Tuesday, July 3, 2012

ಆರೋಗ್ಯ ಚಿಕಿತ್ಸೆ ನೀರಿನ ನಿಯಮ

ಆರೋಗ್ಯ ಚಿಕಿತ್ಸೆ ನೀರಿನ ನಿಯಮ ಅತಿ ಕಡಿಮೆ ಬೆಲೆಗೆ ದೊರೆಯುವಂತಹ ಔಷಧಿ ನೀರೇ. ನಿದ್ರಾಜನಕ, ಜ್ವರಹಾರಿ, ನೋವು ಶಾಮಕ, ಸೆಳವು ನಿರೋಧಕ, ಅರಿವಳಿಕೆ ಮುಂತಾದವು ಇದರ ಪ್ರಮುಖ ಚಿಕಿತ್ಸಕ ಗುಣಗಳು. ನೀರಿನ ಉಷ್ಣತೆ ಮತ್ತು ಚಿಕಿತ್ಸೆ ಅವಧಿಯ ಮೇಲೆ ಇದರ ಪರಿಣಾಮಗಳು ಮತ್ತು ಉಪಯುಕ್ತತೆ ಅವಲಂಬಿಸಿದೆ. ರನ್ನು ಚಿಕಿತ್ಸೆ ರೂಪದಲ್ಲಿ ಉಪಯೋಗಿಸಲು ಮೂರು ಮುಖ್ಯ ಅಂಶಗಳಿವೆ: * ಶಾಖ ಹೀರಿಕೊಂಡು ಸಂವಹನ ನೀಡುವುದು ಇದರ ಮಹಾನ್ ಶಕ್ತಿ. *ನೀರಿನ ದ್ರಾವಕ ಲಕ್ಷಣ. *ದ್ರವ, ಘನ, ಅನಿಲ ಯಾವುದೇ ರೂಪಕ್ಕೆ ಸುಲಭವಾಗಿ ಮಾರ್ಪಡಿಸಬಹುದಾದ ಅದರ ಗುಣ. ಜಲ ಚಿಕಿತ್ಸೆ: ಗಮನದಲ್ಲಿರಲಿ *ಜಲ ಚಿಕಿತ್ಸೆಗೆ ಶುದ್ಧ ನೀರನ್ನೇ ಉಪಯೋಗಿಸಬೇಕು. *ಒಂದು ಬಾರಿ ಚಿಕಿತ್ಸೆಗೆ ಬಳಸಿದ ನೀರನ್ನು ಮತ್ತೆ ಉಪಯೋಗಿಸಬಾರದು. *ನೀರಿನ ಉಷ್ಣಾಂಶ ಹಾಗೂ ಚಿಕಿತ್ಸೆ ಸಮಯವನ್ನು ಸರಿಯಾಗಿ ಗಮನಿಸಬೇಕು. *ಊಟದ ಒಂದು ಗಂಟೆ ಮುಂಚೆ ಅಥವಾ ಮೂರು ಗಂಟೆ ನಂತರದ ಸಮಯ ಚಿಕಿತ್ಸೆಗೆ ಸೂಕ್ತ. *ಅಶಕ್ತರು, ಏರು ರಕ್ತದೊತ್ತಡದವರು ಹಾಗೂ ಹೃದಯ ತೊಂದರೆ ಇರುವವರು ಅತಿ ಬಿಸಿ ಮತ್ತು ಅತಿ ತಣ್ಣನೆ ಚಿಕಿತ್ಸೆ ತೆಗೆದುಕೊಳ್ಳಬಾರದು. *ತಣ್ಣೀರು ಚಿಕಿತ್ಸೆಗಳ ನಂತರ ಕನಿಷ್ಟ 30 ನಿಮಿಷಗಳ ನಂತರವೇ ಸ್ನಾನ ಮಾಡಬೇಕು. *ಬಿಸಿ ನೀರಿನ ಚಿಕಿತ್ಸೆ ತೆಗೆದುಕೊಳ್ಳುವ ಮುಂಚೆ ಒಂದು ಆಥವಾ ಎರಡು ಗ್ಲಾಸ್ ತಣ್ಣೀರು ಕುಡಿಯಬೇಕು. *ತಣ್ಣೀರ ಚಿಕಿತ್ಸೆಗಳ ನಂತರ ಮೈ ಒರೆಸಿಕೊಂಡು ಸಾಧಾರಣ ವ್ಯಾಯಾಮ ಮಾಡುವುದು ಒಳ್ಳೆಯದು. *ಚಿಕಿತ್ಸಾ ಕೋಣೆಗಳು ಸರಿಯಾದ ಬೆಳಕು ಮತ್ತು ಶುಚಿತ್ವದಿಂದ ಕೂಡಿರಬೇಕು. *ಚಿಕಿತ್ಸಾ ಸಮಯದಲ್ಲಿ ಯಾವುದಾದರೂ ಪ್ರತಿಕೂಲ ಪರಿಣಾಮಗಳು ಕಂಡುಬಂದಲ್ಲಿ ಚಿಕಿತ್ಸೆ ನಿಲ್ಲಿಸಬೇಕು. ಪ್ರತಿಕೂಲ ಪರಿಣಾಮ ಜಲ ಚಿಕಿತ್ಸೆ ಸಂದರ್ಭದಲ್ಲಿ ಉಂಟಾಗುವ ಪ್ರತಿಕೂಲ ಪರಿಣಾಮಗಳು: *ಉಸಿರುಗಟ್ಟುವುದು * ರಕ್ತಸ್ರಾವ * ಹೆಪೊನಾಟ್ರೇಮಿಯಾ *ಸುಟ್ಟ ಗಾಯ * ಸೋಂಕು * ವಾಂತಿ *ಮೂರ್ಛೆ * ಎಡಿಯಾ * ತಲೆ ಸುತ್ತುವುದು *ಜ್ವರ * ನಡುಕ * ಉಬ್ಬಸ * ಡಾ. ಗಂಗಾಧರ ವರ್ಮ ಬಿ.ಆರ್. ಕಡು ಬೇಸಿಗೆ ಕಳೆಯುವುದು ಹೇಗೆ?*ಸರೋಜಾ ಆರ್.ವೈ. ಅಬ್ಬಾ ... ಬಿಸಿಲೆಂದರೆ ಗುಲ್ಬರ್ಗ, ವಿಜಾಪುರ, ರಾಯಚೂರಿಗೆ ಬಂದೇ ಅನುಭವಿಸಬೇಕು. ಮನೆ ಕಾದು ಕೆಂಡವಾಗಿರುತ್ತದೆ. ಮನೆಯೊಳಗಿನ ಪ್ರತಿ ಸಾಮಾನು ಚುರುಗುಡುತ್ತವೆ. ಮಹಡಿ ಮನೆಯಲ್ಲಿದ್ದವರ ಪಾಡು ದೇವರೇ ಬಲ್ಲ. ರಸ್ತೆಗಿಳಿದರೆ ಮೈಯೆಲ್ಲ ಉರಿ. ಕೆಲವರು ಸುಡುವ ಬಿಸಿಲಲ್ಲೂ ಬಿಸಿಲ್ಗುದುರೆ ನೋಡುತ್ತ ಟೋಪಿ, ಕೊಡೆ ಹಿಡಿಯದೇ ಓಡಾಡುತ್ತಾರೆ. ಮಕ್ಕಳಿಗೆ ರಜೆಯ ಮೋಜು. ಬಿಸಿಲಲ್ಲೇ ಆಡುತ್ತಾರೆ. ಕಲ್ಲು ಗಣಿ, ಕಟ್ಟಡ ಬಿಸಿಲಿನಲ್ಲಿ ಕೆಲಸ ಮಾಡುವವರ ಸ್ಥಿತಿ ಕೇಳವಂತಿಲ್ಲ. ಈಗಂತೂ ಉಷ್ಣತೆಯ ಹೆಚ್ಚಳದಿಂದ ಎಲ್ಲ ಕಡೆಗೂ ಬಿಸಿಲಿನ ತಾಪ ಜೋರು. ಹಾಗಾದರೆ ಇಂಥ ಕಡು ಬಿಸಿಲಿನಿಂದ ರಕ್ಷಣೆ ಪಡೆಯುವುದು ಹೇಗೆ? ಕೆಲವು ಉಪಾಯಗಳನ್ನು ಅನುಸರಿಸಿ ನೋಡಿ. *ಪ್ರಖರ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12ರಿಂದ ಸಂಜೆ 4ರ ನಡುವೆ ಸಾಧ್ಯವಾದಷ್ಟೂ ಹೊರಗಡೆ ಓಡಾಡಬಾರದು. ಹೊರ ಹೋಗಲೇಬೇಕಾದರೆ ಛತ್ರಿ ಆಶ್ರಯ ಪಡೆದುಕೊಳ್ಳಿ, ಮುಖಕ್ಕೆ ಸ್ಕಾರ್ಪ್ ಧರಿಸಿ. * ರೈತಾಪಿ ಜನ ಹಾಗೂ ಕೂಲಿ ಕಾರ್ಮಿಕರು ತೀರ ಬಿಸಿಲಲ್ಲಿ ತಮ್ಮ ಕೆಲಸಕ್ಕೆ ವಿರಾಮ ಕೊಡಬೇಕು. ಇಲ್ಲವಾದರೆ ಸನ್ಸ್ಟ್ರೋಕ್ ಆಗಬಹುದು. ತಲೆ-ಮೈ-ಕೈಗಳಿಗೆ ರಕ್ಷಣೆ ಇರಬೇಕು. *ಆಗಾಗ ಮರದ ನೆರಳಿನಲ್ಲಿ ವಿಶ್ರಮಿಸಬೇಕು. ಮೇಲಿಂದ ಮೇಲೆ ಸಾಕಷ್ಟು ನೀರು ಕುಡಿಯಬೇಕು. * ತೀವ್ರ ಹಸಿದು ಲಸ ಮಾಡಬಾರದು. * ಇಟ್ಟಂಗಿ ಭಟ್ಟಿ, ಕಬ್ಬಿನ ಗಾಣ ಹೀಗೆ ಬೆಂಕಿ ಸಮೀಪ ಕೆಲಸ ಮಾಡುವವರು ವೈಯಕ್ತಿಕ ರಕ್ಷಣೆ ಬಗ್ಗೆ ಜಾಗೃತಿ ವಹಿಸಬೇಕು. *ಉರಿ ಮೂತ್ರವಿದ್ದರೆ ಬೆಲ್ಲದ ಪಾನಕ ಅತ್ಯುತ್ತಮ. ಹಣ್ಣಿನ ರಸ, ಲಿಂಬೆ ಪಾನಕ, ಸಾಕಷ್ಟು ನೀರು ಸೇವನೆ ಕಡ್ಡಾಯ. * ಶುದ್ಧ , ತಂಪು ನೀರು ಸೇವನೆ ಅಗತ್ಯ. ಅತೀ ತಂಪು ನೀರು ಬೇಡ. ಹೊರಗಡೆ ಸಿಕ್ಕ ಕಡೆ, ಅಪರಿಚಿತ ಜಾಗದಲ್ಲಿದ್ದ ನೀರು ಕುಡಿಯುವಾಗ ಚಿಸಿ. * ಕಚೇರಿ, ಪ್ರವಾಸ, ಮಾರ್ಕೆಟ್ ಎಲ್ಲೇ ಹೋದರೂ ನೀರಿನ ಬಾಟಲ್ಗಿಂತ ತತ್ರಾಣಿ ಇಲ್ಲವೆ ಕ್ಯಾನ್ ಜತೆಗೆ ಒಯ್ಯಲೇಬೇಕು. * ವೃದ್ಧರು, ಮಕ್ಕಳು, ಗರ್ಭೀಣಿಯರು ಹಾಗೂ ರೋಗಿಗಳು ಮಧ್ಯಾಹ್ನ ಹೊರಗೆ ಓಡಾಡಬಾರದು. *ಬಿಸಿಲಲ್ಲಿ ಮಕ್ಕಳು ಆಟವಾಡದಂತೆ ಎಚ್ಚರ ವಹಿಸಬೇಕು. * ಹೆಚ್ಚು ಹಣ್ಣು , ತರಕಾರಿ ಒಳಗೊಂಡ ಸರಳ ಸಸ್ಯಹಾರ ಉತ್ತಮ. *ಅತಿ ಸಣ್ಣ ಮಕ್ಕಳಿಗೆ ಬೆವರಸಾಲೆ ತಡೆಗೆ ತಣ್ಣೀರು ಸ್ನಾನ, ತೆಳುವಾದ ಕಾಟನ್ ಬಟ್ಟೆ ಹಾಕಿ. ಸ್ವಚ್ಛತೆ ಕಾಪಾಡಿ. * ಅತಿ ಹುಳಿ, ಮಸಾಲೆಯುಕ್ತ, ಖಾರ, ಉಪ್ಪಿನ, ಕರಿದ ಪದಾರ್ಥ, ಸಿಹಿ ಹಾಗೂ ಜಿಡ್ಡಿನ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು. * ಸಿಹಿ ಬೇಕೆಂದರೆ ಹೆಸರು ಬೇಳೆಯ ಪಾಯಸ ಆರೋಗ್ಯಕರ. ಎಳನೀರು ಸೇವೆನೆ ಹಿತ. ಅತಿ ಚಹಾ, ಕಾಫಿ ಒಳ್ಳೆಯದಲ್ಲ. *ಹೊಟ್ಟೆ ಬಿರಿಯುವಂತೆ ತಿನ್ನಬಾರದು. ರಾತ್ರಿ ಊಟ ಸರಳವಾಗಿರಬೇಕು. ಪೌಷ್ಟಿಕ ಆಹಾರದಿಂದ ಕೂಡಿರಬೇಕು. ಮಾಂಸಾಹಾರ ಸೇವೆನೆಯಲ್ಲಿ ಮಿತಿ ಇರಲಿ. * ಊಟದಲ್ಲಿ ಅಂಬಲಿಯಂಥ ದ್ರವ ಪದಾರ್ಥ ಸಾಕಷ್ಟು ಇರಬೇಕು. ಬೆಣ್ಣೆ-ತುಪ್ಪಕ್ಕಿಂತ ಹಾಲು-ಮೊಸರು-ಮಜ್ಜಿಗೆ ಹಿತ. * ತಾಜಾ-ತಿಳಿ ಮಜ್ಜಿಗೆ ಸಾಕಷ್ಟು ಸೇವಿಸುವುದು ಒಳ್ಳೆಯದು. * ಬಿಸಿಲಿನ ಬೇಗೆ ನೀಗುವ ನೆಪದಲ್ಲಿ ಕೋಲಾದಂತಹ ಸಾಫ್ಟ್ ಡ್ರಿಂಕ್ಸ್ ಸೇವನೆ ಬೇಡ. * ದಿನಕ್ಕೆ ಒಮ್ಮೆಯಾದರೂ ಉಪ್ಪು ಮಿಶ್ರಿತ ಲಿಂಬೆ ಹಣ್ಣಿನ ಪಾನಕ ಸೇವಿಸುವುದು ಆರೋಗ್ಯಕರ. ಐಸ್ಕ್ರಿಂ ಸೇವೆನೆಯಲ್ಲಿ ಮಿತಿ ಇರಲಿ. * ಬೀರ್ ದೇಹವನ್ನು ತಂಪಾಗಿಸುತ್ತದೆ, ದಣಿವಾರಿಸುತ್ತದೆ ಎಂಬುದು ಭ್ರಮೆ. ಧೂಮಪಾನ, ಮದ್ಯಪಾನ ಸೇವನೆಯನ್ನು ಬಿಡಲೇಬೇಕು. * ಹತ್ತಿ ನೂಲಿನಿಂದ ತಯಾರಿಸಿದ ತೆಳು, ಸಡಿಲ ಬಟ್ಟೆ ಧರಿಸಬೇಕು. ಉಲ್ಲನ್, ಟೆರಿಲಿನ್, ಟೆರಿಕಾಟ್ನಂಥ ಸಿಂಥೆಟಿಕ್ ಬಟ್ಟೆಗಳು ಹಾಗೂ ಕಡುಗಪ್ಪಿನ ಬಟ್ಟೆ ಬೇಡ. *ಪಾದಗಳ ಉರಿತವಿದ್ದರೆ 20 ನಿಮಿಷವರೆಗೆ ನೀರಿನ ಬಕೆಟ್ನಲ್ಲಿ ಕಾಲಿರಿಸಿ ಕುಳಿತುಕೊಳ್ಳಬೇಕು. ತಲೆ ಮತ್ತು ಪಾದಕ್ಕೆ ತೆಂಗಿನೆಣ್ಣೆ ಇಲ್ಲವೆ ಹರಳೆಣ್ಣಿ ಉಚ್ಚಬೇಕು. * ನಿದ್ರೆ ಬಾರದಿದ್ದರೆ ಎಣ್ಣೆ ಮಸಾಜ್ ಹಾಗೂ ಸ್ನಾನ ಉತ್ತಮ. * ಚರ್ಮದ ಪಾದರಕ್ಷೆ ಹಾಗೂ ತಂಪು ಕನ್ನಡಕ ಬಳಸುವುದು ಹಿತ. *ತಣ್ಣೀರು ಸ್ನಾನ ಒಳ್ಳೆಯದು. ಆಗಾಗ್ಗೆ ಕೈ-ಕಾಲು-ಮುಖ ತೊಳೆದುಕೊಳ್ಳುತ್ತಿರಬೇಕು. ಸಾಧ್ಯವಾದರೆ ಎರಡು ಹೊತ್ತು ಸ್ನಾನ ಮಾಡುವುದು ಒಳಿತು. * ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಪ್ರಖರ ಬಿಸಿಲು ಒಳಬಾರದಂತೆ ತಂಪಾಗಿರಿಸಿಕೊಳ್ಳಬೇಕು. * ಮನೆಯಲ್ಲಿ ಯಾರಿಗಾದರೂ ವಾಂತಿ-ಭೇದಿ ಉಂಟಾದರೆ ತಕ್ಷಣವೇ ಜೀವ ಜಲ ಉಪಚಾರ ಪ್ರಾರಂಭಿಸಿ, ವೈದ್ಯರನ್ನು ಕಾಣಿ. * ಸೂರ್ಯನ ಪ್ರಖರ ಬಿಸಿಲಿಗೆ 15 ನಿಮಿಷಗಳಿಗಿಂತಲೂ ಹೆಚ್ಚು ನಿರಂತರವಾಗಿ ಮುಖ ಅಥವಾ ಮೈಯೊಡ್ಡಿದರೆ ಚರ್ಮ ಸುಡುವ ಅಥವಾ ಕಪ್ಪಾಗುವ ಸಾಧ್ಯತೆ ಇರುತ್ತದೆ. ತ್ವಚೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. *ವ್ಯಾಯಾಮ, ವಾಕ್ಗಳನ್ನು ಬೆಳಗ್ಗೆ 6 ಗಂಟೆಯೊಳಗೆ ಮುಗಿಸಿರಬೇಕು.

No comments: