Tuesday, July 3, 2012
ಯಾವ ದಾನ ಮಾಡಿದರೆ ಯಾವ ಫಲ?
ಯಾವ ದಾನ ಮಾಡಿದರೆ ಯಾವ ಫಲ? - ಟಿ.ಎನ್.ಸರೋಜಾ ನಂಜುಡಸ್ವಾಮಿ
ದಾನದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ. ಅನೇಕ ಬಗೆಯ ದಾನಗಳನ್ನು ನಾವು ಗುರುತಿಸಬಹುದು. ಬನ್ನಿ, ಜೋತಿಷ್ಯದಂತೆ ಯಾವ ದಾನದಿಂದ ಯಾವ ರೀತಿಯ ಲಾಭವಾಗುತ್ತದೆ ಎಂದು ನೋಡೋಣ.
1,ಅನ್ನ ದಾನ ಮಾಡಿದರೆ: ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ. 2.ವಸ್ತು ದಾನ ಮಾಡಿದರೆ ಆಯುಷ್ಯ ಹೆಚ್ಚುತ್ತದೆ.
3.ಜೇನು ತುಪ್ಪ ದಾನಮಾಡಿದರೆ: ಪುತ್ರ ಭಾಗ್ಯ ಕಾಣಿಸುತ್ತದೆ. 4.ದೀಪ ದಾನಮಾಡಿದರೆ ಕಣ್ಣು ಚನ್ನಾಗಿ ಕಾಣಿಸುತ್ತದೆ.
5.ಅಕ್ಕಿ ದಾನಮಾಡಿದರೆ ಪಾಪ ಪರಿಹಾರವಾಗುತ್ತದೆ. 6.ತುಪ್ಪ ದಾನಮಾಡಿದರೆ ರೋಗ ನಿವಾರಣೆಯಾಗುತ್ತದೆ.
7. ಹಾಲು ದಾನಮಾಡಿದರೆ ದುಖಃ ತೀರುತ್ತದೆ. 8. ಮೊಸರು ದಾನಮಾಡಿದರೆ ಇಂದ್ರಿಯಗಳು ವೃದ್ಧಿಯಾಗುತ್ತವೆ.
9.ಹಣ್ಣು ಗಳನ್ನು ದಾನಮಾಡಿದರೆ ಬುದ್ಧಿ,ಸಿದ್ಧಿಯು ಲಭಿಸುತ್ತದೆ. 10.ಬಂಗಾರ ದಾನಮಾಡಿದರೆ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ.
11.ಬೆಳ್ಳಿ ದಾನಮಾಡಿದರೆ ಮನಸ್ಸಿನಚಿಂತೆ ನೀಗುತ್ತದೆ. 12.ಹಸು(ಗೋವು) ದಾನಮಾಡಿದರೆ ಖುಷಿ,ದೇವರುಗಳು,ಪಿತೃಗಳಿಂದ ವಿಮೋಚನೆ
13.ತೆಂಗಿನಕಾಯಿ ದಾನಮಾಡಿದರೆ ನೆನೆದ ಕಾರ್ಯ ಸಿದ್ಧಿಸುತ್ತದೆ. 14. ನೆಲ್ಲಿಕಾಯಿ ದಾನಮಾಡಿದರೆ ಜ್ಞಾನ ದಕ್ಕುತ್ತದೆ.
15. ಭೂಮಿ ದಾನಮಾಡಿದರೆ ಈಶ್ವರ ದರ್ಶನವಾಗುತ್ತದೆ.
ಚಾತುರ್ಮಾಸ್ಯ ಆಚರಣೆ ಸುತ್ತ
ಇಂದಿನಿಂದ ಚಾತುರ್ಮಾಸ್ಯ ಆರಂಭವಾಗಿದೆ. ಪ್ರತಿ ವರ್ಷ ಚಾತುರ್ಮಾಸ್ಯ ವ್ರತ ಪ್ರಾರಂಭ ಆಗುವುದು ಆಷಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆ ದಿನ. ಅಂದು ವೇದ ವ್ಯಾಸ ಮುನಿಗಳ ಪೂಜೆ ಮಾಡಿ ಪೀಠಾಧಿಪತಿಗಳು, ಯತಿಗಳು, ಸಾಧು ಸನ್ಯಾಸಿಗಳು ಈ ಚಾತುರ್ಮಾಸ್ಯ ವ್ರತ ಪ್ರಾರಂಭಿಸುತ್ತಾರೆ. ಚಾತುರ್ಮಾಸ್ಯ ಎಂದರೆ ನಾಲ್ಕು ಮಾಸಗಳು ಎಂದರ್ಥ.
* ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.
ಸಾಧು ಸನ್ಯಾಸಿಗಳು ಒಂದೇ ಜಾಗದಲ್ಲಿ ಅಂದರೆ ಒಂದೇ ಊರಿನಲ್ಲಿ ಮೂರು ದಿನಕ್ಕಿಂತ ಹೆಚ್ಚು ವಾಸಿವಾಗಿರಬಾರದು ಎಂಬ ನಿಯಮವಿದೆ. ಕಾರಣ ಹೆಚ್ಚು ದಿನ ಅಲ್ಲಿ ಇದ್ದರೆ ಅಲ್ಲಿನ ಜನರ ಮೇಲೆ ಮೋಹ ಬೆಳೆದು ಅದೇ ಜಾಗದಲ್ಲಿ ಇರುವ ಆಸೆ ಬರುವುದು ಎಂದು. ಆದ್ದರಿಂದ ಸನ್ಯಾಸಿಗಳು ಯಾವಾಗಲೂ ಸಂಚಾರದಲ್ಲಿರಬೇಕು. ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕು ಮತ್ತು ಜನ ಸಮೂಹಕ್ಕೆ ಧರ್ಮ ಮತ್ತು ಅಧ್ಯಾತ್ಮಿಕ ವಿಷಯ ಬೋಧಿಸಬೇಕು. ಧರ್ಮ ಪಾಲನೆಯಲ್ಲಿರಬೇಕು ಎಂಬ ನಿಯಮಗಳಿವೆ. ಹಿಂದಿನ ಕಾಲದಲ್ಲಿ ಸನ್ಯಾಸಿಗಳು ಹೆಚ್ಚಾಗಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು. ಶಂಕರಾಚಾರ್ಯರು ನಾಲ್ಕು ಬಾರಿ ಕಾಲ್ನಡಿಗೆಯಲ್ಲೇ ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ ಧರ್ಮ ಬೋಧನೆ ಮಾಡಿರುವ ವಿಚಾರ ಅವರ ಜೀವನ ಚರಿತ್ರೆಯಲ್ಲಿದೆ.
ಮಳೆಗಾಲದಲ್ಲಿ ಕ್ರಿಮಿ ಕೀಟಗಳು, ಹಾವುಗಳು, ಚಿಕ್ಕ ಪುಟ್ಟ ಪ್ರಾಣಿಗಳು ಹೆಚ್ಚುತ್ತವೆ. ಆ ಸಮಯದಲ್ಲಿ ಸನ್ಯಾಸಿಗಳು ಸಂಚರಿಸಿದರೆ ಅವುಗಳಿಗೆ ಪ್ರಾಣಿ ಹಿಂಸೆ ಮಾಡಿದ ಹಾಗೆ ಆಗುವುದು ಹಾಗೂ ಮಳೆಯೂ ಮತ್ತು ಗಾಳಿ ಹೆಚ್ಚು ಇರುವುದರಿಂದ ಸಂಚರಿಸುವುದು ಕಷ್ಟ. ಈ ಉದ್ದೇಶಕ್ಕಾಗಿ ನಾಲ್ಕು ತಿಂಗಳ ಕಾಲ ಸಂಚಾರ ನಿಲ್ಲಿಸಿ ಒಂದೇ ಸ್ಥಳದಲ್ಲಿ (ಒಂದೇ ಊರಿನಲ್ಲಿ) ಅಂದರೆ ಮಠ, ಆಶ್ರಮ, ಮಂದಿರಗಳಲ್ಲಿ ಇದ್ದು ಅಧ್ಯಾತ್ಮಿಕ ಸಾಧನೆ ಮಾಡಿ ಅಲ್ಲಿನ ಭಕ್ತರಿಗೆ ಭಗವಂತನ ಉಪದೇಶ ನೀಡುವುದು ಒಂದು ಉದ್ದೇಶ. ಅಲ್ಲದೇ ಯತಿಗಳಿಗೆ ಅಧ್ಯಾತ್ಮಿಕ ಅಂತರಂಗ ಶಕ್ತಿ ಹೆಚ್ಚಿಸಿಕೊಳ್ಳುವ ಇದೊಂದು ಅವಕಾಶ. ಆಷಾಡ ಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತನಕ ಮಹಾ ವಿಷ್ಣುವು ಯೋಗ ನಿದ್ರೆಯಲ್ಲಿರುತ್ತಾನೆ ಎಂಬ ಪ್ರತೀತಿಯಿದೆ. ಈ ಸಮಯದಲ್ಲಿ ಸಾಧು ಸನ್ಯಾಸಿಗಳು ಯತಿಗಳು ಅಂತರ್ಮುಖಿಗಳಾಗಿ ಅಧ್ಯಾತ್ಮಕ್ಕೆ ಹೆಚ್ಚು ಗಮನ ನೀಡುವುದೇ ಈ ಚಾತುರ್ಮಾಸ್ಯದ ಮುಖ್ಯ ಉದ್ದೇಶ.
ಸಾಧು ಸನ್ಯಾಸಿಗಳು ಚಾತುರ್ಮಾಸ್ಯದಲ್ಲಿ ಪಾಲಿಸಬೇಕಾದ ನಿಯಮಗಳು
* ಚಾತುರ್ಮಾಸ್ಯದ ಸಮಯದಲ್ಲಿ ಯತಿಗಳು ಸಾಧು ಸನ್ಯಾಸಿಗಳು ಕೇಶ ಮುಂಡನ ಮಾಡಿಕೊಳ್ಳಬಾರದು. * ದಿನಕ್ಕೆ ಒಂದು ಹೊತ್ತು ಊಟ ಮಾಡಬೇಕು.
* ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬಾರದು. * ಒಂದೊಂದು ಮಾಸ(ತಿಂಗಳಲ್ಲಿ)ದಲ್ಲಿ ಒಂದೊಂದು ಆಹಾರವನ್ನು ತ್ಯಜಿಸಬೇಕು. ಉದಾಹರಣೆಗೆ, ಉಪ್ಪು, ಖಾರ, ಸಿಹಿ, ಹುಳಿ. * ಪ್ರತಿ ದಿನ ಗೀತೆ, ಉಪನಿಷತ್, ಸ್ಮೃತಿ ಪುರಾಣಗಳು ಅಧ್ಯಯನ ಮಾಡುವುದು.
ಹಿಂದೂ ಪಂಚಾಂಗದ ರೀತಿಯಲ್ಲಿ ಆರು ಋತುಗಳಾದ ವರ್ಷ ಋತು, ಶರದ್ ಋತು, ಹೇಮಂತ ಋತು, ಶಿಶಿರ ಋತು, ವಸಂತ ಋತು, ಗ್ರೀಷ್ಮ ಋತು. ಚಾತುರ್ಮಾಸ್ಯ ವ್ರತದಲ್ಲಿ ಗ್ರೀಷ್ಮ ಋತು, ವರ್ಷ ಋತು ಮತ್ತು ಶರದ್ ಋತು ಬರುತ್ತವೆ. ಈ ಋತುಗಳ ಸಮಯದಲ್ಲಿ ಮೈಕೈ ನೋವು ಕಾಲುಗಳು ಒಡೆಯುವುದು, ಗಂಟಲು ನೋವು, ಶೀತ, ಜ್ವರ ಬರುವ ಸಾಧ್ಯತೆಗಳು ಹೆಚ್ಚು. ಈ ಕಾರಣಕ್ಕಾಗಿ ಸನ್ಯಾಸಿಗಳು 1ನೇ ತಿಂಗಳು ಬೇಳೆಯನ್ನು ಸೇವಿಸಬಾರದು. 2ನೇ ತಿಂಗಳು ಮೊಸರು, 3ನೇ ತಿಂಗಳಲ್ಲಿ ಹಾಲು ಮತ್ತು 4ನೇ ತಿಂಗಳಲ್ಲಿ ಕಾಳುಗಳು, ತರಕಾರಿ ಸೇವಿಸಬಾರದು ಎಂಬ ನಿಯಮ ಇದೆ. ಈ ಚಾತುರ್ಮಾಸ್ಯವನ್ನು ಸನ್ಯಾಸಿಗಳಲ್ಲದೆ ಬ್ರಹ್ಮಚಾರಿ ಗೃಹಸ್ಥರೂ ಆಚರಿಸಬಹುದು.
ಈ ಚಾತುರ್ಮಾಸ್ಯ ವ್ರತವು ಸಾವಿರಾರು ವರ್ಷಗಳಿಂದಲೂ ಆಚರಣೆಯಲ್ಲಿದೆ. ಈಗಲೂ ಸಹ ಸಾಧು ಸಂತರುಗಳು ಲೋಕ ಕಲ್ಯಾಣಕ್ಕಾಗಿ ಈ ವ್ರತವನ್ನು ಆಚರಿಸುವರು. ಈ ವ್ರತವನ್ನು ಆಚರಿಸಲು ದಕ್ಷಿಣ ಭಾರತದ ಯತಿಗಳು ಹಿಮಾಲಯಕ್ಕೆ ಹೋಗುವರು. ನಾನು ಹಿಮಾಲಯದಲ್ಲಿ ಸಾಧನೆಯಲ್ಲಿದ್ದಾಗ ನಮ್ಮ ಕರ್ನಾಟಕದ ಯತಿಗಳು ಆ ಸಮಯದಲ್ಲಿ ಭೇಟಿ ಆಗಿದ್ದೆ. ಈ ವ್ರತವು ಎರಡು ತಿಂಗಳಿಗೆ ನಿಗದಿಯಾಗಿರುವುದು ಇತ್ತೀಚಿಗೆ. ಸನ್ಯಾಸಿಗಳು ಅವರ ಮಠದಲ್ಲಿಯೇ ಆಚರಿಸಬೇಕು ಎಂಬ ನಿಯಮ ಇಲ್ಲ.
Subscribe to:
Post Comments (Atom)
No comments:
Post a Comment