Tuesday, July 3, 2012
ಸೌಂದರ್ಯ ವರ್ಧನೆಗೆ ಉಷ್ಟ್ರಾಸನ*
ಸೌಂದರ್ಯ ವರ್ಧನೆಗೆ ಉಷ್ಟ್ರಾಸನ* ನಂದಿನಿ ಪ್ರಸಾದ್
ಮಹಿಳೆಯರ ಆಸನಗಳಲ್ಲಿ ಅತ್ಯಂತ ಪ್ರಮುಖ, ಪ್ರತಿದಿನ ಮಾಡಲೇಬೇಕಾದ ಆಸನವೆಂದರೆ 'ಉಷ್ಟ್ರಾಸನ ' ಅಥವಾ 'ಸೌಂದರ್ಯ' ಆಸನ. ಇದು ಅತ್ಯಂತ ಸರಳವಾದುದು. ಈ ಆಸನ ಆಚರಿಸುವಾಗ ಶರೀರದ ಭಂಗಿಯು ಒಂಟೆಯಂತೆ, ಉಷ್ಟ್ರ ಪಕ್ಷಿಯಂತೆ ಕಾಣಿಸುತ್ತದೆ. ಆದ್ದರಿಂದ ಉಷ್ಟ್ರಾಸನ ಎಂದೂ ಇದನ್ನು ಕರೆಯುವರು. ಇದರಿಂದ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ. ಆದುದರಿಂದ 'ಸೌಂದರ್ಯ' ಆಸನವೆಂತಲೂ ಇದನ್ನು ಕರೆಯುತ್ತಾರೆ.
ಮಾಡುವ ವಿಧಾನ
ನೆಲದ ಮೇಲೆ ಹಾಸಿರುವ ದಪ್ಪ ವಸ್ತ್ರದ ಮೇಲೆ ಕಾಲುಗಳನ್ನು ಮಡಚಿಕೊಂಡು ಮೊಣಕಾಲುಗಳ ಮೇಲೆ ನಿಂತುಕೊಂಡು ಮೆಲ್ಲಗೆ ಹಿಂದಕ್ಕೆ ಬಗ್ಗಿ ಕಾಲಿನ ಬೆರಳುಗಳನ್ನು ಕೈಬೆರಳುಗಳಿಂದ ಹಿಡಿದುಕೊಳ್ಳಿ. ಕಾಲು ಹಿಡಿದುಕೊಂಡರೆ ಉಷ್ಟ್ರಸನವಾಗುತ್ತದೆ. ಇಲ್ಲವಾದರೆ ಅರ್ಧ ಉಷ್ಟ್ರಸನವಾಗುತ್ತದೆ. ತಲೆ ಮೇಲ್ಮುಖವಾಗಿರಲಿ, ಇದೇ ಭಂಗಿಯಲ್ಲಿ 5-6 ಸೆಕೆಂಡ್ಗಳವರೆಗೆ ಇರಬೇಕು.
ಉಷ್ಟ್ರಾಸನ ಪ್ರಯೋಜನೆಗಳು
* ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗುತ್ತದೆ. ವಾಯು ಬಾಧೆ ಸಮಸ್ಯೆ, ಮಲಬದ್ಧತೆ, ಎದೆನೋವು ಇಲ್ಲವಾಗುತ್ತದೆ.
* ಮುಖದ ಕಾಂತಿ ಹೆಚ್ಚುತ್ತದೆ. ಶರೀರದ ಆಕಾರ ಸುಂದರವಾಗುತ್ತದೆ. * ಎದೆಯ ಭಾಗ ಹಿಗ್ಗುವುದರಿಂದ ಹೃದಯ ಬಡಿತ ಸರಿಯಾಗುವುದು. ಹೃದಯ ಬಲಿಶಾಲಿಯಾಗುವುದು, ಉಸಿರಾಟ ಸರಾಗವಾಗುವುದು. ಉಸಿರಾಟ ಮತ್ತು ಆಸ್ತಮ ಸಮಸ್ಯೆ ಇರುವವರಿಗೆ ಇದು ವರಪ್ರಸಾದವಾಗಿದೆ.
* ಪ್ರಸವದ ನಂತರ ಅರ್ಧ ಉಷ್ಟ್ರಸನ ಮಾಡಿದರೆ ಹಾಲಿನ ಉತ್ಪತ್ತಿ ಹೆಚ್ಚಾಗುವುದು. ಕ್ಷೀರ ಗ್ರಂಥಿಗಳು ಬಲಗೊಳ್ಳುತ್ತದೆ.
* ತೊಡೆ, ಕೈ, ಕುತ್ತಿಗೆ, ಬೆನ್ನು ಗಟ್ಟಿಯಾಗುವುವು. ಗಂಟಲು ನೋವು, ಗಡಸು ಧ್ವನಿ, ತಲೆನೋವು, ಅಜೀರ್ಣ ಮುಂತಾದವು ಣಮುಖವಾಗುತ್ತದೆ.
* ಮೂತ್ರಪಿಂಡ, ಯಕೃತ್, ಜಠರ, ಸ್ತ್ರೀಯರ ಗರ್ಭಧಾರಣ ಗ್ರಂಥಿ, ಗರ್ಭಾಶಯ ಪುರುಷರಲ್ಲಿ ಪ್ರೋಸ್ಟೇಟ್ ಇನ್ನೂ ಮುಂತಾದ ಅಂಗಾಗಳು ಚೈತನ್ಯಗೊಳ್ಳುತ್ತವೆ.
‘ನಿರ್ವೀರ್ಯ’ರಾಗುತ್ತಿದ್ದಾರೆ ಪುರುಷರು! ಯಾಕೆ ಗೊತ್ತೆ?
ಮುಂಬಯಿ : ಬದುಕಿನಲ್ಲಿ ಒತ್ತಡ ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ವಾತಾವರಣವಂತೂ ವಿಷಮಯವಾಗುತ್ತಿದೆ. ನಾವು ಸೇವಿಸುತ್ತಿರುವ ಇಂದಿನ 'ಹೈಬ್ರೀಡ್' ಆಹಾರ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತಿಲ್ಲ. ಆದರೆ 'ಮೈ ತೂಕ'ವನ್ನು ಮಾತ್ರ ಹೆಚ್ಚಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಪುರುಷರ ವೀರ್ಯದಲ್ಲಿ ವೀಯಾರ್ಣುಗಳ ಸಂಖ್ಯೆ ಕುಸಿಯುತ್ತಿದೆ. ಕೇವಲ 50 ವರ್ಷಗಳಲ್ಲಿ ಶೇ.50ರಷ್ಟು ವೀರ್ಯಾಣುಗಳ ಸಂಖ್ಯೆ ಕುಗ್ಗಿದೆ. ಮುಂದಿನ 50 ವರ್ಷಗಳಲ್ಲಿ ಗಂಡಸರ ವೀರ್ಯದಲ್ಲಿ ಗರ್ಭಕ್ಕೆ ಕಾರಣವಾಗುವಂತಹ ವೀರ್ಯಾಣುಗಳು ಇಲ್ಲವಾಗುತ್ತವೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾಗಿದೆ.
'ಕಳೆದ ಶತಮಾನದ 90ರ ದಶಕದಲ್ಲಿ ಪಶ್ಚಿಮ ದೇಶಗಳ ಗಂಡಸರಲ್ಲಿನ ವೀರ್ಯಾಣುಗಳು ಸಂಖ್ಯೆ ಕುಗ್ಗುತ್ತಿರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಭಾರತೀಯ ಪುರುಷರಲ್ಲೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಪ್ರತಿ ವರ್ಷ ಶೇ.2ರಷ್ಟು ವೀರ್ಯಾಣುಗಳ ಪ್ರಮಾಣ ಕಡಿಮೆಯಾಗುತ್ತಿದೆ. ಈ ಪ್ರಮಾಣ ಹೀಗೆಯೇ ಮುಂದುವರಿದರೆ ಮುಂದಿನ 50 ವರ್ಷಗಳಲ್ಲಿ ಸಂತಾನೋತ್ಪತ್ತಿ ಮಾಡಬಲ್ಲ ಪುರುಷರ ಸಂಖ್ಯೆ ಶೂನ್ಯ ಮುಟ್ಟುತ್ತದೆ' ಎಂದು ಡಾ.ಪಿ.ಎಂ.ಭಾರ್ಗವ ಹೇಳುತ್ತಾರೆ.
ಶೀಘ್ರದಲ್ಲೇ ಸಂವಿಧಾನದ ಅನುಮೋದನೆ ಪಡೆಯಲಿರುವ 'ಸಂತಾನೋತ್ಪತ್ತಿ ವಿಧಾನಗಳು' ಯೋಜನೆಯಲ್ಲಿ ಡಾ.ಭಾರ್ಗವ ಅವರು ಕಾರ್ಯ ನಿರ್ವಹಿಸಿದ್ದರು.
ಸ್ಕಾಟ್ಲೆಂಡ್ನ ಅಬರ್ದೀನ್ ಸಂತಾನೋತ್ಪತ್ತಿ ಕೇಂದ್ರಕ್ಕೆ 1989 ಹಾಗೂ 2002ರ ನಡುವೆ ಭೇಟಿ ನೀಡಿದ್ದ ಪುರುಷರ ವೀರ್ಯ ಪರೀಕ್ಷೆಯ ದಾಖಲಾತಿಗಳನ್ನು ಕೆಲವು ವರ್ಷಗಳ ಹಿಂದೆ ಅಧ್ಯಯನಕ್ಕೆ ಒಳಪಡಿಸಲಾಯಿತು. ವೀರ್ಯಾಣುಗಳ ಸಂಖ್ಯೆಯಲ್ಲಿ ಸರಾಸರಿ ಶೇ.30ರಷ್ಟು ಕುಸಿತ ಕಂಡು ಬಂದಿರುವುದು ಈ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಬೊಜ್ಜು, ಮದ್ಯಪಾನ, ಧೂಮಪಾನ, ಒತ್ತಡದ ಜೀವನ ಶೈಲಿ ಮುಂತಾದ ಅನೇಕ ಕಾರಣಗಳು ವೀರ್ಯಾಣು ಸಂಖ್ಯೆ ಕುಸಿತಕ್ಕೆ ಮೂಲವಾಗುತ್ತಿವೆ ಎಂದು ಡಾ.ಭಾರ್ಗವ ಹೇಳುತ್ತಾರೆ.
ಆದರೆ, ತಡವಾಗಿ ಮದುವೆಯಾಗುವುದು ಬಂಜೆತನಕ್ಕೆ ಮೂಲ ಕಾರಣ. ಈ ಸಮಸ್ಯೆ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಸಂಬಂಧ ಪಟ್ಟಿರುವಂತಹುದು ಎಂದು ಬಂಜೆತನ ತಜ್ಞ ಡಾ. ಅನಿರುದ್ಧ ಮಲ್ಪಾಣಿ ತಿಳಿಸುತ್ತಾರೆ.
ಒಂದು ಮಿಲಿ ಲೀಟರ್ ವೀರ್ಯದಲ್ಲಿ 11.3 ಕೋಟಿ ವೀರ್ಯಾಣುಗಳಿದ್ದರೆ ಒಳಿತು ಎಂದು ವಿಶ್ವ ಆರೋಗ್ಯಸಂಸ್ಥೆ(ಡಬ್ಲ್ಯುಎಚ್ಒ) 1950ರಲ್ಲಿ ಹೇಳಿತ್ತು. ಅದೇ ಸಂಸ್ಥೆ ಒಂದು ಮಿಲಿ ಲೀಟರ್ನಲ್ಲಿ 2 ಕೋಟಿ ವೀಯಾರ್ಣುಗಳಿದ್ದರೆ ಸಾಕು ಎಂದು ತನ್ನ ಅಂಕಿ ಸಂಖ್ಯೆಗಳನ್ನು 2009ರಲ್ಲಿ ಬದಲು ಮಾಡಿಕೊಂಡಿದೆ! ಅಷ್ಟರ ಪ್ರಮಾಣದಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಡಾ.ಅಂಜಲಿ ಮಲ್ಪಾಣಿ ಹೇಳುತ್ತಾರೆ.
'20 ವರ್ಷಗಳ ಹಿಂದೆ ಮುಂಬಯಿಯಲ್ಲಿ ವೀರ್ಯ ಬ್ಯಾಂಕ್ ಸ್ಥಾಪನೆ ಮಾಡಿದಾಗ ಎಲ್ಲರೂ ಮುಸಿ ಮುಸಿ ನಕ್ಕರು. ಮಡಿವಂತರಂತೂ ಬ್ಯಾಂಕಿನ ಕಡೆ ತಲೆಯಿಟ್ಟೂ ಮಲಗಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಪ್ರತಿದಿನ ಆರೇಳು ಜನ ಪುರುಷರು ವೀರ್ಯ ದಾನ ಮಾಡುತ್ತಿದ್ದಾರೆ. ಆದರೆ, ವೀರ್ಯ ನೀಡಲು ಬರುವ ಶೇ.70ರಷ್ಟು ಪುರುಷರ ವೀರ್ಯವನ್ನು ನಿರಾಕರಿಸಲಾಗುತ್ತಿದೆ. ಏಕೆಂದರೆ ಅವರ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಿರುತ್ತದೆ' ಎಂದು ಡಾ.ಅಂಜಲಿ ಹೇಳುತ್ತಾರೆ.
ವೀರ್ಯ ಬ್ಯಾಂಕಿನಲ್ಲಿ ವೀರ್ಯ ದಾನ ಮಾಡಲು ಬರುವವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಅಧಿಕ. ಅವರ ಖರ್ಚಿಗೆ 'ಪಾಕೆಟ್ ಮನಿ' ಗಿಟ್ಟಿಸಿಕೊಳ್ಳಲು ತಮ್ಮ ವೀರ್ಯವನ್ನು ಮಾರುತ್ತಾರೆ! ಆದರೆ ಅನೇಕ ವಿದ್ಯಾರ್ಥಿಗಳ ವೀರ್ಯದಲ್ಲಿ ವೀರ್ಯಾಣುಗಳ ಸಂಖ್ಯೆ ಸಂತಾನೋತ್ಪತ್ತಿಗೆ ಸಾಕಾಗುವಷ್ಟು ಇರುವುದಿಲ್ಲ.
ಅಂತೂ, ದಿನೇ, ದಿನೇ ಪುರುಷರು ಬಂಜೆತನದ ಅಂಚಿಗೆ ತಲುಪುತ್ತಿರುವುದು ಸುಳ್ಳಲ್ಲಾ.
Subscribe to:
Post Comments (Atom)
No comments:
Post a Comment