗಳು ಸರಿ ಇದ್ದರೆ ಮದುವೆಯಾಗಬಹುದು. ಪ್ರೀತಿಸಿದವರು ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರೆ ಸುಖ ಜೀವನ ನಡೆಸಬಹುದು.ಕಾಳಿದಾಸ ಜಿ. ಭಟ್

ಅಣ್ಣಾವ್ರೇ ಏಕೆ ನಂಬರ್ ಒನ್ ?*

ಅಣ್ಣಾವ್ರೇ ಏಕೆ ನಂಬರ್ ಒನ್ ?* ಸಿ.ವಿ. ಶಿವಶಂಕರ್ ಸಂಖ್ಯಾಶಾಸ್ತ್ರದಲ್ಲಿ ನಂ. 1ಕ್ಕೆ ಒಳ್ಳೆಯ ಬೆಲೆ ಕಾರಣ ಆ ಒಂದು ಎನ್ನುವ ಸಂಖ್ಯೆ ಸೂರ್ಯನ ನಂಬರ್ ರಾಜ್ಕುಮಾರ್ ಎಂದರೆ ಅವರು ನಂ. 1ನೇ ಸಂಖ್ಯೆಯ ಆಶೀರ್ವಾದ ಪಡೆದ ಧ್ರುವತಾರೆ. ಸಂಖ್ಯೆ ಒಂದು ಸೂರ್ಯನನ್ನು ಪ್ರತಿನಿಧಿಸುತ್ತದೆ. ಸೂರ್ಯ ಗ್ರಹಗಳ ರಾಜ, ರಾಜಗ್ರಹ, ಸೂರ್ಯನ ಸಂಖ್ಯೆ ಒಂದು. ಆದರೆ ಆ ಸಂಖ್ಯೆಯ ಹೆಸರಿನ ವ್ಯಕ್ತಿ, ಸೂರ್ಯನಂತೆಯೇ ಜಗತ್ತಿಗೆಲ್ಲ ಕಾಣಿಸಿಕೊಳ್ಳುವ ವ್ಯಕ್ತಿ ಆಗುತ್ತಾನೆ. ರಾಜನಂತೆಯೇ ಕೀರ್ತಿ ಗಳಿಸುತ್ತಾನೆ ಎಂಬುದು ಲೋಕವಿದಿತ. ಚಲನಚಿತ್ರ ರಂಗದಲ್ಲಿ ಹೆಸರು ಪಡೆದ ಕಲಾವಿದರ 'ರ' ಇಲ್ಲವೆ 'ರಾ' ಎಂಬ ಅಕ್ಷರದಿಂದ ಪ್ರಾರಂಭವಾದರೆ ಅವರು ಸೂರ್ಯನಂತೆಯೇ ಪ್ರಕಾಶಿಸುತ್ತಾರೆ ಎಂದು ಸಂಖ್ಯಾಶಾಸ್ತ್ರ ತಿಳಿದವರು ಅರ್ಥೈಸುತ್ತಾರೆ. ರಾಜ್ಕುಮಾರ್ ಎಂಬ ಹೆಸರನ್ನು ಇಂಗ್ಲಿಷಿನಲ್ಲಿ ಬರೆದರೆ rajkumar ಎಂಟು ಇಂಗ್ಲಿಷ್ ಆಲ್ಫಬೆಟಿಕ್ ಅಕ್ಷರಗಳಾಗುತ್ತವೆ. ಎಲ್ಲವನ್ನು ಸಂಖ್ಯಾಶಾಸ್ತ್ರದಿಂದ ಕೂಡಿಸಿದರೆ 21126412 ಹೀಗೆ ಸಂಖ್ಯೆ ಆಗುತ್ತದೆ. ಇದೆಲ್ಲವನ್ನು ಕೂಡಿಸಿದರೆ 19 ಅಂಕಿ ಆಗುತ್ತದೆ. ಒಂದು ಮತ್ತು ಒಂಭತ್ತು ಕೂಡಿಸಿದರೆ 10 ಆಗುತ್ತೆ. ಹತ್ತರಲ್ಲಿ ಸೊನ್ನೆ ತೆಗೆದರೆ 1 ಬರುತ್ತೆ. ಒಂದು ಸೂರ್ಯನ ನಂಬರ್ ರಾಜ್ಕುಮಾರ್ ಅದೃಷ್ಟ ಸಂಖ್ಯೆ 1 ಅದು 10 ಆಗಿರಬಹುದು. 19 ಆಗಿರಬಹುದು 28 ಆಗಿರಬಹುದು 37 ಆಗಿರಬಹುದು 55 ಆಗಿರಬಹುದು. 64 ಆಗಿರಬಹುದು ಹೇಗೆ ಕೂಡಿಸಿದರೂ ಒಂದೇ... ಅವನು ಕಲಾವಿದನಾಗಿರಬಹುದು, ರಾಜಕೀಯ ವ್ಯಕ್ತಿ ಆಗಿರಬಹುದು, ಕ್ರೀಡಾಪಟು ಆಗಿರಬಹುದು. ಅಕ್ಷರದಿಂದ ಯಾರ ಹೆಸರು ಪ್ರಾರಂಭವಾಗಿರುತ್ತೋ ಅವನು ಸೂರ್ಯನಂತೆಯೇ ಜನಪ್ರಿಯನಾಗುತ್ತಾನೆ. ರಾಜ್ಕುಮಾರ್, ಎನ್.ಟಿ. ರಾಮರಾವ್, ರಜನಿಕಾಂತ್, ರಂಗರಾವ್, ರಾಜ್ಕಪೂರ್, ಎಂ.ಜಿ. ರಾಮಚಂದ್ರನ್, ರಮಾನಂದ ಸಾಗರ ಹೆಸರುಗಳ ಹಾಗೇ ಜನಪ್ರಿಯ ಹೆಸರಿನ ಮಧ್ಯದಲ್ಲಿ 'ರ' ಅಕ್ಷರ ಬಂದರೆ ಉದಾ : ವಜ್ರಮುನಿ, ಅಂಬರೀಷ್, ತೂಗುದೀಪ ಶ್ರೀನಿವಾಸ, ರಾಜೇಂದ್ರಸಿಂಗ್, ಆರತಿ, ಶ್ರೀನಾಥ್, ರವಿಚಂದ್ರನ್, ರಾಮಕಷ್ಣ, ಉಪೇಂದ್ರ, ಭಾರತಿ, ವಿಷ್ಣುವರ್ಧನ, ಶ್ರೀಧರ್ ಮುಂತಾದ ಕಲಾವಿದರ ಹೆಸರಲ್ಲೂ 'ರ' ಅಕ್ಷರ ಇದೆ. ಡಾ. ರಾಜ್ಕುಮಾರ್ರವರು ಬೆಂಗಳೂರಲ್ಲಿ ವಸತಿ ಮಾಡುವಾಗ ಹೈಲ್ಯಾಂಡ್ಸ್ ಹೊಟೆಲ್ನಲ್ಲಿ ನಂ. 10ನೇ ರೂಮಲ್ಲೇ ಇರುತ್ತಿದ್ದರು. ಕಾಕಾತಾಳೀಯವೆಂಬಂತೆ ಸೂರ್ಯನ ನಂಬರ್. 1 ಹೇಗೆ ತನ್ನ ಶಕ್ತಿ ತುಂಬಿತ್ತೋ ಹಾಗೆಯೇ ನಂ. 6 ಕೂಡಾ ರಾಜ್ಕುಮಾರ್ರವರಿಗೆ ಆಶೀರ್ವಾದ ಮಾಡುತ್ತಿತ್ತು. ಅದೇ ನಂಬರ್ ಶುಕ್ರನ ನಂಬರ್. ಶುಕ್ರ ಕಲೆಗೆ ಸಂಬಂಧಪಟ್ಟ ಗ್ರಹ, ರಾಜ್ಕುಮಾರ್ರು ಹುಟ್ಟಿದ್ದು 24ನೇ ತಾರೀಖು, 24 ಎಂದರೆ 2+4 ಸೇರಿ 6ನೇ ನಂಬರ್ ಶುಕ್ರನ ನಂಬರ್ ಆಗುತ್ತೆ. ರಾಜ್ಕುಮಾರ್ರವರಿಗೆ 1, 6, 3, 8 ಈ ಸಂಖ್ಯೆಗಳೆಲ್ಲ ಅವರಿಗೆ ಅದೃಷ್ಟ ಸಂಖ್ಯೆಗಳೇ ಆಗಿವೆ. ಸೂರ್ಯ, ಶುಕ್ರ, ಗುರು, ಶನಿ ಈ ಗ್ರಹಗಳೆಲ್ಲ ಅವರನ್ನು ಅದಷ್ಟದ ಪರಮೋಚ್ಚ ಪದವಿಗೆ ಏರಿಸಿದೆ.

ಗಂಡೋ ? ಹೆಣ್ಣೋ ??: ನಿಮಗೆ ಯಾವ ಮಕ್ಕಳು ಬೇಕು?

ಗಂಡೋ ? ಹೆಣ್ಣೋ ??: ನಿಮಗೆ ಯಾವ ಮಕ್ಕಳು ಬೇಕು? ವಿದ್ವಾನ್ ನಾಗಪತಿ ಎಮ್ಮೆಗುಂಡಿ ದಂಪತಿಗಳಿಗೆ ತಮಗೆ ಇಷ್ಟವಾದ ಮಗುಬೇಕೆಂಬ ಇಚ್ಚೆ ಸಹಜ. ಆದರೆ ಕೆಲವರಿಗೆ ಗಂಡು ಸಂತಾನದ ಬಯಕೆ ಇದ್ದರೆ ಹೆಣ್ಣು ಮಗುವೂ ಆಗಬಹುದು. ಹೆಣ್ಣುಬೇಕೆನ್ನುವವರಿಗೆ ಗಂಡುಕೂಸಾಗಬಹುದು. ಆದರೆ ಜ್ಯೋತಿಶ್ಯಾಸ್ತ್ರದಲ್ಲಿ ಹೇಳಿದ ಪ್ರಕಾರ ನಡೆದುಕೊಂಡರೆ ತಮಗೆ ಬೇಕಾದ ಮಗುವನ್ನೇ ಪಡೆಯಬಹುದು. ಗರ್ಭಾದಾನವನ್ನು ಅಂದರೆ ಪತಿಪತ್ನಿಗಳಿಬ್ಬರ ಸೇರುವಿಕೆ ಯಾವಾಗ ನಡೆಯಬೇಕೆಂಬುದನ್ನು ಶಾಸ್ತ್ರ ಹೇಳುತ್ತದೆ. ಸ್ತ್ರೀಯು ರಜಸ್ವತಿಯಾದ ಮೂರು ದಿವಸದ ನಂತರ ಅಂದರೆ ನಾಲ್ಕನೆಯ ದಿವಸದಿಂದ ಸಂಗಮಕ್ಕೆ ಸ್ತ್ರೀ ಅರ್ಹಳಾಗುವಳು. ನಾಲ್ಕನೆಯ ರಾತ್ರಿ ಪತಿಯ ಸಂಗಮವಾದರೆ ಅಲ್ಪಾಯುವಾದ ಮಗನು ಜನಿಸುತ್ತಾನೆ. ಐದನೆಯ ರಾತ್ರಿಯಲ್ಲಿ ದಂಪತಿಗಳು ಕೂಡಿದರೆ ಸ್ತ್ರೀ ಸಂತಾನ. ಆರನೆಯ ರಾತ್ರಿಯಲ್ಲಿ ಸಂಗಮವಾದರೆ ಮಗನು ಜನಿಸುವನು. ಏಳನೇ ರಾತ್ರಿಯಲ್ಲಿ ಗರ್ಭಾಧಾನವಾದರೆ ಹೆಣ್ಣುಮಗಳು ಹುಟ್ಟುತ್ತಾಳೆ. ಆದರೆ ಹುಟ್ಟಿದ ಮಗಳು ಮುಂದೆ ಬಂಜೆಯಾಗುವಳೆಂದು ಹೇಳುತ್ತಾರೆ. ಎಂಟನೆ ರಾತ್ರಿಯಲ್ಲಿ ಸಂಗಮಿಸಿದರೆ ಗಂಡು ಮಗು ಜನಿಸುವುದು. ಆದರೆ ಈ ಮಗುವಿಗೂ ಮುಂದೆ ಸಂತಾನವಿರುವುದಿಲ್ಲ ಎನ್ನುತ್ತಾರೆ ಜ್ಯೋತಿಶಾಸ್ತ್ರ. ಒಂಭತ್ತನೆಯ ರಾತ್ರಿ ಪ್ರಶಸ್ತವಾಗಿದೆ. ಈ ರಾತ್ರಿಯಲ್ಲಿ ಸಂಗಮವಾದರೆ ಸುಂದರಿಯಾದ ಮಗಳು ಜನಿಸುತ್ತಾಳೆ. ಹತ್ತನೇ ರಾತ್ರಿ ಇನ್ನೂ ಪ್ರಶಸ್ತ. ಈ ರಾತ್ರಿಯಲ್ಲಿ ಗರ್ಭಧಾನವಾದರೆ ಒಳ್ಳೆಯ ಪ್ರಭುತ್ವಶಕ್ತಿಯುಳ್ಳ ಮಗನು ಹುಟ್ಟುವನು. ಹನ್ನೊಂದನೇ ರಾತ್ರಿಯಲ್ಲಾದರೆ ಸುಂದರಿಯಲ್ಲದ ಪುತ್ರಿಯ ಜನನ. ಹನ್ನೆರಡನೇ ರಾತ್ರಿಯಲ್ಲಾದರೆ ಪುತ್ರ ಪುತ್ರ ಜನನ. ಮುಂದೆ ಈತ ಶ್ರೀಮಂತನಾಗುತ್ತಾನೆ. ಹದಿಮೂರನೇ ರಾತ್ರಿ ಪಾಪವನ್ನು ಆಚರಿಸುವ ಮಗಳು ಹುಟ್ಟುತ್ತಾಳೆ. ಹದಿನಾಲ್ಕನೇ ರಾತ್ರಿ ಧರ್ಮಿಷ್ಟನಾದ ಮಗನ ಜನನವಾಗುವುದು. ಹದಿನೈದನೇ ರಾತ್ರಿ ಸಂಗಮವಾಗಿ ಗರ್ಭಿಣಿಯಾದರೆ ಧರ್ಮಿಷ್ಟಳಾದರೆ ಮಗಳ ಜನ್ಮವಾಗುವುದು. ಹದಿನಾರನೇ ರಾತ್ರಿ ಸಂಗಮವಾಗಲಾಗಿ ಸರ್ವವನ್ನೂ ತಿಳಿದಿರುವ ಮಹಾಜ್ಞಾನಿಯಾದ ಸರ್ವಸಂಪನ್ನಪುತ್ರನ ಜನನವಾಗುವುದು. ಅನಂತರದ ರಾತ್ರಿಗಳು ಗರ್ಭಾಧಾನಕ್ಕೆ ಪ್ರಶಸ್ತಕಾಲವಲ್ಲ. ಪುತ್ರ, ಪುತ್ರೀ ಬಯಕೆಉಳ್ಳವರು ಈ ರೀತಿ ಕ್ರಮವನ್ನು ಅನುಸರಿಸಬೇಕು. ಹಾಗಿದ್ದರೂ ಸಂತಾನಕ್ಕೆ ದೈವಾನುಗ್ರಹವೂ ಬೇಕು. ಹಾಗಾಗಿ ಸಂತಾನ ಯೋಗ - ದೈವಾನುಗ್ರಹ ಇವೆರಡೂ ಇದ್ದಾಗ ಈ ರೀತಿಯಾದ ಕ್ರಮವನ್ನು ಅನುಸರಿಸುವುದರಿಂದ ತಮಗೆ ಇಚ್ಚೆಯುಳ್ಳ ಸಂತಾನವನ್ನು ಪಡೆಯಬಹುದು. ಸಂತಾನ ಯೋಗ ಜನನ ಲಗ್ನದಿಂದ ದ್ವಾದಶ ಬಾವಗಳಲ್ಲಿ ಪಂಚಮ ಭಾವವು ವಿಶೇಷವಾಗಿ ಬುದ್ದಿವಂತಿಕೆ, ವಿದ್ಯೆ ಹಾಗೂ ಸಂತಾನಗಳ ಕುರಿತು ವಿಚಾರಮಾಡುವ ಭಾವವಾಗಿದೆ. ಲಗ್ನಾಧಿಪತಿ ಶುಭನಾಗಿ ಪಂಚಮಸ್ಥಾನದಲ್ಲಿದ್ದರೆ, ಪಂಚಮದ ಅಧಿಪತಿಯೂ ಪಂಚಮ ಅಥವಾ ಕೇಂದ್ರ ತ್ರಿಕೋಣದಲ್ಲಿದ್ದರೆ ಜಾತಕನಿಗೆ ಪುತ್ರರ ಪೂರ್ಣಸುಖ ಸಿಗುತ್ತದೆ. ಜಾತಕದಲ್ಲಿ ಬಲಯುತರಾದ ಗುರು, ಶುಕ್ರ, ಬುಧ, ಇವರು ಪಂಚಮಭಾವವನ್ನು ನೋಡಿದರೆ ಹಾಗೆಯೇ ಪಂಚಮಾಧಿಪತಿಯೂ ಬಲಿಷ್ಟನಾಗಿದ್ದರೆ ಬಹುಪುತ್ರಸಂತಾನಯೋಗವೆಂದು ಹೇಳುತ್ತಾರೆ. ಪಂಚಮೇಶನಾದ ಗ್ರಹನು ಉಚ್ಚನಾಗಿದ್ದರೆ ಹಾಗೂ ಲಗ್ನದಿಂದ ಅದು ದ್ವಿತೀಯ, ತೃತೀಯ, ಪಂಚಮವಾಗಿದ್ದರೆ ಅದಕ್ಕೆ ಗುರುಯುಲೆ ಅಥವಾ ದೃಷ್ಟಿ ಇದ್ದರೆ ಒಳ್ಳೆಯ ಪುತ್ರನ ಯೋಗವು. ಐದನೆಯ ಭಾವವು ಮಿಥುನ, ಕನ್ಯೆಯಾದರೆ ಅಥವಾ, ಮಕರ ಕುಂಭವಾದರೆ, ಶನಿ ಮಾಂದಿಯುಕ್ತನಾಗಿದ್ದರೆ ಅವರಿಗೆ ದತ್ತು ಸ್ವೀಕಾರ ಮಾಡಬೇಕಾಗುವುದು. ಸಂತಾನ ಯಾವಾಗ? ಪಂಚಮದಲ್ಲಿ ಗುರುವಿದ್ದು ಪಂಚಮದ ಅಧಿಪತಿ ಶುಕ್ರ ಸಹಿತನಾಗಿದ್ದರೆ ಮೂವತ್ತೆರಡು ಅಥವಾ ಮೂವತ್ತ್ಮೂರನೆಯ ವರ್ಷದಲ್ಲಿ ಸಂತಾನ ಪ್ರಾಪ್ತಿಯಾಗುವುದು. ಪಂಚಮಾಧಿಪತಿ ಕೇಂದ್ರದಲ್ಲಿ ಗುರುವಿನೊಡನಿದ್ದರೆ ಮೂವತ್ತಾರು ಅಥವಾ ಮೂವತ್ತನೆಯ ವರ್ಷದಲ್ಲಿ ಪುತ್ರನ ಜನನವಾಗುವುದು. ಅಥವಾ ಗುರುವಿನಿಂದ ಐದನೇ ಭಾವದಲ್ಲಿ ಶನಿ ಅಥವಾ ಪಾಪಗ್ರಹಗಳಿದ್ದರೆ ಒಬ್ಬನೇ ಮಗನು ಹುಟ್ಟುತ್ತಾನೆ. ಕರ್ಕರಾಶಿ ಪಂಚಮ ಭಾವವಾಗಿ ಅಲ್ಲಿ ಗುರುವಿದ್ದರೆ ಬಹುಪುತ್ರಿಯರ ಸಂತಾನವಾಗುತ್ತದೆ. ಸಂತಾನಕಾರಕ ಗುರು, ಹಾಗಾಗಿ ಸಂತಾನವಿಷಯದಲ್ಲಿ ಗುರುವಿನ ಸ್ಥಾನ ಅತಿ ಪ್ರಧಾನಾದದ್ದಾಗಿದೆ. ಗುರುವು ಬಲಯುತನಾಗಿ ಪಂಚಮದಲ್ಲೊ ಅಥವಾ ಸಪ್ತಮ - ಪ್ರಥಮ ಭಾವಗಳಲ್ಲಿಯೋ ಇದ್ದು ಪಾಪದೃಷ್ಟಿ ಇಲ್ಲದಿದ್ದರೆ ಒಳ್ಳೆಯ ಸಂತಾನವಾಗುವುದು. ಹಾಗೆಯೇ ಪಂಚಮಾಧಿಪತಿ ಬಲಿಷ್ಠನಾಗಿ ಶುಭಗ್ರಹಗಳ ಮಧ್ಯದಲ್ಲಿದ್ದರೆ ಅಥವಾ ಶುಭಗ್ರಹರ ದೃಷ್ಟಿ ಅವನಿಗಿದ್ದರೆ ಒಳ್ಳೆಯ ಸಂತಾನವಾಗುವುದು. ಕೆಲವರು ಪುತ್ರಕಾರಕನಾದ ಗುರುವು ಪಂಚಮದಲ್ಲಿದ್ದರೆ ಕಾರಕತ್ವ ಫಲಿಸುವುದಿಲ್ಲ ಎನ್ನುತ್ತಾರೆ. ಮಕ್ಕಳಿಲ್ಲದಿರುವುದಕ್ಕೆ ಅವರವರ ಕರ್ಮದೋಷಗಳೇ ಕಾರಣವಾಗುತ್ತವೆ. ಅದನ್ನು ಅನುಸರಿಸಿಯೇ ಪಿತೃಶಾಪ, ಮಾತೃಶಾಪ, ಸರ್ಪದೋಷ, ದೇವಶಾಪ ಮುಂತಾದ ಕಾರಣಗಳನ್ನು ಹೇಳುತ್ತಾರೆ. ಆದರೆ ಇವಕ್ಕೆಲ್ಲ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಮಕ್ಕಳನ್ನು ಪಡೆಯಬಹುದು. ಹಾಗೆಯೇ ಅದಕ್ಕನುಗುಣವಾಗಿ ತಜ್ಞ ವೈದ್ಯರ ಚಿಕಿತ್ಯೆಯೂ ಅಗತ್ಯ. ಕೇವಲ ಬಾವಿ ತೋಡಿದ ಮಾತ್ರಕ್ಕೆ ನೀರು ಸಿಗುವುದಿಲ್ಲವಲ್ಲ. ಭಾವಿಯಿಂದ ನೀರನ್ನು ಸ್ವಪ್ರಯತ್ನದಿಂದಲೇ ಸೇದಬೇಕಷ್ಟೆ! ಮಕ್ಕಳ ಫಲವಿಲ್ಲದ್ದಕ್ಕೆ ಹಲವು ಕಾರಣಗಳು ಡಾ. ಎಸ್.ಎನ್. ಶೈಲೇಶ್ ಬಾಣಾವರ ಸ್ನೇಹಿತರು ಅಥವಾ ಸಂಬಂಧಿಕರು ಜೊತೆ ಸೇರಿದಾಗ ಲೋಕರೂಢಿಯಂತೆ ನಿಮಗೆ ಮಕ್ಕಳೆಷ್ಟು? ಏನು ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆ ಹಾಕುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಉತ್ತರ ಇನ್ನೂ ಆಗಿಲ್ಲ ಎನ್ನುವುದಾಗಿರುತ್ತದೆ. ಕೆಲವಕು ಕಣ್ಣೀರಿಂದಲೇ ಉತ್ತರಿಸುತ್ತಾರೆ. 'ನೋಡಿ ನಮಗೆ ಮದುವೆಯಾಗಿ 8 ವರ್ಷವಾಯಿತು. ಇನ್ನೂ ಕೂಡಾ ಮಕ್ಕಳಾಗಿಲ್ಲ ಎಂದು ಹೇಳಿದರೆ, ಕೆಲವರು ದೇವರ ಮೊರೆ ಹೋದೆವು, ಹಲವಾರು ವೈದ್ಯರುಗಳನ್ನು ಭೇಟಿಯಾಗಿ ಅವರು ಹೇಳಿದ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆವು. ಆದರೂ ಮಕ್ಕಳಾಗಲಿಲ್ಲ . ಕೆಲವರು ಜ್ಯೋತಿಷಿಗಳ ಬಳಿ ಕುಂಡಲಿಗಳನ್ನು ಪರಿಶೀಲಿಸಿ, ಅವರು ಹೇಳಿದ ಪೂಜೆ ಪುನಸ್ಕಾರಗಳನ್ನೆಲ್ಲಾ ಮಾಡಿದರೂ ಮಕ್ಕಳಾಗಲಿಲ್ಲ ಎನ್ನುವುದ ಹತ್ತು ಹಲವಾರು ಸಮಸ್ಯೆಗಳನ್ನು ತಿಳಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮದುವೆ ಮೊದಲು ಸಾಲಾವಳಿ ಕೇಳುವುದು ಕಡಿಮೆಯಾಗಿದೆ. ಹಿಂದಿನ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಗಳ ಅಥವಾ ಮಗನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸುತ್ತಿದ್ದರು. ಜಾತಕ ಇಲ್ಲದವರು ಹೆಸರು ಬಲದ ಮೇಲೆ ಸಾಲಾವಳಿ ಬರುವುದು ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಇನ್ನು ಕೆಲವರು ದೇವರ ಅಪ್ಪಣೆ ಕೇಳಿ ವಿವಾಹ ಕಾರ್ಯ ನೆರವೇರಿಸುತ್ತಿದ್ದರು. ಕೆಲವರು ಈ ಪದ್ಧತಿಯನ್ನು ಈಗಲೂ ಮುಂದುವರಿಸಿದ್ದಾರೆ. ಆದರೆ, ಹೆಚ್ಚಿನವರು ಅದರಿಂದ ದೂರ ಹೋಗಿದ್ದಾರೆ. ದೋಷಗಳ ಪರಿಹಾರ ಜಾತಕದಲ್ಲಿ ಕುಜ ದೋಷ ಹಾಗೂ ಬೇರೆ ಇನ್ನೇನಾದರೂ ತೊಂದರೆ ಇದ್ದರೆ ಅದಕ್ಕೆ ಪರಿಹಾರ ಸೂಜಿಗೆ ಸಾಲಾವಳಿ ವಿಚಾರದಲ್ಲಿ 18 ಗುಣ ಮೇಲ್ಪಟ್ಟು ಬಂದಾಗ ವಿವಾಹ ನಡೆಸಬಹುದೆಂದು ಎಲ್ಲಾ ತರಹದ ವಿಚಾರ ವಿನಿಮಯ ಮಾಡಿದರೂ ಕೂಡ ಒಂದೊಂದು ಸಲ ಮಕ್ಕಳ ಫಲ ಆಗುವುದಿಲ್ಲ. ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ. ಮೊದಲನೆಯದು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲಗಳು. ಅದರ ಜೊತೆ ಪ್ರೇತಶಾಪ, ಗುರುಶಾಪ, ಪಿತೃಶಾಪ, ಸರ್ಪಶಾಪ, ಮಾತೃಶಾಪ ಹೀಗೆ ಮುಂತಾದ ಶಾಪಗಳನ್ನು ಮಾಡಿದ ತಪ್ಪಿಗೆ ಹಾಗೂ ಈ ಯಾವುದಾದರೂ ಶಾಪಗಳ ಪಾಪದಿಂದ ಮಕ್ಕಳ ಫಲಗಳಾಗುವುದಿಲ್ಲ. ಈ ವಿಚಾರವನ್ನು ಕುಂಡಲಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಹೀಗೆ ಪೂರ್ವಜನ್ಮದ ಪಾಪದ ಫಲದಿಂದ ಮಕ್ಕಳ ಭಾಗ್ಯವಿಲ್ಲವೆಂದು ಅನುಭವಿ ಜ್ಯೋತಿಷಿಗಳಿಂದ ತಿಳಿದುಕೊಂಡ ನಂತರ ಸಂಬಂಧ ಪಟ್ಟ ಶಾಪದ ಫಲಗಳನ್ನು ಪೂಜೆ, ಹೋಮ ಮುಂತಾದವುಗಳನ್ನು ಕ್ರಮಬದ್ಧವಾಗಿ ಆಚರಣೆ ಮಾಡಿ ಮಕ್ಕಳ ಭಾಗ್ಯ ಪಡೆಯಬಹುದು. ಇನ್ನು ಎರಡನೆಯ ಕಾರಣವೇನೆಂದರೆ ಕೆಲವು ವೈಜ್ಞಾನಿಕ ರೀತಿಯ ಮಕ್ಕಳ ಭಾಗ್ಯ ದೊರಕದೇ ಇರಬಹುದು ಅದು ಜ್ಯೋತಿಷ್ಯ ಶಾಸ್ತ್ರದ ಮೂಲಕ ಇದೇನು ವೈಜ್ಞಾನಿಕಕ್ಕೂ ಜ್ಯೋತಿಷ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಅಲ್ಲದೆ ಅದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರವೂ ಕೂಡ ವಿಜ್ಞಾನವಾಗಿದೆ. ಇನ್ನು ವೈಜ್ಞಾನಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಿದಾಗ ಪಕ್ಷ ಪಾತದ ಬಂಜೆತನ ಹಾಗೂ ನಪುಂಸಕತ್ವದಿಂದ ಮಕ್ಕಳ ಫಲ ದೊರಕದೆ ಇರಬಹುದು. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಹೆಣ್ಣಿನಲ್ಲಿ ತೊಂದರೆ ಇರಬಹುದು ಅಥವಾ ಗಂಡಿನಲ್ಲಿ ತೊಂದರೆ ಇರಬಹುದು ಅಂತಹ ಸಂದರ್ಭಗಳಲ್ಲಿ ಕೆಲವು ಔಷಧಿಗಳಿಂದ ಮಕ್ಕಳಾಗುವ ಸಂಭವ ಇರುತ್ತದೆ. ಒಂದು ವೇಳೆ ಔಷಧಿಯಿಂದಲೂ ಸಂತಾಲ ಫಲ ದೊರಕದೆ ಇದ್ದಾಗ ದತ್ತು ಪಡೆದುಕೊಳ್ಳಬೇಕಾದ ಪ್ರಸಂಗವು ಬರಬಹುದು. ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ. 1. ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ. 2. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ. 3. ಐದನೆಯ ಭಾವಾಧಿಪತಿ ಸ್ತ್ರೀ ರಾಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ. 4. ಐದನೆಯ ಭಾವಾಧಿಪತಿ ದ್ವಿಸ್ವಭಾವ ರಾಶಿ ಹಾಗೂ ದ್ವಿಸ್ವಭಾವ ನವಾಂಶದಲ್ಲಿದ್ದರೆ ಅಂತವರಿಗೆ ಅವಳಿ ಜವಳಿ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ. ಇನ್ನೂ ಅನೇಕ ಗ್ರಂಥಗಳಾದ ಸತ್ಯ ಜಾತಕ, ಪಲಾಧಿಪತಿ, ಸರ್ವಧ ಚಿಂತಾಮಣಿ ಬೃಹತ್ ಪರಾಶರ ಹೋರಾ ಶಾಸ್ತ್ರ, ಜಾತಕ ಪಾರಿಜಾತಕ, ಮಂತ್ರೇಶ್ವರ ಕೃತಿ, ಸಂಕೇತ ನಿಧಿ, ಹೀಗೆ ಹಲವು ಗ್ರಂಥಗಳಲ್ಲಿ ಮಕ್ಕಳು ನಿಧಾನವಾಗಿ ಆಗುವುದಕ್ಕೆ ಹಾಗೂ ಮಕ್ಕಳ ಫಲ ಇಲ್ಲದಿರುವುದಕ್ಕೆ ಕಾರಣಗಳೂ ಹಾಗೂ ಹೇಗೆ ಗ್ರಹಗತಿಗಳಿಂದ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸಿದೆ. 1. ಐದನೆಯ ಭಾವದಲ್ಲಿ ಅಂಗಾರಕನ ಜೊತೆ (ಕುಜ) ಪಾಪಗ್ರಹಗಳಿದ್ದರೆ ಮಕ್ಕಳು ಮರಣ ಹೊಂದುತ್ತವೆ ಹಾಗೂ ಗರ್ಭನಿಲ್ಲುವುದಿಲ್ಲ. 2. ಐದನೆಯ ಭಾವವು ಶನೇಶ್ವರ (ಶನಿ)ನಿಂದ ದೃಷ್ಟಿ ಹೊಂದಿದ್ದರೆ ಮಕ್ಕಳಾಗುವುದಿಲ್ಲ. 3. ಐದನೆಯ ಭಾವದಲ್ಲಿ ರಾಹು ಇದ್ದರೆ ಹಾಗೂ ಅಂಗಾರಕನ (ಕುಜ) ದೃಷ್ಟಿ ಇದ್ದರೆ ಸಂತಾನಫಲವಿಲ್ಲ. 4. ಐದನೆಯ ಭಾವ ಹಾಗೂ ಅಧಿಪತಿ ಗ್ರಹದ ತೊಂದರೆಗೆ ಒಳಗಾಗಿದ್ದಾಗ ಸಂತಾನಫಲವಿಲ್ಲ. 5. ಐದನೆಯ ಭಾವದಲ್ಲಿ ಪಾಪ ಗ್ರಹಗಳು ಹಾಗೂ ಭಾವಾಧಿಪತಿ ಪಾಪಗ್ರಹಗಳೊಡನೆ ಇದ್ದರೆ ಸಂತಾನಕಾರಕ ಗುರು ಐದನೆಯ ಭಾವದಲ್ಲಿದ್ದಾಗ ಪುತ್ರಶೋಕ ನಿರಂತರಂ. 6. ಅಂಗಾರಕ (ಕುಜ) ಹಾಗೂ ಶನೇಶ್ವರ (ಶನಿ) ಐದನೆಯ ಬಾವದಲ್ಲಿದ್ದರೆ ಹಾಗೂ ಐದನೆಯ ಭಾವದಿಂದ 6, 8, 12ರಲ್ಲಿ ಪಾಪಗ್ರಹಗಳಿದ್ದರೆ ಎದನೇಯ ಭಾವಾಧಿಪತಿ ಪಾಪಗ್ರಹಗಳೊಡನೆ ಅಥವಾ ಶತ್ರುಗಳೊಂದಿಗೆ ಇದ್ದರೆ ಸಂತಾನಫಲವಿರುವುದಿಲ್ಲ. 7. ಪಂಚಮಾಧಿಪತಿ ಹಾಗೂ ಸಪ್ತಮಾಧಿಪತಿ ಯುತಿಯಲ್ಲಿದ್ದರೆ ಅಥವಾ ರಾಶಿ ಪರಿವರ್ತನೆ ಹೊಂದಿದ್ದರೆ ಮಕ್ಕಳ ಫಲವಿಲ್ಲ. 8. ಐದನೆಯ ಭಾವ ಮತ್ತು ಲಗ್ನ ಅಗ್ನಿರಾಶಿಯಾಗಿದ್ದು ಐದನೆಯ ಬಾವಾಧಿಪತಿ 6, 8, 12ರಲ್ಲಿದ್ದರೆ ಸಂತಾನ ಫಲವಿಲ್ಲ. 9. ಸಂತಾನ ಭಾಗ್ಯ ಕೊಡುವ ಭಾವಾಧಿಪತಿಗಳು ಶತ್ರುಸ್ಥಾನ, ನೀಚಸ್ಥಾನ, ದ್ವಿಸ್ಥಾನದಲ್ಲಿ ಬಲಹೀನರಾಗಿದ್ದರೆ ಸಂತಾನಫಲವಿಲ್ಲ. ಸರ್ಪಶಾಪ ಐದನೆಯ ಭಾವದಲ್ಲಿ ಕುಜನ ರಾಶಿಯಾಗಿದ್ದು ಅದರಲ್ಲಿ ರಾಹು ಸ್ಥಿತನಿದ್ದರೆ ಹಾಗೂ ಅಂಗಾರಕನ ದೃಷ್ಠಿಗೆ ಒಳಗಾಗಿದ್ದರೆ ಮಕ್ಕಳಾಗುವುದಿಲ್ಲ. ಪಿತೃಶಾಪ ಐದನೇ ಭಾವವು ನೀಚ ಸೂರ್ಯನಾಗಿದ್ದು (ರವಿ) ಹಾಗೂ ಸೂರನ್ಯನು (ರವಿ) ಪಾಪಕೃರ್ತ ಯೋಗದಲ್ಲಿದ್ದರೆ ಹಾಗೂ ಆ ಸೂರ್ಯನು (ರವಿ) ಶನಿಯ ನವಾಂಶದಲ್ಲಿದ್ದರೆ, ರಾಹು ಶನಿ ಯುತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ. ಮಾತೃಶಾಪ ಐದನೇ ಭಾವವು ನೀಚ ಚಂದ್ರನಾಗಿದ್ದು ಹಾಗೂ ಚಂದ್ರನು ಪಾಪ ಕರ್ತರಿಯೋಗದಲ್ಲಿದ್ದು ಶನಿಯ ನವಾಂಶದಲ್ಲಿ ಆ ಚಂದ್ರನಿದ್ದರೆ ಹಾಗೂ ಶನಿ ಅಥವಾ ರಾಹು ಯತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ. ಭ್ರಾತೃಶಾಪ ಮೂರನೆಯ ಭಾವದಲ್ಲಿ ಲಗ್ನಾಧಿಪತಿಯಿದ್ದು ಅಂಗಾರಕ ರಾಹು ಎದನೆಯ ಭಾವದಲ್ಲಿದ್ದರೆ ಮೂರನೆಯ ಭಾವದಲ್ಲಿ ಎಂಟರ ಭಾವಾಧಿಪತಿಯಿದ್ದು ಹಾಗೂ ಐದನೆಯ ಭಾವದಲ್ಲಿ ರಾಹು ಅಂಗಾರಕನೊಡನೆ ಇದ್ದರೆ ಮಕ್ಕಳಾಗುವುದಿಲ್ಲ. ಪ್ರೇತಶಾಪ ಲಗ್ನದಿಂದ ಐದನೇ ಶನಿಗೂ ಹಾಗೂ ಸ್ಥಾನಾಧಿಪತಿಗೂ ಕೂಡಾ ಮಾಂದ್ಯ ದೃಷ್ಠಿಯಿದ್ದು ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಮಾಂದ್ಯರು ಕೂಡಿದ್ದರೂ ಮಕ್ಕಳಾಗುವುದಿಲ್ಲ. ಬ್ರಹ್ಮಶಾಪ ಗುರು, ಶನಿ, ಅಂಗಾರಕ ನವಾಂಶದಲ್ಲಿದ್ದರೆ ಲಗ್ನದಿಂದ ಐದನೇ ಸ್ಥಾನಾಧಿಪನು ಅಂಗಾರಕ, ಗುರು, ಶನಿ, ರಾಹುವಿನಿಂದ ಕೂಡಿ ಲಗ್ನದಿಂದ 6, 8, 12ನೇ ಸ್ಥಾನದಲ್ಲಿ ದುರ್ಬಲರಾಗಿದ್ದರೆ ಮಕ್ಕಳಾಗುವುದಿಲ್ಲ. ಗುರುಶಾಪ ಶನಿ ಅಥವಾ ರಾಹು ಯತಿಯಲ್ಲಿದ್ದರೆ ನವಾಂಶದಲ್ಲಿ ಗುರು, ಶನಿಯಿದ್ದರೆ ಲಗ್ನದಿಂದ ಐದನೇ ಭಾವವು ನೀಚ ಗುರುವುನದ್ದು ಆಗಿದ್ದ ಗುರು ಪಾಪಕರ್ತರಿ ಯೋಗದಲ್ಲಿದ್ದರೆ ಮಕ್ಕಳಾಗುವುದಿಲ್ಲ. ಆದ್ದರಿಂದ ಯಾರೇ ಆಗಲಿ ಮಕ್ಕಳ ಫಲವಿಲ್ಲದಿದ್ದಾಗ ಅನುಭವಿ ಜ್ಯೋತಿಷ್ಯರಿಂದ ಜಾತಕವನ್ನು ಪರಿಶೀಲಿಸಿ ಸಂಬಂಧ ಪಟ್ಟ ತೊಂದರೆ ಹಾಗೂ ಶಾಪದ ಫಲಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದ ಪೂಜೆ, ಹೋಮ, ಜಪತಪಗಳಿಂದ ಮಕ್ಕಳ ಫಲ ಪಡೆದು ಸುಖ ಸಂತೋಷದಿಂದ ಬಾಳಬಹುದು.

ಪಂಚ ಮಹಾಪುರುಷ ಯೋಗ

ಪಂಚ ಮಹಾಪುರುಷ ಯೋಗ - ವಿದ್ವಾನ್ ಸುಬ್ರಹ್ಮಣ್ಯ ಶರ್ಮಾ ತನಗೆ ಸುಖ ಮಾತ್ರ ಬರಬೇಕು, ದುಃಖ ಎಂದಿಗೂ ಬರಬಾರದು ಎಂಬುದಾಗಿ ಪ್ರತಿಯೊಬ್ಬರೂ ಯೋಚಿಸುತ್ತಾರೆ. ಆದರೆ ಕರ್ಮಫಲಗಳೇ ಬೇರೆ. ಈ ಜನ್ಮದಲ್ಲಿ ನವಗ್ರಹಗಳ ಮೂಲಕ ಜನ್ಮಾಂತರದ ಕರ್ಮಫಲಗಳಿಂದ ಶುಭಾಶುಭಗಳು ಉಂಟಾಗುತ್ತವೆ. ಅಂತಹ ಗ್ರಹಗಳು ಕೆಲವೊಂದು ಮಹಾಯೋಗಗಳನ್ನು ಉಂಟುಮಾಡುತ್ತವೆ. ಸಾಮಾನ್ಯರ ಪ್ರಕಾರ ಯೋಗವೆಂದರೆ ಕೇವಲ ಒಳ್ಳೆಯದು ಮಾತ್ರ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಳ್ಳೆಯದರ ಜತೆಗೆ ಕೆಟ್ಟ ಯೋಗಗಳೂ ಇರುತ್ತವೆ. ಶುಭಯೋಗದಲ್ಲಿ ಹುಟ್ಟಿದವರು ವಿದ್ಯೆ, ಕೀರ್ತಿ, ಸುಖ, ದೀರ್ಘಾಯುಷ್ಯವೇ ಮೊದಲಾದ ಉತ್ತಮ ಫಲಗಳನ್ನು ಪಡೆಯುತ್ತಾರೆ. ಆದರೆ ಅಶುಭಯೋಗದಲ್ಲಿ ಜನಿಸಿದವರು ದುಷ್ಕರ್ಮಿಗಳಾಗಿ, ದುಃಖಿತರಾಗಿ, ಅನಾರೋಗ್ಯಾದಿಗಳಿಂದ ಪೀಡಿತರಾಗಿ ಕಷ್ಟಪಡುತ್ತಾರೆ. ಇಲ್ಲಿ ಐದು ಶುಭಯೋಗಗಳ ಕುರಿತು ನೋಡೋಣ. ರುಚಕ ಭದ್ರಕ ಹಂಸಕ ಮಾಲವಾಃ ಸ ಶಶಕಾ ಇತಿ ಪಂಚ ಚ ಕೀರ್ತಿತಾಃ ಸ್ವಭವನೋಚ್ಚಗತೇಷು ಚತುಷ್ಟಯೇ ಕ್ಷಿತಿಸುತಾದಿಷು ತಾನ್ ಕ್ರಮಶೋ ವದೇತ್ ಎಂದು ಈ ಯೋಗಗಳ ಬಗ್ಗೆ ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ರುಚಕ, ಭದ್ರಕ, ಹಂಸಕ, ಮಾಲವ, ಶಶ ಎನ್ನುವ ಈ ಪಂಚ ಮಹಾಪುರುಷ ಯೋಗಗಳು ಕ್ರಮವಾಗಿ ಮಂಗಳ, ಬುಧ, ಗುರು, ಶುಕ್ರ, ಶನಿ ಗ್ರಹಗಳಿಂದ ಉಂಟಾಗುತ್ತವೆ. ೧. ರುಚಕ ಯೋಗ ಮಂಗಳ ಗ್ರಹನು ತನ್ನ ಕ್ಷೇತ್ರವಾದ ಮೇಷ ಮತ್ತು ವೃಶ್ಚಿಕ ರಾಶಿಯಲ್ಲಿ ಅಥವಾ ಉಚ್ಚ ಕ್ಷೇತ್ರವಾದ ಮಕರ ರಾಶಿಯಲ್ಲಿ ಇರಬೇಕು. ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿಯಲ್ಲಿ ಈ ಗ್ರಹನು ಇರಬೇಕು. ಹೀಗಿದ್ದರೆ ರುಚಕ ಯೋಗ ಉಂಟಾಗುತ್ತದೆ. ಈ ಯೋಗ ಉಳ್ಳವರು ವಿಶೇಷವಾಗಿ ಸಾಹಸ ಪ್ರವೃತ್ತಿ ಹೊಂದಿದವರಾಗಿರುತ್ತಾರೆ. ೨. ಭದ್ರಕ ಯೋಗ ಬುಧ ಗ್ರಹನು ತನ್ನ ಉಚ್ಚ ಮತ್ತು ಸ್ವಕ್ಷೇತ್ರವಾದ ಕನ್ಯಾ ಮತ್ತು ಮಿಥುನ ರಾಶಿಯಲ್ಲಿ ಇರಬೇಕು. ಬುಧನಿರುವ ರಾಶಿಯು ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿ ಆಗಿರುವಾಗ ಜನಿಸಿದವರು ಭದ್ರ ಎಂಬ ಯೋಗವುಳ್ಳವರಾಗಿರುತ್ತಾರೆ. ಇವರು ಎಲ್ಲ ವಿಷಯಗಳಲ್ಲಿಯೂ ಬುದ್ಧಿವಂತರಾಗಿರುತ್ತಾರೆ. ೩. ಹಂಸ ಯೋಗ ಗುರು ಗ್ರಹನು ಸ್ವಕ್ಷೇತ್ರವಾದ ಧನು ಮತ್ತು ಮೀನ ರಾಶಿಯಲ್ಲಿ ಇರಬೇಕು ಅಥವಾ ಉಚ್ಚ ಕ್ಷೇತ್ರವಾದ ಕರ್ಕ ರಾಶಿಯಲ್ಲಿ ಇರಬೇಕು. ಈ ಗ್ರಹನಿರುವ ರಾಶಿಯು ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿಯಾಗಿದ್ದರೆ ಆ ವ್ಯಕ್ತಿಗಳಿಗೆ ಹಂಸ ಎಂಬ ಯೋಗವುಂಟಾಗುತ್ತದೆ. ಈ ಯೋಗ ಉಳ್ಳವರು ರಾಜ ಸಮಾನ ವ್ಯಕ್ತಿಯಾಗುತ್ತಾರೆ. ೪. ಮಾಲವ ಯೋಗ ಶುಕ್ರ ಗ್ರಹನು ತನ್ನ ಕ್ಷೇತ್ರವಾದ ವೃಷಭ ಮತ್ತು ತುಲಾ ರಾಶಿಯಲ್ಲಿರಬೇಕು ಅಥವಾ ಉಚ್ಚ ಕ್ಷೇತ್ರವಾದ ಮೀನ ರಾಶಿಯಲ್ಲಿರಬೇಕು. ಆ ಗ್ರಹನ ರಾಶಿಯು ಜನ್ಮಕುಂಡಲಿಯಲ್ಲಿ ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿ ಆಗಿರುವಾಗ ಹುಟ್ಟಿದವರಿಗೆ ಮಾಲವ ಯೋಗ ಉಂಟಾಗುತ್ತದೆ. ಈ ಯೋಗವಿರುವ ವ್ಯಕ್ತಿಗಳು ಹಣವಂತರು, ವಾಹನಗಳನ್ನು ಹೊಂದಿದವರು, ಸುಖವಂತರು ಆಗಿರುತ್ತಾರೆ. ೫. ಶಶ ಯೋಗ ಶನಿ ಗ್ರಹನು ಸ್ವಕ್ಷೇತ್ರವಾದ ಮಕರ ಮತ್ತು ಕುಂಭ ರಾಶಿಯಲ್ಲಿ ಇರಬೇಕು ಅಥವಾ ತನ್ನ ಉಚ್ಚ ಕ್ಷೇತ್ರವಾದ ತುಲಾ ರಾಶಿಯಲ್ಲಿ ಇರಬೇಕು. ಈ ಗ್ರಹನಿರುವ ರಾಶಿಯು ಲಗ್ನದಿಂದ ೧, ೪, ೭ ಅಥವಾ ೧೦ನೇ ರಾಶಿಯಾಗಿದ್ದರೆ ಅಂತಹ ಜಾತಕದವರು ಶಶ ಎಂಬ ಮಹಾಯೋಗ ಹೊಂದಿದವರಾಗಿರುತ್ತಾರೆ. ಅಂಥವರು ಉತ್ತಮ ಸೇವಕರುಳ್ಳವರು, ಬಲಿಷ್ಠರು ಮತ್ತು ಸುಖವಂತರಾಗಿರುತ್ತಾರೆ. ವ್ಯಕ್ತಿಗಳಿಗೆ ಯಾವ ಗ್ರಹಗಳಿಂದ ಯಾವ ಯೋಗವು ಉಂಟಾಗಿದೆಯೋ ಆ ಗ್ರಹಗಳ ದಶಾ ಅಥವಾ ಭುಕ್ತಿ ಕಾಲದಲ್ಲಿ ಹೆಚ್ಚಿನ ಸುಖ ಸಂತೋಷಗಳು ಲಭಿಸುತ್ತವೆ.

ಪಂಚಾಂಗ ಎಂದರೆ....

ಪಂಚಾಂಗ ಎಂದರೆ.... ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಮುಖ್ಯವಾಗಿ ಬೇಕಾದುದು ಪಂಚಾಂಗ. ಪಂಚ ಎಂದರೆ ಐದು. ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬ ಈ ಐದು ಅಂಶಗಳನ್ನು ಒಳಗೊಂಡಿದ್ದೇ ಪಂಚಾಂಗ. ಮಾಸ, ಪಕ್ಷ, ಋತುಗಳು ಬದಲಾಗುತ್ತವಾದರೂ ಪ್ರತಿದಿನ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ಬದಲಾಗುವ ಈ ಐದು ಅಂಗಗಳೇ ಪಂಚಾಂಗಗಳು. ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ. ಯುಗಾದಿ ಹಬ್ಬದ ಮೊದಲ ದಿನ ಪಂಚಾಂಗವನ್ನು ಓದಿ ಆ ವರ್ಷದ ಶುಭಾಶುಭ ಫಲಗಳನ್ನು ಹೇಳಲಾಗುತ್ತದೆ. ಈ ಪದ್ಧತಿಗೆ 'ಪಂಚಾಂಗ ಶ್ರವಣ' ಎಂಬ ಹೆಸರಿದೆ. ಈ ಪಂಚಾಂಗದಲ್ಲಿ ತಿಥಿ, ವಾರ ಇತ್ಯಾದಿಗಳ ಜತೆಗೆ ಸಂವತ್ಸರ, ಅಯನ, ಮಾಸಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ ಇತ್ಯಾದಿಗಳೆಲ್ಲದರ ವಿವರಗಳಿರುತ್ತವೆ. ಅಷ್ಟೇ ಅಲ್ಲದೆ ವಿವಾಹ, ಗೃಹಪ್ರವೇಶ, ನಾಮಕರಣ ಇತ್ಯಾದಿಗಳ ಮುಹೂರ್ತಗಳಿಗೆ ಬೇಕಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಈ ಪಂಚ ಅಂಗಗಳ ಮೊದಲಿನ ಅಕ್ಷರವನ್ನು ಮಾತ್ರ ಬರೆಯುವ ಮೂಲಕ ಸಂಕ್ಷಿಪ್ತವಾಗಿ ಸೂಚಿಸಲಾಗಿರುತ್ತದೆ. ಪಂಚಾಂಗವನ್ನು ತೆರೆಯುವ ಮುನ್ನ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಕೊಂಚ ತಿಳಿದಿರಬೇಕಾದುದು ಅವಶ್ಯ. ತಿಥಿ ಹುಣ್ಣಿಮೆಯ ದಿನ ಹದಿನಾರು ಕಲೆಗಳಿಂದ ಪೂರ್ಣನಾಗಿದ್ದ ಚಂದ್ರ ಕ್ರಮೇಣ ಕ್ಷೀಣಿಸತೊಡಗುತ್ತಾನೆ. ಕ್ರಮೇಣ ಒಂದೊಂದೇ ಕಲೆಗಳನ್ನು ಕಳೆದುಕೊಂಡು ಹದಿನೈದನೆಯ ದಿನ ಅದೃಶ್ಯನಾಗುತ್ತಾನೆ. ಅದೇ ಅಮಾವಾಸ್ಯೆ. ಹೀಗೆ ಹುಣ್ಣಮೆಯ ಮರುದಿನವಾದ ಪಾಡ್ಯದಿಂದ ಅಮಾವಾಸ್ಯೆಯ ತನಕದ ಹದಿನೈದು ದಿನಗಳು ಚಂದ್ರನ ಶುಕ್ಲಭಾಗವು ಕೃಷ್ಣವಾಗುತ್ತಾ ಬರುವುದರಿಂದ ಕೃಷ್ಣಪಕ್ಷ ಎಂದು ಕರೆಯುತ್ತಾರೆ. ಅಮಾವಾಸ್ಯೆಯ ನಂತರದ ಪಾಡ್ಯದಿಂದ ಪ್ರಾರಂಭಿಸಿ ಹುಣ್ಣಿಮೆಯ ತನಕದ ಹದಿನೈದು ದಿನಗಳು ಚಂದ್ರನ ಕೃಷ್ಣಭಾಗವು ಶುಕ್ಲವಾಗುತ್ತ ಬರುವುದರಿಂದ ಶುಕ್ಲಪಕ್ಷವೆಂದೂ ಕರೆಸಿಕೊಳ್ಳುತ್ತದೆ. ಹೀಗೆ ಒಟ್ಟು ತಿಥಿಗಳು ಹದಿನಾರು. ಶುಕ್ಲಪಕ್ಷದಲ್ಲಿ ಹದಿನೈದನೆಯ ತಿಥಿ ಹುಣ್ಣಮೆಯಾದರೆ, ಕೃಷ್ಣಪಕ್ಷದಲ್ಲಿ ಅದು ಅಮಾವಾಸ್ಯೆಯಾಗಿರುತ್ತದೆ. ಒಂದು ಪಕ್ಷದಲ್ಲಿ ತಿಥಿ ಹದಿನೈದು. ಒಂದು ಮಾಸದಲ್ಲಿ ತಿಥಿ ಮೂವತ್ತು. ಆದರೆ ಒಟ್ಟು ತಿಥಿಗಳು ಹದಿನಾರು. ಮಾಸದಲ್ಲಿ ಹದಿನಾಲ್ಕು ತಿಥಿಗಳು ಪುನರಾವರ್ತಿತವಾಗುತ್ತದೆ. ಪ್ರತಿಪತ್, ದ್ವಿತೀಯಾ, ತೃತೀಯಾ ಮತ್ತು ಚತುರ್ಥಿ ತಿಥಿಗಳಿಗೆ ಕ್ರಮವಾಗಿ ಪಾಡ್ಯ, ಬಿದಿಗೆ, ತದಿಗೆ, ಚೌತಿಗಳೆಂಬ ಹೆಸರುಗಳೂ ಚಾಲ್ತಿಯಲ್ಲಿದೆ. ಆದರೆ ಇವು ಸಂಸ್ಕೃತದ ಹೆಸರುಗಳಲ್ಲ ಎಂಬುದನ್ನು ಗಮನಿಸಬೇಕು. ವಾರ ವಾರಗಳು ಏಳು. ಸಾಮಾನ್ಯವಾಗಿ ಏಳು ದಿನಗಳ ಸಮೂಹಕ್ಕೆ ವಾರವೆನ್ನುತ್ತೇವೆ. ವಾರಕ್ಕೆ ಏಳು ದಿನಗಳು ಎನ್ನುತ್ತೇವೆ. ರಾಹು, ಕೇತುಗಳನ್ನು ಹೊರತುಪಡಿಸಿ ಉಳಿದ ಏಳು ಗ್ರಹಗಳ ಹೆಸರಿನಲ್ಲಿ ಈ ಏಳು ವಾರಗಳಿವೆ. ಒಂದು ಸೂರ್ಯೋದಯದಿಂದ ಮತ್ತೊಂದು ಸೂರ್ಯೋದಯಕ್ಕೆ ಈ ವಾರಗಳು ಬದಲಾಗುತ್ತವೆ. ನಕ್ಷತ್ರ ದಕ್ಷಪ್ರಜಾಪತಿಗೆ ಅರವತ್ತು ಹೆಣ್ಣುಮಕ್ಕಳು. ಅವರಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಲಾಯಿತು. ಈ ಚಂದ್ರನ ಹೆಂಡಂದಿರೇ ಇಪ್ಪತ್ತೇಳು ನಕ್ಷತ್ರಗಳು. ಆಶ್ಚರ್ಯವೆಂದರೆ ಈ ನಕ್ಷತ್ರಗಳನ್ನು ಹೇಳುವ ಎಲ್ಲ ಶಬ್ದಗಳು ಸ್ತ್ರೀಲಿಂಗಗಳಲ್ಲ. ಶ್ರವಣ, ಮೂಲ ಶಬ್ದಗಳು ನಪುಂಸಕ ಲಿಂಗವಾದರೆ ಪುಷ್ಯ, ಹಸ್ತ ಶಬ್ದಗಳು ಪುಲ್ಲಿಂಗ. ಚಂದ್ರ ಪ್ರತಿದಿನವೂ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಸಂಚರಿಸುತ್ತಾನೆ. ಯೋಗ ಪಂಚಾಂಗದಲ್ಲಿ ಯೋಗವೆಂಬ ಶಬ್ದವು ರೂಢನಾಮವಾಗಿ ವಿಷ್ಕಂಭಾದಿ ಇಪ್ಪತ್ತೇಳು ಯೋಗಗಳನ್ನು ಹೇಳುತ್ತದೆ. ನಕ್ಷತ್ರದಂತೆ ಯೋಗವೂ ಸಾಮಾನ್ಯವಾಗಿ ೬೦ ಘಳಿಗೆ ಇರುವುದರಿಂದ ಪ್ರತಿದಿನವೂ ಬದಲಾಗುತ್ತದೆ. ಕರಣ ಬವ, ಬಾಲವ ಮೊದಲಾದ ಕರಣಗಳು ಹದಿನೆಂಟು. ಇದರಲ್ಲಿ ಮೊದಲ ಏಳು ಕರಣಗಳನ್ನು ಸ್ಥಿರಕರಣಗಳು ಎನ್ನುತ್ತಾರೆ. ಕೊನೆಯ ನಾಲ್ಕು ಕರಣಗಳನ್ನು ಚರ ಕರಣಗಳೆಂದೂ ಜ್ಯೋತಿಷ್ಯ ಶಾಸ್ತ್ರವು ಪರಿಗಣಿಸಿದೆ. ಒಂದು ತಿಥಿಗೆ ಎರಡು ಕರಣಗಳು. ನವಗ್ರಹಗಳು ದೊಡ್ಡನೆಬೆಟ್ಟು ಕೋಟೇಶ್ವರ ಈ ಭೂಮಿಯಲ್ಲಿ ವಾಸಿಸುವ ನಮ್ಮ ಮೇಲೆ ಸುತ್ತಲಿರುವ ಆಕಾಶಕಾಯಗಳು ವಿಶಿಷ್ಟ ಪರಿಪೂರ್ಣ ಬೀರುತ್ತವೆ. ಅಂತಹ ನವಗ್ರಹಗಳ ಹೆಸರು ನಿಮಗೆಲ್ಲ ಗೊತ್ತೇ ಇದೆ. ಆದರೆ ಅವುಗಳ ಸಂಪೂರ್ಣ ಪರಿಚಯ ಎಲ್ಲರಿಗೂ ಇರಲಾರದು. ಅವುಗಳ ಕಿರು ಪರಿಚಯವಿದು. ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇವುಗಳೇ ಒಂಬತ್ತು ನವಗ್ರಹಗಳು. ಇವುಗಳಲ್ಲಿ ರಾಹು ಕೇತುಗಳಿಗೆ ಪ್ರಕಾಶವಿರುವುದಿಲ್ಲ. ಇವು ಕೇವಲ ಛಾಯಾಗ್ರಹಗಳು. ಬುಧ, ಗುರು, ಶುಕ್ರರು ಶುಭ ಗ್ರಹರು. ರವಿ, ಕುಜ, ಶನಿ, ರಾಹು, ಕೇತುಗಳು ಪಾಪ ಗ್ರಹರು. ಪೂರ್ಣಚಂದ್ರನಾದರೆ ಶುಭ, ಅದೇ ಚಂದ್ರ ಕ್ಷೀಣನಾದರೆ ಅಶುಭ ಫಲ ನೀಡುತ್ತಾನೆ. ಮೊದಲಿಗೆ ರವಿ. ಇವನ ದಿಕ್ಕು ಪೂರ್ವ. ಇವನಿಗೆ ಪ್ರಿಯವಾದ ಬಣ್ಣ ಕೆಂಪು. ಪ್ರಿಯವಾದ ರತ್ನ ಮಾಣಿಕ್ಯ. ಇವನ ದೇವತೆ ಶಿವ. ಪ್ರಿಯವಾದ ಧಾನ್ಯ ಗೋಧಿ. ಈತನ ದೆಶೆ ಆರು ವರ್ಷ. ರವಿಗೆ ಪ್ರಿಯವಾದ ಸಸ್ಯ ಎಕ್ಕ. ಎರಡನೆಯವನು ಚಂದ್ರ. ಇವನ ದಿಕ್ಕು ವಾಯವ್ಯ. ಪ್ರಿಯವಾದ ಬಣ್ಣ ಬಿಳಿ. ಇವನ ರತ್ನ ಮುತ್ತು. ಈತನ ದೇವತೆ ದುರ್ಗಾ ಮಾತೆ. ಈತನ ಪ್ರಿಯವಾದ ಧಾನ್ಯ ಅಕ್ಕಿ. ಇವನ ದೆಶೆ ಹತ್ತು ವರ್ಷ. ಚಂದ್ರನಿಗೆ ಪ್ರಿಯವಾದದ್ದು ಪಾಲಾಶ ವೃಕ್ಷ. ಮೂರನೆಯವನು ಕುಜ (ಮಂಗಳ). ದಿಕ್ಕು ದಕ್ಷಿಣ. ಪ್ರಿಯವಾದ ಧಾನ್ಯ ತೊಗರಿ. ಇವನ ದೇವತೆ ಸುಬ್ರಹ್ಮಣ್ಯ. ಪ್ರಿಯವಾದ ರತ್ನ ಹವಳ. ಪ್ರಿಯವಾದ ವಸ್ತ್ರ ಕೆಂಪು. ಇವನ ದೆಶೆ ಏಳು ವರ್ಷ. ಕುಜನಿಗೆ ಪ್ರಿಯವಾದದ್ದು ಖದಿರ. ಇನ್ನು ನಾಲ್ಕನೆಯವನು ಬುಧ. ಇವನ ದೇವತೆ ವಿಷ್ಣು. ದಿಕ್ಕು ಉತ್ತರ. ಧಾನ್ಯ ಹೆಸರುಕಾಳು. ಪ್ರಿಯವಾದ ರತ್ನ ಮರಕತ (ಪಚ್ಚೆ), ಇತನ ಪ್ರಿಯವಾದ ವಸ್ತ್ರ ಹಸಿರು. ಇವನ ದೆಶೆ ಹದಿನೇಳು ವರ್ಷವಾಗಿರುತ್ತದೆ. ಬುಧನಿಗೆ ಪ್ರಿಯವಾದದ್ದು ಉತ್ತರಣಿ. ಐದನೆಯವನೇ ಗುರು. ಈತನ ದೇವತೆ ಶಿವ. ದಿಕ್ಕು ಈಶಾನ್ಯ, ಪ್ರಿಯವಾದ ಧಾನ್ಯ ಕಡಲೆ. ಪ್ರಿಯವಾದ ರತ್ನ ಪುಷ್ಯರಾಗ. ವಸ್ತ್ರ ಹಳದಿ, ಇವನ ದೆಶೆ ಹದಿನಾರು ವರ್ಷ. ಗುರುವಿಗೆ ಪ್ರಿಯವಾದದ್ದು ಅಶ್ವತ್ಥ. ಆರನೆಯವನು ಶುಕ್ರ (ಭಾರ್ಗವ), ದಿಕ್ಕು ಆಗ್ನೇಯ. ಪ್ರಿಯ ದೇವತೆ ದುರ್ಗೆ, ಪ್ರಿಯವಾದ ಧಾನ್ಯ ಅವರೆ, ಪ್ರಿಯ ರತ್ನ ವಜ್ರ, ಬಣ್ಣ ಬಿಳಿ, ಇವನ ದೆಶೆ ಇಪ್ಪತ್ತು ವರ್ಷ. ಶುಕ್ರನಿಗೆ ಅತ್ತಿ ಮರ. ಏಳನೇಯವನು ಶನಿದೇವ, ಈತನ ದೇವತೆಗಳು ತ್ರಿಮೂರ್ತಿಗಳು, ಪ್ರಿಯ ದಿಕ್ಕು ಪಶ್ಚಿಮ, ಪ್ರಿಯ ಧಾನ್ಯ ಎಳ್ಳು, ಪ್ರಿಯ ರತ್ನ ನೀಲ, ಪ್ರಿಯ ವಸ್ತ್ರ ಕಪ್ಪು, ದೆಶೆ ೧೯ ವರ್ಷವಾಗಿದ್ದು, ಶಮಿ ಇವನಿಗೆ ಪ್ರಿಯವಾದ ವೃಕ್ಷ. ನವಗ್ರಹರಲ್ಲೇ ಪ್ರಬಲವಾದವನು ಶನಿ. ಎಂಟನೆಯ ಗ್ರಹ ರಾಹು, ಈತನ ದೇವತೆ ಸುಬ್ರಹ್ಮಣ್ಯ, ದಿಕ್ಕು ನೈರುತ್ಯ, ಧಾನ್ಯ ಉದ್ದು, ಪ್ರಿಯ ರತ್ನ ಗೋಮೇಧಿಕ, ವಸ್ತ್ರ ಬಣ್ಣ ಚಿತ್ರ ವಿಚಿತ್ರ, ದೆಶೆ ೧೮ ರಾಹುಗೆ ಗರಿಕೆ ಅತ್ಯಂತ ಪ್ರಿಯ. ಒಂಬತ್ತನೆಯವನೇ ಕೇತು, ಈತನ ದೇವತೆ ಗಣಪತಿ, ದಿಕ್ಕು ನೈರುತ್ಯ, ಧಾನ್ಯ ಹುರುಳಿ, ಪ್ರಿಯ ರತ್ನ ವೈಢೂರ್ಯ, ವಸ್ತ್ರ ಚಿತ್ರವಿಚಿತ್ರ, ದೆಶೆ ಏಳು ವರ್ಷ. ಕೇತುಗೆ ದರ್ಭೆ. ಯಾರಿಗೆ ಯಾರು ಮಿತ್ರರು? ರವಿಗೆ ಚಂದ್ರ, ಕುಜ, ಗುರು, ಕೇತು ಮಿತ್ರರು./ ಚಂದ್ರನ ಮಿತ್ರರು ರವಿ, ಕೇತು, ಬುಧ./ ಕುಜನಿಗೆ ರವಿ, ಚಂದ್ರ, ಗುರು, ಕೇತು ಮಿತ್ರರು./ ಬುಧನ ಮಿತ್ರರು ರವಿ, ಶುಕ್ರ, ರಾಹು. ಗುರುವಿಗೆ ರವಿ, ಚಂದ್ರ, ಕುಜ, ಕೇತು ಮಿತ್ರರು. / ಶುಕ್ರನ ಮಿತ್ರರು ಬುಧ, ಶನಿ, ರಾಹು. / ಶನಿಗೆ ಬುಧ, ಶುಕ್ರ, ರಾಹು ಮಿತ್ರರು. / ರಾಹುವಿನ ಮಿತ್ರರು ಬುಧ, ಶುಕ್ರ, ಶನಿ. ಕೇತುವಿಗೆ ರವಿ, ಚಂದ್ರ, ಕುಜ, ಗುರು ಮಿತ್ರರು. ಶತ್ರುಗಳು ರವಿಗೆ ಶುಕ್ರ, ಶನಿ, ರಾಹು ಶತ್ರುಗಳು. / ಚಂದ್ರನ ಶತ್ರು ರಾಹು. / ಕುಜನಿಗೆ ರಾಹು, ಬುಧ ಶತ್ರುಗಳು. / ಬುಧ ಶತ್ರು ಚಂದ್ರ. / ಗುರುವಿಗೆ ಬುಧ ಶುಕ್ರ ಶತ್ರುಶತ್ರುಗಳು. ಶುಕ್ರನ ಶತ್ರುಗಳು ರವಿ, ಚಂದ್ರ, ಕೇತು. / ಶನಿಗೆ ರವಿ, ಚಂದ್ರ, ಕುಜ, ಕೇತುಗಳು ಶತ್ರುಗಳು. / ರಾಹುವಿನ ಶತ್ರುಗಳು ರವಿ, ಚಂದ್ರ, ಕುಜ. / ಕೇತುವಿಗೆ ಶುಕ್ರ, ಶನಿ ಶತ್ರುಗಳು. ಇಂತಹ ನವಗ್ರಹಗಳು ತಮ್ಮ ಅವಧಿಯಲ್ಲಿ (ದಶಾ ವರ್ಷಗಳಲ್ಲಿ) ಮನುಷ್ಯನ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಬೀರುತ್ತವೆ. ಹಾಗಾಗಿ ಆಯಾ ದೆಶೆಗಳಲ್ಲಿ ತಮ್ಮ ಜಾತಕ ಪರಿಶೀಲಿಸಿಕೊಂಡು ಸೂಕ್ತ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಪುಷ್ಪಪೂಜೆಯ ಫಲ

ಪುಷ್ಪಪೂಜೆಯ ಫಲ - ಡಾ. ಎಸ್.ಎನ್. ಶೈಲೇಶ್ ಸಾಮಾನ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ದೇವರಿಗೆ ಹೂ ಇಡುತ್ತಾರೆ. ಪೂಜೆ ಮಾಡುವಾಗ ದೇವರಿಗೆ ಹೂವಿಟ್ಟು ಪೂಜಿಸದಿದ್ದರೆ ಸಮಾಧಾನವಿರುವುದಿಲ್ಲ. ಅಷ್ಟೋತ್ತರದ ಸಮಯದಲ್ಲಿ ಬಿಡಿ ಹೂವು ಬೇಕಾಗುತ್ತದೆ. ಚೆನ್ನಾಗಿ ಅರಳಿದ ಹಾಗೂ ಸುವಾಸನೆ ಹೊಮ್ಮುವ ಹೂಗಳಿಂದ ಪೂಜೆ ಮಾಡಿದರೆ ನಮ್ಮ ಮನಸ್ಸಿಗೂ ಒಂದು ರೀತಿಯ ಉಲ್ಲಾಸ, ತೃಪ್ತಿ, ನೆಮ್ಮದಿ ಸಿಗುತ್ತದೆ. ಕೆಲವರ ಮನೆಯಲ್ಲಿ ದೇವರ ಫೋಟೋಗೆ ಪ್ಲಾಸ್ಟಿಕ್ ಹೂವಿನಿಂದ ಮಾಡಿದ ಹಾರವನ್ನು ಹಾಕಿರುತ್ತಾರೆ. ಇನ್ನು ಕೆಲವರ ಮನೆಯಲ್ಲಿ ನಿಜವಾದ ಹೂವಿನ ಹಾರವನ್ನು ಹಾಕಿ ಬಹಳ ದಿನಗಳವರೆಗೂ ತೆಗೆಯುವುದೇ ಇಲ್ಲ. ಇದರಿಂದ ಮನೆಯಲ್ಲಿ ಅಶಾಂತಿ, ದಾರಿದ್ರ್ಯ, ಚರ್ಮದ ಕಾಯಿಲೆ ಮುಂತಾದ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಸುವಾಸನೆ ಬೀರುವ ಹೂಗಳಾದರೂ ಪೂರ್ಣ ಅರಳದೆ ಇರುವ ಹೂಗಳಿಂದ ಪೂಜಿಸಿದರೆ ಮಕ್ಕಳ ಆರೋಗ್ಯದಲ್ಲಿ ತೊಂದರೆ ಹೆಚ್ಚಾಗುತ್ತದೆ. ಮೊಗ್ಗಿನಿಂದ ಪೂಜೆ ಮಾಡಿದರೆ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತದೆ. ಆದ್ದರಿಂದ ಪರಿಶುದ್ಧ ಹೂವಿನಿಂದ ಪೂಜೆ ಮಾಡುವುದೇ ಶುಭಕರವಾದುದು. ವಾರಕ್ಕೆ ಸಂಬಂಧಿಸಿದಂತೆ ಪೂಜಿಸುವ ಪುಷ್ಪಗಳು ೧. ಭಾನುವಾರ : ಕಣಗಿಲೆ, ತುಂಬೆ, ದಾಸವಾಳ ೨. ಸೋಮವಾರ : ಜಾಜಿ, ಮಲ್ಲಿಗೆ, ತುಂಬೆ ೩. ಮಂಗಳವಾರ : ಸೇವಂತಿಗೆ, ಕೇದಿಗೆ, ಗುಲಾಬಿ ೪. ಬುಧವಾರ : ಮಲ್ಲಿಗೆ, ಕೆಂಪು ತಾವರೆ ೫. ಗುರುವಾರ : ಸಂಪಿಗೆ, ಸೇವಂತಿಗೆ, ದಾಸವಾಳ ೬. ಶುಕ್ರವಾರ : ಸಂಪಿಗೆ, ತಾವರೆ, ಕನಕಾಂಬರ ೭. ಶನಿವಾರ : ಗುಲಾಬಿ. ಪೂಜಾಫಲ ಮಲ್ಲಿಗೆ : ಆರೋಗ್ಯಲಾಭ, ಕಾಯಿಲೆ ವಾಸಿಯಾಗುವುದು. ಸಂಪಿಗೆ : ಶತ್ರುಗಳ ಕಾಟದಿಂದ ಮುಕ್ತಿ.ತುಂಬೆ : ದೇವಿ ಆಶೀರ್ವಾದ, ನೆಮ್ಮದಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ನಂದಿಬಟ್ಟಲು: ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿ. ಕಣಗಿಲೆ : ಮಾಂತ್ರಿಕ ದೋಷ ನಿವಾರಣೆ. ಕೇದಿಗೆ : ಅಶಾಂತಿ, ಜಗಳದಿಂದ ಮುಕ್ತಿ, ಮನಸ್ತಾಪ ದೂರ. ಬಿಳಿ ಎಕ್ಕ : ಆರೋಗ್ಯ ಲಾಭ, ಕಾಯಿಲೆ ನಿವಾರಣೆ. ರುದ್ರಾಕ್ಷ : ದಾರಿದ್ರ್ಯ, ದುಃಖ ನಿವಾರಣೆ. ಸೂರ್ಯಕಾಂತಿ : ಕೆಲಸ ಕಾರ್ಯಗಳಲ್ಲಿ ಜಯ, ಐಶ್ವಯ, ಕೀರ್ತಿ ಲಭ್ಯ. ಪಾರಿಜಾತ : ಕಾಳಸರ್ಪ ದೋಷದಿಂದ ಮುಕ್ತಿ.ಮಾಧವಿ : ಜ್ಯೊತಿಷಿಗಳಿಗೆ, ವಾಕ್ ಸಿದ್ಧಿ ಇರುವವರಿಗೆ ಶುಭ. ಮಾಲತಿ : ಎಲ್ಲ ಪಾಪಗಳಿಂದ ದೂರ. ಅಗಸೆ : ಎಲ್ಲ ಪಾಪಗಳಿಂದ ದೂರ. ನೀಲಾಂಬರಿ : ಶನಿದೋಷ ನಿವಾರಣೆ. ಸುರಭಿ : ಕಾರ್ಯಸಿದ್ಧಿ. ಬಕುಲ : ಸ್ವಂತ ಮನೆ ಜಾಗ ಸಿದ್ಧ. ಕರವೀರ : ಸೃಜನಶೀಲ ವ್ಯಕ್ತಿಗಳಿಗೆ ಕಲ್ಪನಾ ಶಕ್ತಿ ಹೆಚ್ಚುತ್ತದೆ. ಅಶೋಕ : ದಾರಿದ್ರ್ಯ, ದುಃಖ ನಿವಾರಣೆ. ಲಕ್ಕಿ : ಸಾಂಸಾರಿಕ ಕಲಹ ನಿವಾರಣೆ. ಪಾದರಿ : ಪಿತೃದೋಷ ನಿವಾರಣೆ. ಕಲ್ಹಾರ : ಸರ್ವರಿಂದ ಆಕರ್ಷಣೆ.

ತ್ರಿಗ್ರಹ ಯೋಗ ಇದರ ಫಲವೇನು ?

ತ್ರಿಗ್ರಹ ಯೋಗ ಇದರ ಫಲವೇನು ? - ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್ ಜನನ ಕಾಲದಲ್ಲಿ ಮೂರು ಗ್ರಹಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವರಿಗೆ ತ್ರಿಗ್ರಹಯೋಗವಾಗುತ್ತದೆ. ರವಿ, ಬುಧ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಕಣ್ಣಿನ ತೊಂದರೆ ಇರುವವನೂ, ಮಹಾ ಧನವಂತನೂ, ಶಾಸ್ತ್ರ ತಿಳಿದವನೂ, ಶಿಲ್ಪಿಯೂ, ಲೇಖಕನೂ ಆಗುತ್ತಾನೆ. ರವಿ, ಬುಧ, ಶುಕ್ರಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಅಹಂಕಾರಿಯೂ, ಮನಸ್ಸಿಗೆ ಬಂದ ಕಡೆ ಹೋಗುವವನೂ ಮತ್ತು ಸ್ತ್ರೀ ನಿಮಿತ್ತವಾಗಿ ಸಂಕಟವನ್ನು ಅನುಭವಿಸುವವನೂ ಆಗುತ್ತಾನೆ. ರವಿ, ಗುರು, ಶುಕ್ರ ಒಂದೇ ರಾಶಿಯಲ್ಲಿರುವಾಗ ಜನಿಸಿದವನು ದೊಡ್ಡ ಸ್ಥಾನದಲ್ಲಿದ್ದರೂ ಧನಹೀನನೂ, ಕ್ರೂರ ದೃಷ್ಟಿಯುಳ್ಳ್ಳವನೂ, ಪಾಂಡಿತ್ಯವುಳ್ಳವನೂ, ಪರಕರ್ಮದಲ್ಲಿ ಆಸಕ್ತಿಯಳ್ಳವನೂ, ಸಹ ಆಗುತ್ತಾನೆ. ರವಿ, ಬುಧ, ಶನಿಗಳು ಒಂದೇ ರಾಶಿಯಲ್ಲಿರವಾಗ ಜನಿಸಿದವನು ದುರಾಚಾರಿಯೂ, ಯುದ್ಧದಲ್ಲಿ ಪರಾಜಿತನೂ, ಬಂಧುಗಳಿಂದ ತ್ಯಜಿಸಲ್ಪಡತಕ್ಕವನೂ, ಅತ್ಯಾಸೆಯುಳ್ಳವನೂ, ಆಗುತ್ತಾನೆ. ರವಿ, ಶನಿ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಸೂಕ್ಷ್ಮ ಬುದ್ಧಿಯುಳ್ಳವನೂ, ಮಾನವರ್ಜಿತನೂ, ಕುಷ್ಠ ರೋಗಿಯೂ, ಶತ್ರುಗಳಿಂದ ಅಪಜಯ ಹೊಂದುವವನೂ, ದುರಾಚಾರಿಯೂ ಅಗುತ್ತಾನೆ. ರವಿ, ಶನಿ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪುತ್ರ ಮಿತ್ರ ಸಂಬಂಕರಿಂದ ಸೌಖ್ಯವುಳ್ಳವನೂ, ಭಯ ವರ್ಜಿತನೂ, ರಾಜ ಕಾರ್ಯದಲ್ಲಿ ನಿಷ್ಠನೂ, ಕ್ರೂರಿಯೂ, ಬಂಧು ಜನ ದ್ವೇಷಿಯೂ ಆಗುತ್ತಾನೆ. ರವಿ, ಶನಿ, ಕುಜರು ಒಂದೇ ರಾಶಿಯಲ್ಲಿ ಸೇರಿದಾಗ ಜನಿಸಿದವನು ಮೂರ್ಖನೂ, ಗೋಧನ ವರ್ಜಿತನೂ, ರೋಗಗ್ರಸ್ತನೂ, ಸ್ವಜನರಿಲ್ಲದವನೂ, ಅಂಗವೈಕಲ್ಯವುಳ್ಳವನೂ, ಕಲಹ ಪ್ರ್ರಾಯನೂ ಕೂಡಾ ಆಗುತ್ತಾನೆ. ರವಿ, ಕುಜ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಭಾಗ್ಯವಂತನೂ, ಸತ್ಕುಲ ಪ್ರಸೂತನೂ, ವಿಷಯಾಸಕ್ತನೂ ಆಗಿರುತ್ತಾನೆ. ರವಿ, ಕುಜ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪ್ರಚಂಡನೂ, ಸತ್ಯಭಾಷಿಯೂ, ರಾಜನ ಮಂತ್ರಿಯೂ, ವಾಕ್ಚಾತುರ್ಯವುಳ್ಳವನೂ, ಸಹ ಆಗುತ್ತಾನೆ. ರವಿ, ಕುಜ, ಬುಧ ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪ್ರಖ್ಯಾತನೂ, ಸಾಹಸಿಯೂ, ನಿಷ್ಠುರಭಾಷಿಯೂ, ದ್ರವ್ಯ, ಸ್ತ್ರೀ ಪುತ್ರರಿಂದ ಪೀಡಿಸಲ್ಪಡುವವನೂ ಆಗುತ್ತಾನೆ. ಚಂದ್ರ, ಕುಜ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಬಾಲ್ಯದಲ್ಲಿಯೇ ಮಾತೃ ವಿಯೋಗವುಳ್ಳವನೂ, ಕ್ಷುದ್ರ ಗುಣವುಳ್ಳವನೂ, ಎಲ್ಲರಲ್ಲಿಯೂ ವಿರೋಧ ಕಟ್ಟಿಕೊಳ್ಳುವವನೂ, ವಿಷಮವಾದ ಸ್ವಭಾವವುಳ್ಳವನೂ ಆಗುತ್ತಾನೆ. ಚಂದ್ರ, ಕುಜ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಸದಾ ಸಂಚಾರಶೀಲನೂ, ಶೀತಭೀರುವೂ ಆಗುತ್ತಾನೆ. ಚಂದ್ರ, ಕುಜ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಸ್ತ್ರೀ ಲೋಲನೂ, ದೇಹದಲ್ಲಿ ವ್ರಣವುಳ್ಳವನೂ, ಸ್ತ್ರೀವಶವರ್ತಿಯೂ, ಮುಖ ಸೌಂದರ್ಯವುಳ್ಳವನೂ ಆಗುತ್ತಾನೆ. ಚಂದ್ರ, ಕುಜ, ಬುಧರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಅನಾಚಾರವಂತನೂ, ಪಾಪ ಕರ್ಮಗಳಲ್ಲಿ ಆಸಕ್ತಿ ಇರುವವನೂ, ಬಂದು ಹೀನನೂ ಆಗುತ್ತಾನೆ. ಚಂದ್ರ, ಶುಕ್ರ, ಶನಿಗಳು ಒಂದೇ ರಾಶಿಯಲ್ಲಿದ್ದರೆ ಜಾತಕನು ವೇದಪಾಠಿಯೂ, ಲೇಖಕನೂ, ಪುರೋಹಿತರ ಕುಲದಲ್ಲಿ ಹುಟ್ಟಿದವನೂ ಆಗುತ್ತಾನೆ. ಚಂದ್ರ, ಬುಧ, ಶನಿಗಳು ಒಟ್ಟಿಗೆ ಒಂದೇ ರಾಶಿಯಲಿದ್ದರೆ ಜಾತಕನು ಸಾಧುವೂ, ಪಾಂಡಿತ್ಯವುಳ್ಳ ಪುತ್ರನನ್ನು ಪಡೆಯುತ್ತಾನೆ. ಪತಿವ್ರತಾ ಶಿರೋಮಣಿಯಾದ ಮಾತೃವುಳ್ಳವನೂ, ಎಲ್ಲಾ ಶಾಸವನ್ನು ತಿಳಿದವನೂ ಐಶ್ವರ್ಯವಂತನೂ ಆಗುತ್ತಾನೆ. ಚಂದ್ರ, ಬುಧ, ಶುಕ್ರರು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ವಿದ್ಯಾವಂತನೂ, ಅಸೂಯಪರನೂ, ಧನವಂತನೂ, ಲೋಭಿಯೂ, ನೀಚವಾದ ಆಚಾರವುಳ್ಳವನೂ ಆಗುತ್ತಾನೆ. ಚಂದ್ರ, ಗುರು, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ರೋಗರಹಿತನೂ, ನೀತಿ ಶಾಸ್ತ್ರ ತಿಳಿದವನೂ, ಸ್ತ್ರೀ ಸೌಖ್ಯವುಳ್ಳವನೂ, ಗ್ರಾಮ ಮತ್ತು ನಗರಾಪತಿಯೂ ಆಗುತ್ತಾನೆ. ಚಂದ್ರ, ಬುಧ, ಗುರುಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಯಶೋವಂತನೂ, ಧನವಂತನೂ, ಪುತ್ರಮಿತ್ರಾದಿಗಳಿಂದ ಕೂಡಿದವನೂ, ವಾಗ್ಮಿಯೂ, ಪ್ರಖ್ಯಾತನೂ, ಕೀರ್ತಿವಂತನೂ ಸಹ ಆಗುತ್ತಾನೆ. ಚಂದ್ರ, ಬುಧ, ಶನಿಗಳು ಒಂದೇ ರಾಶಿಯಲ್ಲಿರುವಾಗ ಜನಿಸಿದವನು ಪ್ರಾಜ್ಞನೂ, ರಾಜ ಪೂಜಿತನೂ, ಅತ್ಯಂತ ಉದ್ದವಾದ ಮತ್ತು ಪುಷ್ಟವಾದ ಶರೀರವುಳ್ಳ್ಳವನೂ, ವಾಚಾಳಿಯೂ ಸಹ ಆಗುತ್ತಾನೆ.

ನಿಮ್ ಜಾತಕ ಪ್ರಾಣಿಗಳ ಕೈಯಲ್ಲಿ

ನಿಮ್ ಜಾತಕ ಪ್ರಾಣಿಗಳ ಕೈಯಲ್ಲಿ! - ಯಶೋಧರ ಕೋಟ್ಯಾನ್ ಪ್ರತಿಯೊಬ್ಬರ ಜನ್ಮದಿನ, ಅವುಗಳ ಭವಿಷ್ಯ ತರಹೇವಾರಿ ಇರಬಹುದು. ಆದರೂ ನಮ್ಮ ನಿಮ್ಮೆಲ್ಲರ ಜನ್ಮದಿನಕ್ಕೂ ಪ್ರಾಣಿ ಪಕ್ಷಿಗಳಿಗೂ ಸಂಬಂಧವಿದೆ ಎಂಬುದು ಅಕ್ಷರಶಃ ಸತ್ಯ. ಒಂದೊಂದು ಸಲ ನಾವು ಪ್ರಾಣಿಗಳ ಥರಾನೇ ಆಡುತ್ತಿರುತ್ತೇವೆ. ನೋಡಿ, ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ? ಉದಾಹರಣೆಗೆ ಜನವರಿ ೧ರಿಂದ ೯ರ ನಡುವೆ ಜನಿಸಿದ ವ್ಯಕ್ತಿಗಳ ಸಂಕೇತ ನಾಯಿ. ಅವರು ನಾಯಿಯಂತೆ ತುಂಬಾ ವಿಧೇಯರಾಗಿರುತ್ತಾರಂತೆ. ಮಾರ್ಚ್ ೧ರಿಂದ ೧೨ವರೆಗೆ ಜನಿಸಿದವರ ಪ್ರಾಣಿ ಕೋತಿ. ಅಂಥವರಿಗೆ ತಾಳ್ಮೆ ಕಡಿಮೆಯಂತೆ. ಅವರು ಬಹಳ ಉದ್ವೇಗಿಗಳಾಗಿರುತ್ತಾರೆ. ಹೀಗೆ ನಿಮ್ಮ ಜನ್ಮದಿನಾಂಕವನ್ನು ಆಧರಿಸಿ, ಅದಕ್ಕೆ ಸಂಕೇತವಾದ ಪ್ರಾಣಿಗಳ ಜತೆ ನಿಮ್ಮ ಗುಣ, ಪ್ರವೃತ್ತಿ, ಮನಃಸ್ಥಿತಿಯನ್ನು ಅರಿತುಕೊಳ್ಳಿ ! ಜನ್ಮದಿನ ಅದರ ಸಂಕೇತ ಜನವರಿ ೦೧-೦೯ - ನಾಯಿ ಜನವರಿ ೧೦-೨೪ - ಇಲಿ ಜನವರಿ ೨೫-೩೧ - ಸಿಂಹ ಫೆಬ್ರವರಿ ೦೧-೦೫ - ಬೆಕ್ಕು ಫೆಬ್ರವರಿ ೦೬-೧೪ - ಪಾರಿವಾಳ ಫೆಬ್ರವರಿ ೧೫-೨೧ - ಆಮೆ ಫೆಬ್ರವರಿ ೨೨-೨೮ - ಚಿರತೆ ಮಾರ್ಚ್ ೦೧-೧೨ - ಕೋತಿ ಮಾರ್ಚ್ ೧೩-೧೫ - ಸಿಂಹ ಮಾರ್ಚ್ ೧೬-೨೩ - ಇಲಿ ಮಾರ್ಚ್ ೨೪-೩೧ - ಬೆಕ್ಕು ಏಪ್ರಿಲ್ ೦೧-೦೩ - ನಾಯಿ ಏಪ್ರಿಲ್ ೦೪-೧೪ - ಚಿರತೆ ಏಪ್ರಿಲ್ ೧೫-೨೬ - ಇಲಿ ಏಪ್ರಿಲ್ ೨೭-೩೦ - ಆಮೆ ಮೇ ೦೧-೧೩ - ಕೋತಿ ಮೇ ೧೪-೨೧ - ಪಾರಿವಾಳ ಮೇ ೨೨-೩೧ - ಸಿಂಹ ಜೂನ್ ೦೧-೦೩ ಇಲಿ ಜೂನ್ ೦೪-೧೪-ಆಮೆ ಜೂನ್ ೧೫-೨೦ - ನಾಯಿ ಜೂನ್೨೧-೨೪ - ಕೋತಿ ಜೂನ್ ೨೫-೩೦ - ಬೆಕ್ಕು ಜುಲೈ ೦೧-೦೯ - ಇಲಿ ಜುಲೈ ೧೦-೧೫ - ನಾಯಿ ಜುಲೈ ೧೬-೨೬ - ಪಾರಿವಾಳ ಜುಲೈ ೨೭-೩೧ - ಬೆಕ್ಕು ಆಗಸ್ಟ್ ೦೧-೧೫ - ಕೋತಿ ಆಗಸ್ಟ್ ೧೬-೨೫ - ಇಲಿ ಆಗಸ್ಟ್ ೨೬-೩೧ - ಆಮೆ ಸೆಪ್ಟೆಂಬರ್ ೦೧-೧೪ - ಪಾರಿವಾಳ ಸೆಪ್ಟೆಂಬರ್ ೧೫-೨೭ - ಬೆಕ್ಕು ಸೆಪ್ಟೆಂಬರ್ ೨೮-೩೦ - ನಾಯಿ ಅಕ್ಟೋಬರ್ ೦೧-೧೫ - ಕೋತಿ ಅಕ್ಟೋಬರ್ ೧೬-೨೭ - ಆಮೆ ಅಕ್ಟೋಬರ್ ೨೮-೩೧ - ಚಿರತೆ ನವೆಂಬರ್ ೦೧-೧೬ - ಸಿಂಹ ನವೆಂಬರ್ ೧೭-೩೦ - ಬೆಕ್ಕು ಡಿಸೆಂಬರ್ ೦೧-೧೬ - ನಾಯಿ ಡಿಸೆಂಬರ್ ೧೭-೨೫ - ಕೋತಿ ಡಿಸೆಂಬರ್ ೨೬-೩೧ - ಪಾರಿವಾಳ ಬೆಕ್ಕು ನೀವು ಅತ್ಯಂತ ನಂಬಿಕಸ್ಥರು, ಪ್ರೀತಿಪಾತ್ರರು. ನಿಮ್ಮದು ಬೆಕ್ಕಿನ ಹಾಗೆ ನಾಚಿಕೆಯ ಸ್ವಭಾವ. ಕೆಲವೊಮ್ಮೆ ಪ್ರಶಾಂತವಾಗಿ ಕುಳಿತುಕೊಳ್ಳುವುದು ಅಂದರೆ ನಿಮಗೆ ಬಲು ಇಷ್ಟ. ಪ್ರತಿಯೊಂದು ವಿಚಾರವನ್ನೂ ಸಂಪೂರ್ಣವಾಗಿ ವಿವರಿಸಲು ಇಷ್ಟಪಡುತ್ತೀರಿ. ನಿಮಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇದೆ. ನೀವು ಫ್ಯಾಷನ್ ಪ್ರಿಯರು ಬೇರೆ. ಎಲ್ಲರ ಜತೆ ಸಲೀಸಾಗಿ ಒಡನಾಡುತ್ತೀರಿ. ಅಪರಿಚಿತರ ಜತೆಗೆ ನೀವು ಹೆಚ್ಚು ಮಾತನಾಡಲು ಇಷ್ಟಪಡುವವರಲ್ಲ. ಸ್ನೇಹಿತರ ಆಯ್ಕೆಯಲ್ಲಿ ಎಡವಬೇಡಿ. ಚಿರತೆ ಕಾಡಿನಲ್ಲಿ ಅವಿತಿಟ್ಟುಕೊಂಡಿರುವ ಚಿರತೆಯ ಹಾಗೆ ನೀವು ತುಂಬಾ ಗೌಪ್ಯ ವ್ಯಕ್ತಿತ್ವದವರು. ಯಾವುದೇ ವಾತಾವರಣವನ್ನೂ ಅತ್ಯಂತ ಸಮರ್ಥವಾಗಿ ನೀವು ನಿಭಾಯಿಸಬಲ್ಲಿರಿ. ಪ್ರೀತಿಯಿಂದಾಗಿ ಆಗಾಗ ಗಾಸಿಪ್ಗಳಿಗೂ ವಸ್ತುವಾಗುತ್ತೀರಿ. ನಿಮ್ಮ ಅಭಿಲಾಷೆಯಂತೆ ಬೇಡಿಕೆ ಈಡೇರಿಸಲು ಬಯಸುತ್ತೀರಿ. ಆದರೆ ಕೆಲವೊಮ್ಮೆ ವಿಫಲರಾಗುತ್ತೀರಿ. ಆ ಪರಿಣಾಮವಾಗಿ ಸಂಬಂಧ ಮುರಿಯಬಹುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣ ನಿಮ್ಮದು. ನಾಯಿ ನಿಮ್ಮ ಜನ್ಮದಿನದ ಪ್ರಕಾರ ಇದರ ಸಂಕೇತ ಪ್ರಾಣಿ ನಾಯಿ. ಅಂದರೆ ನೀವು ಅತ್ಯಂತ ವಿಧೇಯರೇ ಸರಿ. ಕೆಲಸದಲ್ಲಿನ ನಿಮ್ಮ ಪ್ರಾಮಾಣಿಕತೆ ಪ್ರಶ್ನಿಸುವಂತೆಯೇ ಇಲ್ಲ. ನೀವು ಬಹಳ ಸರಳ ಹಾಗೂ ಡೌನ್ ಟು ಅರ್ಥ್. ಬಟ್ಟೆಯ ಆಯ್ಕೆಯಲ್ಲಿ ನಿಮಗೆ ಒಳ್ಳೆಯ ಅಭಿರುಚಿ ಇದೆ. ಕೆಲವೇ ಸ್ನೇಹಿತರಿದ್ದರೂ ಅವರೆಲ್ಲ ಪ್ರತಿಷ್ಠಿತ ವ್ಯಕ್ತಿಗಳೇ ಆಗಿರುತ್ತಾರೆ. ಸಿಂಹ ನಿಮ್ಮ ಸಂಕೇತಕ್ಕೆ ನಿಮ್ಮ ಸ್ವಭಾವ ತದ್ವಿರುದ್ಧ. ಏಕೆಂದರೆ ನೀವು ಶಾಂತಿಪ್ರಿಯರು. ಜಗಳದ ಸನ್ನಿವೇಶವನ್ನು ತಪ್ಪಿಸುವ ಚಾಕಚಕ್ಯತೆ ನಿಮ್ಮಲ್ಲಿದೆ. ನೀವು ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಇರುವವರಲ್ಲ. ಹುಟ್ಟಿನಿಂದಲೂ ನಿಮಗೆ ನಾಯಕತ್ವ ಗುಣವಿದೆ. ಕೆಲಸ ಮಾಡಿಸುವುದರಲ್ಲಿ ನೀವು ನಿಸ್ಸೀಮರು. ನಿಮ್ಮನ್ನು ಪ್ರೀತಿಸುವವರನ್ನು ಕಂಡರೆ ನಿಮಗೆ ಅತೀವ ಅಕ್ಕರೆ. ನಿಮ್ಮ ಒಳ್ಳೆಯ ಗುಣವನ್ನು ದುರ್ಬಳಕೆ ಮಾಡುವವರ ಬಗ್ಗೆ ಎಚ್ಚರ ವಹಿಸಿ. ಕೋತಿ ನಿಮ್ಮ ಜನನ ಪ್ರಾಣಿ ಕೋತಿ. ಅದರ ಹಾಗೆಯೇ ನಿಮಗೂ ತಾಳ್ಮೆ ಕಡಿಮೆ. ಉದ್ವೇಗ ಜಾಸ್ತಿ. ಯಾವುದೇ ಕೆಲಸವನ್ನು ಆದಷ್ಟು ಬೇಗ ಮಾಡಿ ಮುಗಿಸಲು ಬಯಸುತ್ತೀರಿ. ಸರಳ ಗುಣದ ನೀವು ಹೃದಯಪೂರ್ವಕವಾಗಿ ಪ್ರೀತಿಸುವವರು. ಆದರೆ ನಿಮ್ಮದು ವಿಶಿಷ್ಟ ವ್ಯಕ್ತಿತ್ವ. ಎಲ್ಲ ವಿಚಾರದಲ್ಲೂ ರಕ್ಷಣಾತ್ಮಕ ಆಟವಾಡುತ್ತೀರಿ. ಅಪಾಯದಲ್ಲಿ ಸಿಲುಕುವ ಮೊದಲೇ ನಿಮ್ಮ ಸಿಕ್ಸ್ತ್ ಸೆನ್ಸ್ (ಆರನೇ ಇಂದ್ರಿಯ) ಎಚ್ಚರಿಸುತ್ತದೆ. ಪಾರಿವಾಳ ನೀವು ಪಾರಿವಾಳದಂತೆ ಸಂತೋಷ ಮತ್ತು ಅದೃಷ್ಟದ ಸಂಕೇತವಾಗಿರುತ್ತೀರಿ. ದುಃಖ, ಸಂತೋಷ ಎರಡಕ್ಕೂ ನೀವು ವಿಚಲಿತರಾಗುವವರಲ್ಲ. ಹೋದಲ್ಲೆಲ್ಲ ಸಂತೋಷವನ್ನೇ ಕೊಂಡೊಯ್ಯುತ್ತೀರಿ. ಸ್ನೇಹಿತರ ಕೂಟದಲ್ಲಿ ನೀವೊಬ್ಬ ಲೀಡರ್. ಅಗತ್ಯ ಬಿದ್ದಾಗ ಸಂತೈಸುವುದರಲ್ಲಿ ಎತ್ತಿದ ಕೈ. ನೀವು ಸಿದ್ಧಾಂತವಾದಿಗಳು. ಸೋಗಲಾಡಿತನ ಎಂಬುದು ನಿಮಗೆ ಇಷ್ಟವಾಗುವುದಿಲ್ಲ. ನೀವು ಪ್ರೀತಿಯ ಸುಳಿಗೆ ಸಿಲುಕುತ್ತೀರಿ. ಹೀಗಾಗಿ ಕೊಂಚ ಎಚ್ಚರ ವಹಿಸಿ. ಇಲಿ ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮ ಚಿಹ್ನೆ ಇಲಿಯಾಗಿರುತ್ತದೆ. ಹೀಗಾಗಿ ನೀವು ತುಂಬ ತುಂಟತನದಿಂದ ಕೂಡಿರುತ್ತೀರಿ. ನಿಮ್ಮ ಕಣ್ಣುಗಳು ಚುರುಕು ಮತ್ತು ಆಕರ್ಷಕ. ನಿಮ್ಮದು ಸದಾ ಹಾಸ್ಯಪ್ರವೃತ್ತಿ. ಎಲ್ಲ ಸಮಾರಂಭಗಳಿಗೂ ನಿಮ್ಮನ್ನು ಆಹ್ವಾನಿಸುತ್ತಾರೆ. ಆದರೆ ನೀವು ತುಂಬ ಸೂಕ್ಷ್ಮ ಸಂವೇದನೆಯವರು. ನಿಮ್ಮೊಂದಿಗೆ ಮಾತನಾಡಬೇಕು ಅಂತಾದರೆ ಕೆಲವರು ಹಲವು ಬಾರಿ ಯೋಚಿಸುತ್ತಾರೆ. ಆಮೆ ನಿಮ್ಮ ಸಂಕೇತ ಆಮೆಯ ಹಾಗೆ ನೀವು ಪರಿಪೂರ್ಣತೆಗೆ ಹತ್ತಿರವುಳ್ಳವರು. ಹೃದಯದಿಂದ ನೀವು ಸುಸ್ವಭಾವದವರು. ನಿಮ್ಮ ದಯಾಳುತನದ ಬಗ್ಗೆ ಸ್ನೇಹಿತರು ಚರ್ಚಿಸುತ್ತಲೇ ಇರುತ್ತಾರೆ. ನೀವೂ ಶಾಂತಿಪ್ರಿಯರು. ಆದರೆ ತಪ್ಪಿತಸ್ಥರ ಜತೆಗೆಲ್ಲ ರಾಜಿ ಮಾಡಿಕೊಳ್ಳುವವರಲ್ಲ. ಹಿಂದಿನಿಂದ ಮಾತಾನಾಡುವ ಕೆಟ್ಟ ಚಾಳಿ ನಿಮಗಿಲ್ಲ. ನೀವು ಎಲ್ಲರ ಜತೆ ಬೆರೆಯುವ ರೀತಿಯಿಂದಾಗಿ ಎಲ್ಲರಿಗೂ ನೀವು ಎಂದರೆ ಬಹಳ ಇಷ್ಟ. ನೀವು ಉದಾರ ಮನೋಭಾವದವರು. ಪ್ರತಿಫಲದ ಅಪೇಕ್ಷೆಯೂ ನಿಮಗಿಲ್ಲ.

ಚಂದ್ರನಿಂದ ಮಾತೃತ್ವ

ಚಂದ್ರನಿಂದ ಮಾತೃತ್ವ ಆರ್.ಸೀತಾರಾಮಯ್ಯ ಚಂದ್ರನು ಮನಸ್ಸಿನ ಕಾರಕ. 'ಚಂದ್ರಮಾ ಮನಸೋ ಜಾತಃ' ಎಂಬುದು ಪುರುಷಸೂಕ್ತದ ಪ್ರಸಿದ್ಧ ವಾಕ್ಯ. ಜತೆಗೆ ಚಂದ್ರನು ಮಾತೃಕಾರಕನಾಗಿದ್ದಾನೆ. ಮತ್ತು ಸ್ತ್ರೀಯರ ಋತುಚಕ್ರಕಾರಕನೂ ಆಗಿದ್ದಾನೆ. ಜೆಕೊಸ್ಲಾವಾಕಿಯಾ ದೇಶದ ಮನಃಶಾಸ್ತ್ರಜ್ಞರಾದ ಡಾ.ಯುಜನ್ ಜೋನಸ್ ಎಂಬುವವರು ಪ್ರಾಚೀನ ಗ್ರಂಥಗಳ ಶೋಧನೆ ಪ್ರವೃತ್ತಿಯುಳ್ಳವರು. ಕೆಲವು ವರ್ಷಗಳ ಹಿಂದೆ ಪ್ರಾಚೀನ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದ ಇವರಿಗೆ, ಬೆಬಿಲೋನಿಯಾದ ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ, ಚಂದ್ರನ ಕಾಲಚಕ್ರದ ಗತಿಯಿಂದ ಸ್ತ್ರೀಯರು ಗರ್ಭ ಧರಿಸುತ್ತಾರೆ ಎಂಬ ಸಂಗತಿ ತಿಳಿಯಿತು. ಅದರಲ್ಲಿ ಬರೆದಿದ್ದನ್ನು ಇವರು ಪುನಃ ಸಂಶೋಧನೆ ನಡೆಸಿ, ಚಂದ್ರನ ಕಾಲಚಕ್ರದ ಮೇಲೆ ಕೆಲವು ಅಂಶಗಳನ್ನು ಕಂಡುಹಿಡಿದರು. ಕಾಲಚಕ್ರದಲ್ಲಿ ಚಂದ್ರನ ಚಲನೆಯು ಸ್ತ್ರೀಯ ಕುಂಡಲಿಯಲ್ಲಿರುವ ಚಂದ್ರನ ಅವಸ್ಥೆಗೆ (ಸ್ಥಿತಿಗೆ) ಬಂದಾಗ ಶೇಕಡಾ 70 ರಿಂದ 85 ಸ್ತ್ರೀಯರು ಗರ್ಭ ಧರಿಸುತ್ತಾರೆ. ಶೇಕಡ 15 ರಿಂದ 30 ಸ್ತ್ರೀಯರ ಗರ್ಭಧಾರಣೆ ಮಾತ್ರ ಅಂಡೋತ್ಪತ್ತಿಯ ಅವಸ್ಥೆಯಲ್ಲಿ ಜರುಗುತ್ತದೆ. ವಿದೇಶಗಳಲ್ಲಿ ಗರ್ಭಧಾರಣೆಯನ್ನು ಹೆಚ್ಚಾಗಿ ತಡೆಗಟ್ಟುವುದರಿಂದ ಅಲ್ಲಿ ಕ್ರಮಬದ್ಧ ಋತುಚಕ್ರ ಚಲನೆಯ ಕ್ರಮ ಅನಿಶ್ಚಿತಗೊಳ್ಳುತ್ತದೆ. ಸ್ತ್ರೀಯರಲ್ಲಿ ಅಂಡೋತ್ಪತ್ತಿಯ ಕಾಲಚಕ್ರ ಹಾಗೂ ಜ್ಯೋತಿಷದಲ್ಲಿ ಗರ್ಭಧಾರಣೆಯ ಕಾಲ ಒಂದೇ ಸಮನಾಗಿರುವುದು. ಈ ಎರಡೂ ಕಾಲಚಕ್ರಗಳು ಜೊತೆಗೆ ಸೇರಿದಾಗ, ತಾಯ್ತನವು ಉಂಟಾಗುತ್ತದೆ. ಇದನ್ನು ಸರಳವಾಗಿ ಹೇಳಬೇಕೆಂದರೆ, ಚಂದ್ರನ ಅವಸ್ಥೆಯು ತಾಯಿಯ ಕುಂಡಲಿಯಲ್ಲಿರುವ ಚಂದ್ರನ ಅವಸ್ಥೆಗೆ ಸಮನಾದಾಗ ಗರ್ಭಧಾರಣೆಯ ಅವಕಾಶವು ಒದಗಿಬರುತ್ತದೆ. ಉದಾಹರಣೆಗೆ ಸ್ತ್ರೀಯು ಹುಣ್ಣಿಮೆ ದಿವಸ ಜನಿಸಿದ್ದರೆ, ಗರ್ಭಧಾರಣೆಯ ಸಮಯವು ಹುಣ್ಣಿಮೆಯಾಗಿರುತ್ತದೆ. ಜನನ ಸಮಯದಲ್ಲಿ ಚಂದ್ರನು ನಕ್ಷತ್ರದ ಯಾವ ಪಾದದಲ್ಲಿರುತ್ತಾನೋ ಆ ಪಾದದಲ್ಲಿಯೇ ಗರ್ಭಧಾರಣೆಯಾಗುತ್ತದೆ ಎಂದು ಡಾ. ಯುಜನ್ ಸಂಶೋಧಿಸಿದರು. ಡಾ. ಯುಜನ್ ಜೋನಸ್ ಅವರು ಇನ್ನೂ ಒಂದು ಮುಖ್ಯವಾದ ವಿಷಯವನ್ನು ಸಂಶೋಧಿಸಿದರು. ಗರ್ಭಧಾರಣೆಯ ಸಮಯದಲ್ಲಿ ಚಂದ್ರನು; ಪುರುಷ ರಾಶಿಗಳಾದ ಮೇಷ, ಮಿಥುನ, ಸಿಂಹ, ತುಲಾ, ಧನಸ್ಸು ಅಥವಾ ಕುಂಭ ರಾಶಿಯಲ್ಲಿದ್ದರೆ ಗಂಡು ಸಂತಾನವಾಗುತ್ತದೆ. ಚಂದ್ರನು;ಸ್ತ್ರೀ ರಾಶಿಗಳಾದ ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ ಅಥವಾ ಮೀನ ರಾಶಿಯಲ್ಲಿದ್ದರೆ ಹೆಣ್ಣು ಸಂತಾನವಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಚಂದ್ರನು ರಾಶಿ ಬದಲಾಯಿಸುವ ವೇಳೆಯಾಗಿದ್ದರೆ, ಅವಳಿ ಮಕ್ಕಳಾಗುತ್ತವೆ ಎಂಬುದೇ ಆ ಸಂಶೋಧನೆಯಾಗಿದೆ. ಗ್ರಹಗಳ ಆಧಿಪತ್ಯ ವಿದ್ವಾನ್ ನಾಗಪತಿ ಭಟ್ ನಾವೆಲ್ಲರೂ ಹುಟ್ಟುವ ಸಮಯದಲ್ಲಿ ನಮಗೆ ಸಂಬಂಧಿಸಿರುವ ನಕ್ಷತ್ರಗಳ ಸ್ಥಾನಕ್ಕೆ ಅನುಗುಣವಾಗಿ ನಮ್ಮ ಭವಿಷ್ಯ ನಿರ್ಮಾಣವಾಗುತ್ತದೆ. ಜನ್ಮಕಾಲದಲ್ಲಿರುವ ನಕ್ಷತ್ರಗಳನ್ನು ಜನ್ಮನಕ್ಷತ್ರವೆನ್ನುತ್ತೇವೆ. ಈ ನಕ್ಷತ್ರಗಳು ಯಾವ ರಾಶಿಯಲ್ಲಿರುವುದೊ ಅದನ್ನು ಅನುಸರಿಸಿ ರಾಶಿಗಳನ್ನು ಹೆಸರಿಸುತ್ತೇವೆ. ಅಶ್ವಿನಿ ನಕ್ಷತ್ರದಿಂದ ಆರಂಭಿಸಿ ರೇವತಿ ನಕ್ಷತ್ರದ ತನಕ ಇರುವ ಇಪ್ಪತ್ತೇಳು ನಕ್ಷತ್ರಗಳು ಹನ್ನೆರಡು ರಾಶಿಗಳಲ್ಲೇ ವಿಭಕ್ತವಾಗಿರುತ್ತದೆ. ಮೇಷಾದಿ ಹನ್ನೆರಡು ರಾಶಿಗಳಿಗೆ ನವಗ್ರಹಗಳೇ ಅಧಿಪತಿಗಳು. ಮೇಷ, ವೃಶ್ಚಿಕ ರಾಶಿಗಳಿಗೆ ಕುಜ ಅಧಿಪತಿ. ಹಾಗೆಯೇ ವೃಷಭ, ತುಲಾ ರಾಶಿಗಳಿಗೆ ಶುಕ್ರ. ಮಿಥುನ, ಕನ್ಯಾಗಳಿಗೆ ಬುಧ. ಕರ್ಕ ರಾಶಿಗೆ ಚಂದ್ರ. ಸಿಂಹಕ್ಕೆ ರವಿ. ಧನು ಮತ್ತು ಮೀನಗಳಿಗೆ ಗುರು ಹಾಗೂ ಮಕರ, ಕುಂಭಗಳಿಗೆ ಶನೈಶ್ಚರ ಅಧಿಪತಿಗಳಾಗಿದ್ದಾರೆ ಇವರಲ್ಲಿ ಗುರು, ಶುಕ್ರ ಹಾಗೂ ಪಾಪಗ್ರಹಗಳ ಜತೆಗೆ ಇಲ್ಲದ ಬುಧ ಹಾಗೂ ಬಲಿಷ್ಠ ಚಂದ್ರ ಇವರು ಶುಭಗ್ರಹಗಳು. ಹೀಗಾಗಿಯೇ ಧನು, ಮೀನ, ವೃಷಭ, ತುಲಾ, ಕನ್ಯಾ, ಮಿಥುನ, ಕರ್ಕ ಈ ರಾಶಿಗಳನ್ನು ಶುಭ ರಾಶಿಗಳು ಎನ್ನಬಹುದು. ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭಗಳು ಇದಕ್ಕಿಂತ ಭಿನ್ನವಾದವುಗಳು. ಹಾಗಿದ್ದರೂ ಈ ರಾಶಿಗಳನ್ನು ಅಶುಭ ಎನ್ನಲು ಸಾಧ್ಯವಿಲ್ಲ. ಅವುಗಳಲ್ಲಿರುವ ಗ್ರಹಸ್ಥಿತಿಯನ್ನು ಅನುಸರಿಸಿ ಅವು ಶುಭವೋ ಅಶುಭವೋ ಅಂತ ಹೇಳಬೇಕಾಗುತ್ತದೆ. ಯಾವ ರಾಶಿಗೆ ಯಾವ ದೇವರ ಪೂಜೆ? ಮೇಷ, ವೃಶ್ಚಿಕ ರಾಶಿಯವರಿಗೆ ರಾಶ್ಯಾಧಿಪತಿ ಕುಜ. ಈ ಗ್ರಹವನ್ನು ಪ್ರತಿನಿಧಿಸುವ ದೇವತೆಗಳು ಸುಬ್ರಹ್ಮಣ್ಯ, ದುರ್ಗೆ. ಈ ದೇವತೆಗಳ ಪೂಜೆಯಿಂದ ಕಷ್ಟಗಳು ನಿವೃತ್ತಿಯಾಗುತ್ತವೆ. ವೃಷಭ ಹಾಗೂ ತುಲಾ ರಾಶಿಗಳಿಗೆ ಶುಕ್ರ ಅಧಿಪತಿ. ಶುಕ್ರನನ್ನು ಅಧಿಕರಿಸುವ ದೇವತೆ ಲಕ್ಷ್ಮಿ. ಈ ರಾಶಿಯವರು ಲಕ್ಷ್ಮಿಯನ್ನು ಆರಾಧಿಸಿದರೆ ಶೀಘ್ರವಾಗಿ ಇಷ್ಟಾರ್ಥಗಳನ್ನು ಪಡೆಯಬಹುದು. ಮಿಥುನ, ಕನ್ಯಾ ರಾಶಿಯವರಿಗೆ ರಾಶ್ಯಾಧಿಪತಿ ಬುಧ. ಬುಧನನ್ನು ಅಧಿಕರಿಸುವ ದೇವತೆ ವಿಷ್ಣು. ಈ ರಾಶಿಯವರು ವಿಷ್ಣುವನ್ನು ಆರಾಧಿಸಿ ಶುಭವನ್ನು ಹೊಂದಬಹುದು. ಕರ್ಕ ರಾಶಿಗೆ ಚಂದ್ರನು ಅಧಿಪತಿಯಾಗಿದ್ದಾನೆ. ಚಂದ್ರನ ಸಂಪ್ರೀತಿಗಾಗಿ ಸ್ತ್ರೀದೇವತೆಯಾದ ಲಕ್ಷ್ಮೀ ಅಥವಾ ದುರ್ಗೆಯ ಆರಾಧನೆ ಮಾಡುವುದು ಉತ್ತಮ. ಸಿಂಹರಾಶಿಯ ಅಧಿಪತಿ ರವಿ. ರವಿಯನ್ನು ಪ್ರತಿನಿಧಿಸುವ ದೇವತೆ ಶಿವ. ಶಿವನ ಆರಾಧನೆ ಮಾಡಿ ಈ ರಾಶಿಯವರು ಸಂತಸವನ್ನು ಹೊಂದಬಹುದು. ಶನಿ ಗ್ರಹನು ಮಕರ ಹಾಗೂ ಕುಂಭ ರಾಶಿಗಳ ಅಧಿಪತಿ. ಶನಿಯನ್ನು ಅಧಿಕರಿಸುವ ದೇವತೆ ಮೃತ್ಯುಂಜಯ. ಮೃತ್ಯುಂಜಯನನ್ನು ಆರಾಧಿಸಿ ಈ ಗ್ರಹದ ಪೀಡೆಯಿಂದ ಪಾರಾಗಬಹುದು.

ಶುಕ್ಲ ಪಕ್ಷ-ಕೃಷ್ಣ ಪಕ್ಷ ಪ್ರಾರಂಭವಾಗಿದ್ದು ಹೇಗೆ?

ಶುಕ್ಲ ಪಕ್ಷ-ಕೃಷ್ಣ ಪಕ್ಷ ಪ್ರಾರಂಭವಾಗಿದ್ದು ಹೇಗೆ? ಮಾಸಗಳನ್ನು ಎರಡು ಭಾಗವಾಗಿ ವಿಂಗಡಿಸಿರುವುದು ಎಲ್ಲರಿಗೂ ತಿಳಿದಿರುವಂಥದ್ದೇ. ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಇವೇ ಆ ಎರಡು ಭಾಗಗಳು. ಅಮಾವಾಸ್ಯೆಯ ಮರುದಿನದಿಂದ ಹುಣ್ಣಿಮೆಯವರೆಗಿನ ಅವಧಿಯನ್ನು ಶುಕ್ಲ ಪಕ್ಷ ಎಂದು ಕರೆದರೆ, ಹುಣ್ಣಿಮೆಯ ಮರುದಿನದಿಂದ ಅಮಾವಾಸ್ಯೆಯವರೆಗಿನ ಕಾಲವನ್ನು ಕೃಷ್ಣಪಕ್ಷ ಎಂದು ಕರೆಯುತ್ತಾರೆ. ಶುಕ್ಲ ಪಕ್ಷದಲ್ಲಿ ಜನಿಸಿದ ವ್ಯಕ್ತಿಗಳ ಬುದ್ಧಿ ಅತಿ ಚುರುಕಾಗಿರುತ್ತದೆ ಹಾಗೂ ಕೃಷ್ಣ ಪಕ್ಷದಲ್ಲಿ ಹುಟ್ಟಿದವರು ಮಂದಬುದ್ಧಿಯವರಾಗಿರುತ್ತಾರೆ ಎಂಬ ನಂಬಿಕೆಯೂ ಇದೆ. ಶುಭ ಕಾರ್ಯಗಳನ್ನು ಶುಕ್ಲ ಪಕ್ಷದಲ್ಲಿ ಮಾಡಬೇಕು ಎಂದು ಶಾಸ್ತ್ರದಲ್ಲಿ ಹೇಳಿದೆ. ಈ ಪಕ್ಷಗಳು ಹೇಗೆ ಉಂಟಾದವು ? ಇದಕ್ಕೂ ಒಂದು ಕಾರಣವಿದೆ. ದಕ್ಷ ಪ್ರಜಾಪತಿಗೆ ಅಶ್ವಿನಿ, ಭರಣಿಯೇ ಮೊದಲಾದ ಇಪ್ಪತ್ತೇಳು ಜನ ಹೆಣ್ಣುಮಕ್ಕಳಿದ್ದರು. ಅವರನ್ನು ಸ್ಫುರದ್ರೂಪಿಯಾಗಿದ್ದ ಚಂದ್ರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆ ಇಪ್ಪತ್ತೇಳು ಹೆಣ್ಣುಮಕ್ಕಳಲ್ಲಿ ರೋಹಿಣಿ ಅತ್ಯಂತ ಸುಂದರವಾಗಿದ್ದಳು. ಹೀಗಾಗಿ ಚಂದ್ರನೂ ಅವಳನ್ನೇ ಹೆಚ್ಚು ಪ್ರೀತಿಸುತ್ತ ಉಳಿದವರನ್ನು ನಿರ್ಲಕ್ಷ್ಯ ಮಾಡುತ್ತಿದ್ದ. ಇದರಿಂದ ನೊಂದ ಉಳಿದ ಹೆಣ್ಣುಮಕ್ಕಳೆಲ್ಲ ಚಂದ್ರನ ವಿರುದ್ಧ ತಮ್ಮ ತಂದೆಯಾದ ದಕ್ಷನಿಗೆ ದೂರು ಕೊಟ್ಟರು. ದಕ್ಷನು ಚಂದ್ರನನ್ನು ಕರೆಸಿ ಎಲ್ಲ ಹೆಂಡತಿಯನ್ನು ಒಂದೇ ಸಮನಾಗಿ ಕಾಣಬೇಕೆಂದು ಆದೇಶಿಸಿದ. ಆದರೆ ಚಂದ್ರನು ಅದಕ್ಕೆ ಬೆಲೆಯನ್ನೇ ಕೊಡಲಿಲ್ಲ. ಆಗ ದಕ್ಷನು ಕೋಪಗೊಂಡ ದಕ್ಷನು 'ನೀನು ತುಂಬ ರೂಪವಂತ ಎಂದು ಸೊಕ್ಕಿದೆ. ನಿನ್ನ ಈ ಸುಂದರವಾದ ಕಾಯ ಕ್ಷಯವಾಗಿ ಹೋಗಲಿ' ಎಂದು ಚಂದ್ರನನ್ನು ಶಪಿಸಿದ. ಚಂದ್ರನು ಈ ಶಾಪಕ್ಕೆ ಹೆದರಿ, ಇದರ ಪರಿಹಾರ ಹೇಗೆ ಎಂದು ಬ್ರಹ್ಮನ ಬಳಿಗೆ ಹೋದ. 'ನೀನು ಶಿವನನ್ನು ಆರಾಧಿಸಿದರೆ ನಿನ್ನ ಶಾಪ ವಿಮೋಚನೆ ಆಗಬಹುದು' ಎಂದು ಬ್ರಹ್ಮ ಸಲಹೆ ಕೊಟ್ಟ. ಚಂದ್ರನು ಹಲವಾರು ವರ್ಷಗಳ ಕಾಲ ಶಿವನನ್ನು ಕುರಿತು ಘೋರವಾದ ತಪಸ್ಸು ಮಾಡಿದ. ದಯಾಮಯಿಯಾದ ಶಿವ ಪ್ರತ್ಯಕ್ಷವಾಗಿ 'ದಕ್ಷನ ಶಾಪವನ್ನು ಸಂಪೂರ್ಣವಾಗಿ ವಿಮೋಚನೆ ಮಾಡಲು ಆಗುವುದಿಲ್ಲ. ಆದರೆ ನೀನು ತಿಂಗಳಲ್ಲಿ 15 ದಿನಗಳ ಕಾಲ ಕ್ಷಯಿಸುವೆ. ಅದನ್ನು ಕೃಷ್ಣ ಪಕ್ಷ ಎಂದು ಕರೆಯುವಂತಾಗಲಿ. ನನ್ನ ವರದಿಂದ ನೀನು ಉಳಿದ 15 ದಿನಗಳು ವೃದ್ಧಿಗೊಳ್ಳುವೆ. ಅದನ್ನು ಶುಕ್ಲಪಕ್ಷವೆಂದೂ ಕರೆಯುವಂತೆ ಆಗಲಿ ಎಂದು ವರ ಕೊಟ್ಟನು. ಅಲ್ಲಿಂದ ಈ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಪ್ರಾರಂಭವಾಯಿತು

ಅಯನ, ಮಾಸ, ದಿನ

ಅಯನ, ಮಾಸ, ದಿನ * ಡಾ. ಎಸ್.ಎನ್. ಶೈಲೇಶ್ ಸಾಮಾನ್ಯವಾಗಿ ಎಲ್ಲರೂ ಆಯನಗಳು, ಮಾಸಗಳ ಬಗೆಗೆಲ್ಲ ಮಾತನಾಡುತ್ತಿರುತ್ತಾರೆ. ಇವು ಯಾವುವು ? ಯಾವಾಗ ಬರುತ್ತವೆ ಇತ್ಯಾದಿಗಳ ಕುರಿತ ವಿವರಣೆ ಇಲ್ಲಿದೆ. ಆಯನಗಳು: ಸೂರ್ಯನ ಸಂಚಾರವನ್ನು ಆಧರಿಸಿ ಏರ್ಪಡುವುದೇ ಆಯನಗಳು. ಇವುಗಳಲ್ಲಿ ಎರಡು ವಿಧ. ಉತ್ತರಾಯಣ ಹಾಗೂ ದಕ್ಷಿಣಾಯಣ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶವಾದ ದಿನವನ್ನು ಸಂಕ್ರಮಣ ಎಂದು ಕರೆಯುತ್ತಾರೆ. ಸೂರ್ಯನು ಮೇಷ ರಾಶಿಗೆ ಬಂದಾಗ ಮೇಷ ಸಂಕ್ರಮಣ ಎಂದು ಕರೆಯುತ್ತಾರೆ. ಹಾಗೆಯೇ ವೃಷಭ ರಾಶಿಗೆ ಬಂದಾಗ ವೃಷಭ ಸಂಕ್ರಮಣ, ಮಿಥುನಕ್ಕೆ ಬಂದಾಗ ಮಿಥುನ ಸಂಕ್ರಮಣ, ಮಕರ ರಾಶಿಗೆ ಬಂದಾಗ ಮಕರ ಸಂಕ್ರಮಣ ಎಂದು ಕರೆಯುತ್ತಾರೆ. ಮಕರ ಸಂಕ್ರಮಣ ಬಂದ ದಿನಕ್ಕೆ 'ಮಕರ ಸಂಕ್ರಾಂತಿ' ಎಂದು ಕರೆಯುತ್ತಾರೆ. ಇಲ್ಲಿ ಸೂರ್ಯ ಸಂಕ್ರಮಣ ಬರುವ ಮುಂಚೆ ಹಾಗೂ ಎರಡು ದಿನ ಕಳೆದ ಮೇಲೆ ಶುಭ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಸೂರ್ಯನು ಮಕರ, ಕುಂಭ, ಮೀನ, ಮೇಷ, ವೃಷಭ, ಮಿಥುನ ರಾಶಿಗಳಲ್ಲಿ ಸಂಚರಿಸಿದಾಗ ಉತ್ತರಾಯಣ ಪುಣ್ಯಕಾಲ ಎಂದು ಕೂಡ ಕರೆಯುತ್ತಾರೆ. ಇನ್ನು ಸೂರ್ಯನು ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ಹಾಗೂ ಧನಸ್ಸು ರಾಶಿಗಳಲ್ಲಿ ಸಂಚರಿಸಿದಾಗ ದಕ್ಷಿಣಾಯಣ ಎಂದು ಕರೆಯುತ್ತಾರೆ. ತಿಂಗಳುಗಳು : ಇಂಗ್ಲಿಷ್ ತಿಂಗಳುಗಳು ಜನವರಿಯಿಂದ ಪ್ರಾರಂಭವಾಗುತ್ತವೆ. ಹಾಗೆಯೇ ನಮ್ಮ ಹಿಂದೂ ಮಾಸಗಳು ಪ್ರಾರಂಭವಾಗುವುದು ಚೈತ್ರ ಮಾಸದಿಂದ. ಚೈತ್ರ, ವೈಶಾಖ, ಜ್ಯೀಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಈ ಹನ್ನೆರಡು ನಮ್ಮ ಹಿಂದೂ ಮಾಸಗಳು. ಪ್ರತಿ ತಿಂಗಳು ಯಾವ ದಿನ ಯಾವ ನಕ್ಷತ್ರಕ್ಕೆ ಹುಣ್ಣಿಮೆ ತಿಥಿ ಬರುತ್ತಿದೆಯೋ ಆ ನಕ್ಷತ್ರದ ಹೆಸರಿನಲ್ಲಿ ಆಯಾ ತಿಂಗಳುಗಳ ಹೆಸರುಗಳು ಬರುತ್ತದೆ. ಹುಣ್ಣಿಮೆಯ ದಿನ ಚಂದ್ರನು ಚಿತ್ತಾ ನಕ್ಷತ್ರದಲ್ಲಿ ಸಂಚರಿಸುವುದರಿಂದ ಮೊದಲ ತಿಂಗಳನ್ನು ಚೈತ್ರಮಾಸ ಎಂದು ಕರೆಯುತ್ತಾರೆ. ಅದೇ ತರಹ ವೈಶಾಖ ಮಾಸದಲ್ಲಿ ಹುಣ್ಣಿಮೆಯ ದಿನ ವಿಶಾಖ ನಕ್ಷತ್ರವಿರುತ್ತದೆ. ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನ ಜ್ಯೇಷ್ಠಾ ನಕ್ಷತ್ರದಲ್ಲಿ ಚಂದ್ರನಿರುತ್ತಾನೆ. ಚಂದ್ರನು ಆಷಾಢ ಮಾಸದ ಹುಣ್ಣಿಮೆಯ ದಿನ ಪೂರ್ವಾಷಾಢ ಅಥವಾ ಉತ್ತರಾಷಾಢ ನಕ್ಷತ್ರದಲ್ಲಿರುತ್ತಾನೆ. ಶ್ರಾವಣ ಮಾಸದ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರದಲ್ಲಿ, ಭಾದ್ರಪದ ಮಾಸದಲ್ಲಿ ಪೂರ್ವಾಭಾದ್ರ ನಕ್ಷತ್ರದಲ್ಲಿ, ಅಶ್ವಯಜದಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಚರಿಸುತ್ತಿರುತ್ತಾನೆ. ಕೃತ್ತಿಕಾ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಅದು ಕಾರ್ತಿಕ ಮಾಸ. ಮೃಗಶಿರ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಅದು ಮಾರ್ಗಶಿರ ಮಾಸ. ಪುಷ್ಯ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಮಾರ್ಗಶಿರ, ಪುಷ್ಯ ನಕ್ಷತ್ರದಲ್ಲಿ ಹುಣ್ಣಿಮೆ ಬಂದರೆ ಪುಷ್ಯ, ಮಘಾ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಮಾಘಮಾಸ ಹಾಗೂ ಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆ ಬಂದಾಗ ಅದು ಫಾಲ್ಗುಣ ಮಾಸವಾಗಿರುತ್ತದೆ. ಚಂದ್ರನ ಸಂಚಾರದ ಆಧಾರದಿಂದ ಆಯಾ ತಿಂಗಳು ಖಚಿತವಾಗಿ ಏರ್ಪಟ್ಟಿತು. ಇನ್ನು ದಿನಗಳು ಏಳು. ಅಂದರೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ, ಈ ಏಳು ದಿನಗಳು ದೇವತೆಗಳಿಗೆ ಅನುಸಾರವಾಗಿ ಹೆಸರುಗಳನ್ನು ನೀಡಿದೆ ಎಂದು ಜ್ಯೋತಿಷ್ಯ ಶಾಸ್ತ್ರವು ತಿಳಿಸುತ್ತದೆ. ಆಯಾ ದಿನಕ್ಕೆ ಸಂಬಂಧಿಸಿದಂತೆ ಸೂರ್ಯೋದಯದ ಸಮಯದಲ್ಲಿ ಸೂರ್ಯನು ಇದ್ದುದರಿಂದ ಭಾನುವಾರ ಎಂದು ಕರೆಯಲಾಯಿತು. ಹೀಗೆ ಸೂರ್ಯೋದಯ ಸಮಯದಲ್ಲಿ ಚಂದ್ರನು ಇದ್ದುದರಿಂದ ಸೋಮವಾರವಾಯಿತು. ಹೀಗೆಯೇ ಅಂಗಾರಕ, ಬುಧ, ಗುರು, ಶುಕ್ರ ಹಾಗೂ ಶನಿ ಗ್ರಹಗಳು ಆಯಾ ದಿನದ ಸೂರ್ಯೋದಯದ ಸಮಯದಲ್ಲಿ ಇದ್ದ ಕಾರಣ ಆಯಾ ವಾರಗಳು ಎಂದು ಹೆಸರಿಸಲಾಯಿತು. ಹಣಕಾಸಿನ ಯೋಗ ಯಾರಿಗೆ? ಹರಿಶ್ಚಂದ್ರ ಪಿ. ಸಾಲಿಯಾನ್ ಹಣ ಸಂಪಾದನೆಗೆ ನಾನಾ ದಾರಿಗಳಿವೆ. ಇದಕ್ಕೆ ಅವರವರ ಕುಂಡಲಿಯಲ್ಲಿರುವ ಗ್ರಹಗತಿಗಳೇ ಕಾರಣ. ಜನ್ಮಕುಂಡಲಿಯ ದ್ವಿತೀಯ ಭಾವದ ಮೂಲಕ; ಯಾವ ರೀತಿಯಿಂದ ಧನ ಸಂಪಾದನೆ ಮಾಡುತ್ತಾರೆ, ಯಾವ ರೀತಿ ಸಮಾಜದಲ್ಲಿ ಶ್ರೀಮಂತರಾಗುತ್ತಾರೆ ಎಂಬ ವಿಷಯವನ್ನು ತಿಳಿಯಬಹುದು. ಬುಧ, ಶುಕ್ರ ಗ್ರಹಗಳು ಧನಸ್ಥಾನದಲ್ಲಿದ್ದರೆ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆಯ ಮೂಲಕ ಒಳ್ಳೆಯ ಸಂಪಾದನೆಯನ್ನು ಪಡೆಯುತ್ತಾರೆ. ಒಂಭತ್ತನೆ ಸ್ಥಾನದ ಅಧಿಪತಿ ರವಿಯು ಧನಸ್ಥಾನದಲ್ಲಿ ಕೂಡಿದರೆ ಇಂತಹವರಿಗೆ ಹಿರಿಯರ ಆಸ್ತಿ, ಧನ ಪ್ರಾಪ್ತಿಯಾಗುತ್ತದೆ. ಚಂದ್ರನು ಶುಭಗ್ರಹಗಳ ದೃಷ್ಟಿ, ಶುಕ್ರ ಶುಭಗ್ರಹಗಳೊಂದಿಗೆ ಧನಸ್ಥಾನದಲ್ಲಿ ಇದ್ದರೆ ಇವರಿಗೆ ತನ್ನ ತಾಯಿಯಿಂದ, ತಾಯಿಯ ಕಡೆಯಿಂದ ಹಣಕಾಸು ಸಿಗುತ್ತದೆ. ಕರ್ಮಾಧಿಪತಿಯ ಜತೆಗೆ ಅಂಗಾರಕನು ಸೇರಿದ್ದರೆ ಇವರಿಗೆ ತನ್ನ ಒಡಹುಟ್ಟಿದ ಸಹೋದರರಿಂದ ಧನಪ್ರಾಪ್ತಿಯಾಗುತ್ತದೆ.ಪಂಚಮದ ಅಧಿಪತಿಯೊಂದಿಗೆ ಗುರುವು ಧನಸ್ಥಾನದಲ್ಲಿ ಇದ್ದರೆ ಇಂತಹವರಿಗೆ ತನ್ನ ಪುತ್ರರಿಂದ ಧನಲಾಭವಾಗುತ್ತದೆ. ಕರ್ಮಾಧಿಪತಿಯು ದ್ವಿತೀಯದಲ್ಲಿ ಶುಕ್ರನೊಂದಿಗಿದ್ದರೆ ತನ್ನ ಹೆಂಡತಿಯಿಂದ ಧನಲಾಭವಾಗುತ್ತದೆ. ಷಷ್ಟಮಾಧಿಪತಿಯು ರಾಹುವಿನೊಂದಿಗೆ ಧನಸ್ಥಾನದಲ್ಲಿ ಕೂಡಿದ್ದರೆ ಕಳ್ಳರಿಂದ, ಶತ್ರುಗಳಿಂದ ಧನಲಾಭ ಉಂಟಾಗುತ್ತದೆ. ಲಗ್ನದಿಂದ ದ್ವಿತೀಯದಲ್ಲಿ ಬುಧನು ಪಾಪಗ್ರಹದೊಂದಿಗೆ ಇದ್ದು, ಇದಕ್ಕೆ ಚಂದ್ರನ ದೃಷ್ಟಿ ಇದ್ದರೆ ಇಂಥವರಿಗೆ ಹಣ ಸಂಪಾದಿಸಲು ಕಷ್ಟವಾಗುತ್ತದೆ. ರವಿಯು ಯಾವುದೇ ಪಾಪಗ್ರಹಗಳ ದೃಷ್ಟಿ ಇಲ್ಲದೆ ಧನಸ್ಥಾನದಲ್ಲಿ ಇದ್ದರೆ ಇವರಿಗೆ ಒಂದರ ಮೇಲೊಂದರಂತೆ ಬಹಳ ಸಂಪತ್ತು ಬರುತ್ತದೆ. ಧನಸ್ಥಾನದಲ್ಲಿ ಚಂದ್ರನಿಗೆ ಬುಧನ ದೃಷ್ಟಿ ಇದ್ದರೆ ಇಂತಹವರು ಸ್ವಪ್ರಯತ್ನದಿಂದ ಹಣವನ್ನು ಸಂಪಾದಿಸುತ್ತಾರೆ. ಲಗ್ನಾಧಿಪತಿಯು ದ್ವಿತೀಯದಲ್ಲಿ ಮತ್ತು ದ್ವಿತೀಯದ ಅಧಿಪತಿಯು ಏಕಾದಶದಲ್ಲಿ ಅಥವಾ ಏಕಾದಶದ ಅಧಿಪತಿಯು ಲಗ್ನದಲ್ಲಿದ್ದರೆ ಇವರು ಬಹಳ ಸಂಪತ್ತನ್ನು ಸಂಪಾದಿಸುತ್ತಾರೆ. ದ್ವಿತೀಯದ ಅಧಿಪತಿಯು ಉಚ್ಚವಾಗಿ ಕೇಂದ್ರಸ್ಥಾನವಾಗಿದ್ದರೆ ಲಗ್ನಾಧಿಪತಿಯು ಬಲಯುತನಾಗಿದ್ದರೆ ಮತ್ತು ದ್ವಿತೀಯಾಧಿಪತಿ ಇರುವ ಸ್ಥಾನದ ಅಧಿಪತಿ ಕೇಂದ್ರದಲ್ಲಿದ್ದರೆ ವ್ಯಕ್ತಿಯು ಸಂಪತ್ತು ಹೊಂದಿ ರಾಜಯೋಗವನ್ನು ಪಡೆಯುತ್ತಾನೆ. ಗುರು, ಶುಕ್ರ ಅಥವಾ ಬುಧ ದ್ವಿತೀಯದಲ್ಲಿ ಉಚ್ಚನಾಗಿದ್ದರೆ ವ್ಯಕ್ತಿಯು ಧನಿಕನಾಗಿ ಹಲವರನ್ನು ಸಲಹುತ್ತಾನೆ. ದ್ವಿತೀಯದ ಅಧಿಪತಿಯು ತೃತೀಯಾಧಿಪತಿಯ ಸಂಗಡ ತೃತೀಯದಲ್ಲಿ ಇದ್ದರೆ ಇವರಿಗೆ ಹಣಕಾಸಿನ ಅಭಿವೃದ್ಧಿಯಾಗುತ್ತದೆ. ದ್ವಿತೀಯದ ಅಧಿಪತಿಯು ಚತುರ್ಥದ ಅಧಿಪತಿಯ ಸಂಗಡ ಚತುರ್ಥದಲ್ಲಿದ್ದರೆ ಇವರು ಆಸ್ತಿ, ವಾಹನ, ಹಣಕಾಸಿನ ಅಭಿವೃದ್ಧಿಯನ್ನು ಹೊಂದುತ್ತಾರೆ.