Tuesday, July 3, 2012

ವಾಸ್ತು : ವಕ್ಷ ಸಂಪತ್ತು

ವಾಸ್ತು : ವಕ್ಷ ಸಂಪತ್ತು * ಜೆ.ಕೆ.ಜೈನ್ ಸಸ್ಯ ಶ್ಯಾಮಲೆ ಈ ವಸುಂಧರೆ. ಆಕೆಗೆ ಹಸಿರೇ ಉಸಿರು. ಹಸಿರಿಲ್ಲದಿದ್ದರೆ ಈ ಜಗತ್ತಿನ ಹೆಸರೇ ಇಲ್ಲ. ಭೂತಾಯಿ ಹಸಿರನ್ನೆ ಹೊದ್ದು ಮಲಗಿದವಳು. ಪ್ರಪಂಚದ ಎಲ್ಲ ಮತ ಧರ್ಮಗಳು ಜಾತಿ ಪಂಗಡಗಳು ಮರಗಿಡಗಳನ್ನು ಸಮದ್ಧಿಯ ಸಂಕೇತವಾಗಿ ಬಿಂಬಿಸಿಕೊಂಡಿವೆ. ನವಗ್ರಹಗಳು ಕೂಡಾ ವಿವಿಧ ವಕ್ಷಗಳಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡಿವೆ. ಈ ಮರಗಿಡ ಬಳ್ಳಿಗಳಿಂದ ದೊರಕುವ ಆಮ್ಲಜನಕವೇ ಎಲ್ಲಾ ಜೀವಜಂತುಗಳ ಪ್ರಾಣವಾಯು. ಇದು ಇಲ್ಲವಾದರೆ ಮಾನವ ಸಮೇತನಾಗಿ ಯಾವ ಪ್ರಾಣಿಪಕ್ಷಿಗಳೂ ಉಳಿಯಲಾರವು. ಇದನ್ನೆ ಹಸಿರುಮನೆ ಪ್ರಭಾವ ಎಂದು ಕರೆಯುವುದು. ಇಂತಹ ವಕ್ಷಸಂಕುಲ ವಾಸ್ತು ಶಾಸ್ತ್ರದಲ್ಲಿ ತನ್ನದೇ ಆದ ಅಸ್ತಿತ್ವ ಪಡೆದುಕೊಂಡಿದೆ. ಎಲೆ ಇಲ್ಲದ ಮರ ಅಸ್ಥಿಪಂಜರಕ್ಕೆ ಸಮ. ಇಂತಹ ಯಾವುದೇ ಒಣಗಿದ ಮರಗಿಡಗಳನ್ನು ಅಲಂಕಾರಕ್ಕಾಗಿ ಮನೆಯಲ್ಲಿ ಇಟ್ಟುಕೊಳ್ಳಬಾರದು. ಅದು ಸೂತಕದ ಛಾಯೆಯನ್ನು ಬೀರುವುದು. ದಾರಿದ್ರ್ಯವನ್ನು ಆಹ್ವಾನಿಸುವುದು. ಕೆಲವೊಮ್ಮೆ ಮನೆಯವರ ಚಿತ್ತಭ್ರಮಣೆಗೂ ಕಾರಣವಾದೀತು. ಆದ್ದರಿಂದ ಒಣಗಿದ, ಸುಟ್ಟ, ಸಿಡಿಲು ಬಡಿದ ಬೇರುಮಾತ್ರ ಇರುವ, ಸ್ಮಶಾನದಲ್ಲಿ ಬೆಳೆದ, ರೋಗಿಯಿಂದ ಕೊಡಲ್ಪಟ್ಟ ಮಾರ್ಗದ ಬದಿಯಲ್ಲಿ ಬೆಳೆದ ಗಿಡಮರಗಳನ್ನು ಮನೆಯಲ್ಲಾಗಲಿ, ಮನೆಯ ಆವರಣದಲ್ಲಾಗಲಿ ಇಟ್ಟು ಕೊಳ್ಳಬಾರದು. ಬೆಳೆಸಲೂ ಬಾರದು. ಇದ್ದಲ್ಲಿ ಕೂಡಲೆ ತೆಗೆದು ಬಿಡಬೇಕು. ತರಕಾರಿ ಕೆತೋಟವನ್ನು ನಿವೇಶನದ ವಾಯುವ್ಯದಲ್ಲಿ ಬೆಳೆಸಬೇಕು. ದೊಡ್ಡ ಗಾತ್ರದ ಮರಗಳನ್ನು ಆವರಣದ ದಕ್ಷಿಣ ಪಶ್ಚಿಮದಲ್ಲಿ ಬೆಳೆಸಬಹುದು. ಸಣ್ಣಗಾತ್ರಕ್ಕೆ ಬೆಳೆಯುವ ಗಿಡಬಳ್ಳಿಗಳನ್ನು ಉತ್ತರ ಪೂರ್ವದಲ್ಲಿ ನೆಟ್ಟು ಸಾಕುವುದು ಶುಭದಾಯಕ. ಸುತ್ತು ಮನೆಯ ಒಳಭಾಗದ ಅಂಗಳದಲ್ಲಿ ಯಾವುದೇ ಗಿಡಮರಗಳನ್ನು ನೆಟ್ಟು ಬೆಳೆಸಬಾರದು. ಆದರೆ ಹೂವಿನ ಕುಂಡ(ಚಟ್ಟಿ )ಗಳನ್ನು ಇಟ್ಟುಕೊಳ್ಳಬಹುದು. ದಿನಪೂರ್ತಿ ಮನೆಯ ನಾಲ್ಕು ಸುತ್ತಲೂ ಯಾವುದೇ ಮರಗಿಡಗಳ ನೆರಳು ಬೀಳಬಾರದು. ಒಂದು ವೇಳೆ ಬಿದ್ದಲ್ಲಿ ಇಂತಹ ಮನೆಯನ್ನು ತ್ಯಾಗಿ ನಿವಾಸಕ್ಕೆ ಬಳಸಬಹುದು. ಆದರೆ ಸಂಸಾರಿಗಳು ಖಂಡಿತ ವಾಸಮಾಡಬಾರದು. ಮರಗಿಡಗಳು ಮನೆ ನಿವೇಶನದಲ್ಲಿ ಸಮ ಸಂಖ್ಯೆಯಲ್ಲಿ ಇರಬೇಕು. ಆಲ, ಅತ್ತಿ, ಅಶ್ವತ್ಥ ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು. ತಾಳೇಮರ ಹುಣಸೇಹುಳಿ ಮರ ಮನೆ ಹತ್ತಿರ ಇರಬಾರದು. ಅವು ದುಷ್ಟ ಶಕ್ತಿಗಳ ಆವಾಸ ಸ್ಥಾನ ಎಂಬ ನಂಬಿಕೆ ಇದೆ. ವೀಳ್ಯ , ಪುನ್ನಾಹ , ಜಾಜಿ ಮಲ್ಲಿಗೆ , ಗಂಧ ಚಂದನ ಕರ್ಪೂರ ಹಾಗೂ ಅಣಿಲೆ ಗಿಡಮರಗಳು ಅಭಿವದ್ಧಿ ಸೂಚಕವಾದವುಗಳು. ಕೆಂಪು ದಾಸವಾಳದ ಹೂವಿನ ಗಿಡವನ್ನು ಆಗ್ನೇಯದಲ್ಲಿ ಬೆಳೆಸಬಾರದು. ತುಂಬ ಗೆಲ್ಲುಗಳು, ಸದಾ ಹಸಿರೆಲೆ ಇರುವ ಮರ ಅಭಿವದ್ಧಿ ಸೂಚಕ . ಮನೆಯ ಒಳಗೆ ಇಟ್ಟುಕೊಳ್ಳುವ ಚಟ್ಟಿಯ ಗಿಡಬಳ್ಳಿಗಳಲ್ಲಿ ಉರುಟು ಆಕಾರದ ಎಲೆಗಳಿರಬೇಕು. ಇದರಿಂದ ಸಂಸಾರದಲ್ಲಿ ಉಂಟಾಗಬಹುದಾದ ತಾಕಲಾಟ ಕಿತ್ತಾಟಗಳು ತಪ್ಪಿ ಹೋಗುವುದು. ಚೂಪಾದ ಎಲೆಗಳಿದ್ದರೆ ನಿವಾಸಿಗಳ ಸಾಮರಸ್ಯ ಕೆಡಿಸುವುದು. ಇಷ್ಟೊಂದು ಶುಭ ಪರಿಣಾಮ ಬೀರುವ ಸಸ್ಯ ಸಂಕುಲಕ್ಕೆ ಮತ್ತು ವಕ್ಷ ಸಂಪತ್ತಿಗೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಕ್ಷಮಯಾಧರಿತ್ರಿ ಎಂಬ ಖ್ಯಾತಿ ಪಡೆದಿರುವ ಭೂಮಿತಾಯಿ ಪಚ್ಚೆ ಪಟ್ಟೆಯನ್ನುಟ್ಟು ಸುರ ಸುಂದರಿಯೂ ಸಕಲ ಜೀವಕೋಟಿಯ ಮಮತೆಯ ಮಾತೆಯೂ ಆಗಿದ್ದಾಳೆ. ಆಕೆಯನ್ನು ಭಕ್ತಿಗೌರವಗಳಿಂದ ಪೂಜಿಸುವ ಭಾಗ್ಯ ನಮ್ಮದಾಗಬೇಕು. ನಿವೇಶನ ಖಾಲಿ ಇದ್ದರೆ ..! ನಿವೇಶನ ಬಹಳ ಸಮಯ ಖಾಲಿ ಇದ್ದು ಮನೆ ಕಟ್ಟಲು ಎಡರುತೊಡರುಗಳು ಒದಗಿಬರುತ್ತಿದ್ದರೆ ಈ ರೀತಿಯಾಗಿ ಪರಿಹರಿಸಿಕೊಳ್ಳಬಹುದು. ಆವರಣದ ಪಶ್ಚಿಮ ಭಾಗದಲ್ಲಿ ಪೂರ್ವಾಮುಖವಾಗಿ ಒಂದು ಚಿಕ್ಕ ಕಟ್ಟೆ ಕಟ್ಟಿ. ಅದರಲ್ಲಿ ಒಂದು ದಾಳಿಂಬೆ ಗಿಡ ನೆಟ್ಟು ನಿತ್ಯ ಪೂಜಿಸಿ. ಹೀಗೆ ಮಾಡುತ್ತಿದ್ದರೆ ಮನೆಕಟ್ಟುವ ಯೋಗ ಆದಷ್ಟು ಬೇಗ ಕೂಡಿಬರುವುದು. ಶೀಘ್ರ ಲಕ್ಷ್ಮೀ ಪ್ರಾಪ್ತಿ ಆಗುವುದು. ವಕ್ಷ ಪೂಜೆಯಿಂದ ವಂಶ ವದ್ಧಿಸುವುದು. ನೆನಪಿರಲಿ *ಕಳ್ಳಿ, ನುಗ್ಗೆ, ಮುಳ್ಳಿರುವ, ಹಾಲುಸುರಿಸುವ ಅಥವಾ ಹಸಿರು ಬಣ್ಣವೇ ಇಲ್ಲದ, ಬಹಳ ಕಡಿಮೆ ಎಲೆ ಇರುವ ಸಸ್ಯ ಸಂತತಿ ಮನೆಯ ಹತ್ತಿರ ಬೆಳೆಸಬಾರದು. *ಬಹಳ ಉತ್ಕೃಷ್ಟ ಜಾತಿಗೆ ಸೇರಿದ ಹಲಸು, ನಿಂಬೆ ಜಾತಿಯ ಗಿಡಮರ ಇರಬಹುದು. *ಮನೆಯ ಪೂರ್ವಕ್ಕೆ ಹಲಸಿನ ಗಿಡ, ಪಶ್ಚಿಮಕ್ಕೆ ತೆಂಗಿನಗಿಡ, ಉತ್ತರಕ್ಕೆ ಮಾವಿನ ಗಿಡ, ದಕ್ಷಿಣಕ್ಕೆ ಅಡಿಕೆ ಗಿಡ ಎರಡರಂತೆ ನೆಟ್ಟು ಬೆಳೆಸಿದರೆ ಆ ಮನೆಗೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಮಾಟಮಂತ್ರ ಪ್ರಯೋಗ ನಡಿಯೋದಿಲ್ಲ. * ಈಶಾನ್ಯದಲ್ಲಿ ದರ್ಬೆಹುಲ್ಲು ಬೆಳೆಸಬೇಕು. ಬಿಲ್ವವಕ್ಷ ಪೂರ್ವದಲ್ಲಿದ್ದರೆ ಸಂಪತ್ತು ವದ್ಧಿಸುವುದು. *ನೆಲ್ಲಿಕಾಯಿ ಮರವನ್ನು ವಿಷ್ಣುವಿನ ಸನ್ನಿ ಎಂದು ನಂಬಲಾಗಿದೆ. ಇದನ್ನು ಉತ್ತರದಲ್ಲಿ ಬೆಳೆಸಬೇಕು. *ತುಂಬೆಹೂವು ಮನೆ ಆವರಣದಲ್ಲಿ ಬೆಳೆಸಿದರೆ ಶಿವಾನುಗ್ರಹ ಪ್ರಾಪ್ತಿ ಆಗುವುದು. *ತುಳಸಿಗಿಡ, ಕಾಮಕಸ್ತೂರಿಗಿಡ ಮಾನಸಿಕ ನೆಮ್ಮದಿಯನ್ನು ದಯಪಾಲಿಸುವುದು. ಅವುಗಳನ್ನು ಹಾದು ಬರುವ ಗಾಳಿ ಸೇವಿಸುವುದರಿಂದ ಮನೋರೋಗಿಗಳು ಗುಣಮುಖರಾಗುವರೆಂದು ಹೇಳಲಾಗಿದೆ. ಕಡಿಮೆ ಖರ್ಚಿನಲ್ಲಿ ಗಿಡಗಳ ಅಲಂಕಾರ * ಪಾವನಾ ಡಿ.ಆಚಾರ್ಯ, ಕೋಟೆಕಾರ್ ನಮಗೆ ಸುಲಭವಾಗಿ ಸಿಗುವ ಅಂದರೆ ಮಲ್ಲಿಗೆ, ಗುಲಾಬಿ, ದಾಸವಾಳ, ಸೇವಂತಿಗೆ ಮತ್ತಿತರ ಸಣ್ಣಪುಟ್ಟ ಹೂಗಳ ಅಥವಾ ಇತರ ಕ್ರೋಟನ್ ಗಿಡಗಳನ್ನು ಓರಣವಾಗಿ ಜೋಡಿಸಿ ನೆಡಬೇಕು. ಮನೆಯೆಂದರೆ ಹೀಗೇ ಇರಬೇಕು, ವಿಭಿನ್ನವಾಗಿರಬೇಕು ಎಂದು ಅನಿಸುವುದು ಸಹಜ. ಅದ್ಭುತ ದೀಪಗಳು, ಉತ್ತಮವಾದ ಕೆತ್ತನೆ, ಶಿಲ್ಪಗಳಿಂದಲೋ ಮನೆ ಗಮನ ಸೆಳೆಯುವಂತಿದ್ದರೆ ಅದಕ್ಕೆಲ್ಲಾ ತುಂಬಾ ಖರ್ಚಾಗುತ್ತದೆ ಎಂದು ಅನಿಸುವುದು ಸಹಜ. ಆದರೆ ಸಣ್ಣ ಮನೆಯಾದರೂ ಸರಿ ಅದನ್ನು ನಾವು ಅಲ್ಪ ಖರ್ಚಿನಲ್ಲಿ ಅದ್ಭುತವಾಗಿ ಅಲಂಕರಿಸಬಹುದು. ವಿದ್ಯತ್ ದೀಪ ಕುಸುರಿ ಕೆತ್ತನೆಗಳಿಂದ ಮಾತ್ರವಲ್ಲದೆ ಸಣ್ಣ ಪುಟ್ಟ ಹೂವಿನ ಗಿಡಗಳಿಂದಲೂ ಕೂಡ ಮನೆಯ ಸೌಂದರ್ಯ ಹೆಚ್ಚಿಸಬಹುದು. ಈ ಮಳೆಗಾಲದಲ್ಲಿ ಕಡಿಮೆ ಖರ್ಚಿನಲ್ಲೇ ಮನೆಯನ್ನು ಉತ್ತಮವಾಗಿ ಸಜ್ಜುಗೊಳಿಸಬಹುದು. ಮನೆಯಂಗಳದಲ್ಲಿ ಹುಲ್ಲು ಅಥವಾ ಲಾನ್ಗಳನ್ನು ಬೆಳೆಸಿ, ಮನೆ ಸುತ್ತಲೂ ಹೂವಿನ ಗಿಡಗಳನ್ನು ಬೆಳೆಸಿ ಕೈತೋಟ ಮಾಡಬಹುದು. ಮನೆಯ ಮುಂದೆ ಬೆಳೆಸಲು ದುಬಾರಿ ಗಿಡಗಳೇ ಆಗಬೇಕೆಂದಿಲ್ಲ. ನಮಗೆ ಸುಲಭವಾಗಿ ಸಿಗುವ ಅಂದರೆ ಮಲ್ಲಿಗೆ, ಗುಲಾಬಿ, ದಾಸವಾಳ, ಸೇವಂತಿಗೆ ಮತ್ತಿತರ ಸಣ್ಣಪುಟ್ಟ ಹೂಗಳ ಅಥವಾ ಇತರ ಕ್ರೋಟನ್ ಗಿಡಗಳನ್ನು ಓರಣವಾಗಿ ಜೋಡಿಸಿ ನೆಡಬೇಕು. ಮಳೆಗಾಲದಲ್ಲಿ ಸರಿಯಾಗಿ ನೀರು ದೊರಕುವುದರಿಂದ ಮಳೆಗಾಲ ಮುಗಿಯುವ ವೇಳೆಗೆ ಹೂವು ಅರಳಿ ನಿಂತು ನಯನ ಮನೋಹರವಾಗಿ ಕಾಣುತ್ತದೆ. ಹಾಗೂ ಮನೆಯ ಆಕರ್ಷಣೆಯೂ ಕೂಡ ಹೆಚ್ಚಾಗುತ್ತದೆ. ಆದರೆ ಗಿಡಗಳನ್ನು ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡದೆ ಆಗಾಗ ಕತ್ತರಿಸುತ್ತಿರಬೇಕು. ಹಾಗೆಯೇ ಹುಲ್ಲು ಗಿಡಗಳನ್ನು ವಿವಿಧ ಆಕಾರದಲ್ಲಿ ಕತ್ತರಿಸಿದರೆ ಹೂದೋಟದ ಸೌಂದರ್ಯ ವರ್ಧನೆಗೂ ಸಹಕಾರಿ. ಈ ರೀತಿ ಮನೆಯನ್ನು ಗಿಡಗಳಿಂದ ಸಿಂಗರಿಸಿದರೆ ಮನೆಯ ಒಳಗೂ ಹೊರಗೂ ನಮಗೆ ಉತ್ತಮವಾದ ಆಮ್ಲಜನಕ ದೊರೆಯುತ್ತದೆ. ಆದರೆ ಗಿಡಗಳ ಸಂರಕ್ಷಣೆಯನ್ನೂ ಕೂಡ ಅದೇ ರೀತಿಯಾಗಿ ಮಾಡಬೇಕು. ಗಿಡಗಳಿಗೆ ಸರಿಯಾದ ಗಾಳಿ-ಬೆಳಕು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಅದಕ್ಕೆ ಸರಿಯಾಗಿ ನೀರು, ಫಲವತ್ತಾದ ಮಣ್ಣು ಹಾಕಿ ಪೋಷಿಸಿದರೆ ಮನೆಯ ಸೌಂದರ್ಯದ ಜೊತೆಗೆ ದೇಹದ ಆರೋಗ್ಯವೂ ಕೂಡ ಹೆಚ್ಚುತ್ತದೆ. ಇದಕ್ಕೆಲ್ಲಾ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಸುತ್ತಮುತ್ತಲೂ ಸಾಮಾನ್ಯವಾಗಿ ಕಾಣಸಿಗುವ ಹೂವಿನ ಗಿಡಗಳಿಂದ, ಕ್ರೋಟನ್ ಗಿಡಗಳಿಂದ ಹಾಗೂ ಅಲಂಕಾರಿಕ ಗಿಡಗಳಿಂದ ಇದೆಲ್ಲಾ ಸಾಧ್ಯವಾಗಿದೆ. ಶ್ರೀಮಂತರಿಗೆ ಮಾತ್ರ ಮನೆಯನ್ನು ಆಧುನಿಕವಾಗಿರಿಸಲಿ ಸಾಧ್ಯ ಎಂಬುದರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಮಗೆ ಸ್ವಾಭಾವಿಕವಾಗಿ ಸಿಗುವ ವಸ್ತು ಗಳಿಂದಲೇ ಕಡಿಮೆ ಖರ್ಚಿನಲ್ಲಿ ಮನೆಯ ಸೌಂದರ್ಯವನ್ನು ದ್ವಿಗುಣಗೊಳಿಸಲು ಸಾಧ್ಯವೆಂಬುದನ್ನು ಅರಿತುಕೊಳ್ಳಬೇಕು. ಗಿಡಗಳ ಶೃಂಗಾರ ವಿಧಾನಗಳು * ಮನೆಯ ವೆರಾಂಡದಲ್ಲಿ ಸಣ್ಣಗಿಡಗಳ ಕುಂಡಗಳನ್ನು ಓರಣವಾಗಿ ಜೋಡಿಸಿದರೆ ವೆರಾಂಡದ ಕಳೆ ಹೆಚ್ಚುತ್ತದೆ. * ಮನೆಯ ಎದುರಿನ ಸೂರಿನ ಮೇಲೆ ಸಣ್ಣ ತೂಗುವ ಕುಂಡಗಳಲ್ಲಿ ಸಣ್ಣ ಸಣ್ಣ ಹೂವಿನ ಗಿಡಗಳನ್ನು ನೆಟ್ಟು ನೇತು ಹಾಕಿದರೆ ಸೌಂದರ್ಯ ಹೆಚ್ಚುತ್ತದೆ. * ಮನಿಪ್ಲಾಂಟ್ ಬಳ್ಳಿಯನ್ನು ಮನೆಯೆದುರಿನ ಮಾಡಿನ ಮೇಲೆ ಒಂದು ಬದಿಯಿಂದ ಇನ್ನೊಂದು ಬದಿಗೆ ಬಿಟ್ಟರೆ ಅದು ಕಮಾನಿನಂತೆ ತೋರುತ್ತದೆ. * ಮನೆಯೆದುರಿನ ಮೆಟ್ಟಿಲುಗಳಲ್ಲಿ ಅಲಂಕಾರಿಕ ಗಿಡಗಳ ಕುಂಡಗಳನ್ನು ಜೋಡಿಸಿಟ್ಟರೆ ಮನೆಯ ಮುಂಭಾಗವೂ ಸುಂದರವಾಗಿ ಕಾಣುತ್ತದೆ. * ಮನೆಯ ಒಳಗೆ ಮೂಲೆಗಳಲ್ಲಿ ಸಾಧಾರಣ ಎತ್ತರದ ಅಲಂಕಾರಿಕ ಗಿಡದ ಕುಂಡವನ್ನು ಬೆಳೆಸಬಹುದು. * ಪ್ರತಿ ಕಿಟಕಿಗಳ ಮೂಲೆಯಲ್ಲಿ ಒಂದೊಂದು ಹೂದಾನಿಗಳನ್ನು ಇಡಿ. ಆ ಹೂದಾನಿಗಳು ಅಥವಾ ಗಿಡಗಳು ದುಬಾರಿಯಾಗಿರಬೇಕೆಂದೇನಿಲ್ಲ. * ಪ್ರತಿ ಕೋಣೆಯ ಬಾಗಿಲಿನ ಸಮೀಪ ಯಾವುದಾದರು ಕುಂಡಗಳನ್ನು ಜೋಡಿಸಿದರೆ ಒಳಾಂಗಣ ಆಕರ್ಷಕ ಹಾಗೂ ಆಧುನಿಕವಾಗಿಯೂ ಕಾಣುತ್ತದೆ.

No comments: